ಭಾಗ 280
ಒಂಬತ್ತು ವರ್ಷದ ಬಳಿಕ ಅತ್ತಿಗೆಯ ಮಡಿಲಲ್ಲಿ ಮಲಗಿರೋದು ಜ್ಯೋತಿಗೊಂದು ರೀತಿಯ ಸಮಾಧಾನ ನೀಡುತ್ತಿದ್ದರೆ ಮನೆಯ ಪ್ರತಿಯೊಬ್ಬ ಸದಸ್ಯರ ಆಪ್ತತೆ ಮತ್ತು ಪ್ರೀತಿಯಿಂದ ಪ್ರಶಾಂತ್ ಕೂಡ ತಾನಿಲ್ಲಿಗೆ ಹೊಸಬನೆಂಬ ಭಾವನೆ ಮೂಡದಂತಾಗಿತ್ತು.
ಅಶೋಕ.......ನೀತು ಇವರನ್ಯಾವಾಗ ಮುನಿವರ್ಯರ ಆಶ್ರಮಕ್ಕೆ ಕಳಿಸೋದು ಜ್ಯೋತಿ ನಿನ್ನತ್ತಿಗೆ ಬಂದು ಮೂರು ದಿನಗಳಾಯ್ತು ನೀನೇನಮ್ಮ ಹೊರಡೋ ಮಾತೇ ಆಡ್ತಿಲ್ಲ.
ವಿಕ್ರಂ......ಹೌದಮ್ಮ ಮೊದಲು ಪ್ರಶಾಂತ್ ಕೈಗಳಿಗೆ ಚಿಕಿತ್ಸೆಯಾಗಿ ಇವನು ಮೊದಲಿನಂತಾಗುವುದು ಮುಖ್ಯ ಆಮೇಲೆ ಜೀವನವಿಡೀ ನೀನು ನಿನ್ನತ್ತಿಗೆಯ ನೆರಳಲ್ಲೇ ಇರ್ತೀಯಲ್ಲಮ್ಮ.
ಜ್ಯೋತಿ.......ನೀವಿಬ್ರು ಅಣ್ಣಂದಿರು ಹೇಳ್ತಿರೇದು ಸರಿ ಆದರೆ......
ನೀತು......ನಾನೇ ತಡೆದಿದ್ದೀನಣ್ಣ ಶುಕ್ರವಾರ ಮುಂಜಾನೆ ಇವರ ಜೊತೆ ನಾನೂ ಹೋಗ್ತಿದ್ದೀನಲ್ಲ.
ಹರೀಶ.....ನೀನೂ ಹೋಗ್ತಿದ್ದೀಯ ಚಿನ್ನಿ ?
ನೀತು......ರೀ ನಾನೇನು ಮುನಿವರ್ಯರ ಆಶ್ರಮಕ್ಕೆ ಹೋಗ್ತಿಲ್ಲ ಅವತ್ತೇ ಸಂಜೆ ಬಂದ್ಬಿಡ್ತೀನಿ ಚಿನ್ನಿ ಮನೇಲಿ ಪೂನಂ...ಸ್ವಾತಿಯ ಜೊತೆ ಆಡ್ತಿರ್ತಾಳೆ ನಾನವಳಿಗೆ ಹೇಳಿಯೇ ಹೋಗೋದು.
ರವಿ.....ನೀನು ಆಶ್ರಮಕ್ಕೆ ಹೋಗದಿದ್ರೆ ಮತ್ತಿಲ್ಲಿಗೆ ಹೋಗ್ಬೇಕಮ್ಮ ನೀತು ?
ನೀತು......ವರ್ಣ (ಪಿಂಕಿ) ಇವಳ ಜನ್ಮಸ್ಥಳದ ಹಳ್ಳಿಗೆ ಅಣ್ಣ.
ರೇವಂತ್......ಅಲ್ಲಿಗ್ಯಾಕಮ್ಮ ? ಈಗಲ್ಯಾರಿದ್ದಾರೆ ?
ಪ್ರೀತಿ.......ರೀ ನೀವೆಲ್ರೂ ಮನೇಲಿ ಕುಳಿತು ಚೌಕಚೌಕವಾಗಿ ಹರಟೆ ಹೊಡೆದ್ಕೊಂಡು ಕೂತಿರಿ ಎಲ್ಲಾ ಕೆಲಸ ನೀತು ಒಬ್ಬಳಿಗೇ ಬಿಡೋದಾ ? ನೀವುಗಳೂ ಸ್ವಲ್ಪ ಯೋಚಿಸಬೇಕಲ್ವ ?
ವಿಕ್ರಂ......ತಪ್ಪಾಯ್ತಮ್ಮ ಪ್ರೀತಿ ಆದರೆ ನಾವುಗಳು ಯಾವುದರ ಬಗ್ಗೆ ಯೋಚಿಸಲಿಲ್ಲ ಅದನ್ನಾದ್ರೂ ಹೇಳಮ್ಮ ತಿಳ್ಕೊತೀವಿ.
ಅಶೋಕ.....ಲೋ ರೇವಂತ್ ನಿನ್ನೆಂಡ್ತಿ ಎಲ್ಲರ ಮುಂದೆಯೆ ನಮ್ಮ ಮಾನ ಹರಾಜಾಕ್ತಿದ್ರೂ ನೀನು ತೆಪ್ಪಗಿದ್ದಿಯ ಏನಾದ್ರೂ ಮಾಡೊ.
ರೇವಂತ್.......ಸುಮ್ನಿರಪ್ಪ ನೀನು ನಮ್ಮನೇ ಲೇಡೀಸ್ ಗ್ಯಾಂಗ್ ಏದುರಿಸಿ ನಿಲ್ಲೋ ತಾಕತ್ತು ನಿನಗೂ ಇಲ್ಲ ಸುಮ್ಮನೆ ಏನೇನೋ ಹೇಳಿ ಅವರನ್ನು ರೊಚ್ಚಿಗೇಳಿಸ್ಬೇಡ.
ಜ್ಯೋತಿ.......ಮನೇಲಿ ಹೆಂಗಸರದ್ದೇ ದರ್ಬಾರಾ ಅತ್ತಿಗೆ ?
ರೇವತಿ......ಮತ್ತಿನ್ನೇನು ಅಂದ್ಕೊಂಡೆ ಜ್ಯೋತಿ ಮನೆಯಲ್ಯಾವತ್ತು ಹೆಂಗಸರದ್ದೇ ಆಡಳಿತವಿರಬೇಕು ನಮ್ಮನೇ ಲೇಡೀಸ್ ಗ್ಯಾಂಗಿನ ಲೀಡರ್ ನಿನ್ನತ್ತಿಗೆಯೇ ತಿಳೀತಾ.
ಸುಮ......ವಿಕ್ರಂ ಸಿಂಗ್ ವಾರದ ಹಿಂದೆ ಪಿಂಕಿ ಹುಟ್ಟಿದ ಹಳ್ಳಿಗೆ ಹೋಗಿ ಅವಳ ಹೆತ್ತ ತಂದೆ ತಾಯಿಯ ಬಗ್ಗೆ ವಿಚಾರಿಸಿದ್ರು ಪಾಪ ಹಳ್ಳಿಯ ಜನರಿಗೆ ಅವರಿಬ್ಬರು ತುಂಬ ಆತ್ಮೀಯರಂತೆ ಎಲ್ಲರ ಕಷ್ಟ ಸುಖಗಳಲ್ಲೂ ಪಿಂಕಿಯ ಹೆತ್ತವರು ಮುಂದೆ ನಿಲ್ಲುತ್ತಿದ್ರಂತೆ.
ರಜನಿ.....ಅಷ್ಟೇ ಅಲ್ಲ ಅವರು ಮಗಳ ಜೊತೆ ಪ್ಯಾರಿಸ್ಸಿಗೆ ಹೋದ ನಂತರದಿಂದ ಅವರ ಫೋನ್ ಆಫಾಗಿದ್ದು ಅವರನ್ಯಾರೂ ಸಹ ಸಂಪರ್ಕಿಸಲಾಗದೆ ಅವರ ಸುದ್ದಿ ತಿಳಿಯಲಾಗ್ದೆ ಒದ್ದಾಡ್ತಿದ್ದಾರಂತೆ.
ನೀತು.......ನೀನು ರೆಡಿಯಾ ಅನು ?
ಅನುಷ......ಅಕ್ಕ ಪಿಂಕಿ ನನ್ನ ಮಗಳಾಗಿರುವುದು ಹಳ್ಳಿ ಜನರಿಗೆ ಇಷ್ಟವಾಗದಿದ್ರೆ ಅವರಿದ್ದಕ್ಕೆ ವಿರೋಧಿಸಿದ್ರೆ ?
ನೀತು......ನೀನು ಹೆದರಿಕೊಳ್ಳುವಂತದ್ದೇನೂ ಆಗಲ್ಲ ಕಣೆ ಆದರೆ ಹಳ್ಳಿಯ ಜನರ ಜೊತೆ ಪಿಂಕಿಯ ಹೆತ್ತವರಿಗೆ ಅಭಿನಾಭಾವದ ಸಂಬಂಧವಿದೆ. ಅವರಿಗೆ ಪಿಂಕಿ ಹೆತ್ತವರಿಗ್ಯಾವ ರೀತಿಯ ಮೋಸ ನಡೆಯಿತು ಅವರ ಅಂತ್ಯ ಹೇಗಾಯ್ತು ಅನ್ನೋದನ್ನೂ ನಾವು ತಿಳಿಸಬೇಡ್ವಾ ? ಅದು ನಮ್ಮ ಕರ್ತವ್ಯ ಕಣಮ್ಮ ಅನು ಹಳ್ಳಿಯ ಪ್ರತಿಯೊಬ್ಬರೂ ನಿತ್ಯ ಅವರು ಸಕುಶಲರಾಗಿ ಇರುವುದಕ್ಕೆ ಹಳ್ಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡ್ತಿದ್ದಾರಂತೆ ಅವರಿಂದ ನಾವು ವಿಷಯ ಮುಚ್ಚಿಡುವುದು ಅವರ ಪ್ರೀತಿ..ಅಭಿಮಾನ ಮತ್ತು ಆಪ್ಯಾಯತೆಗೆ ದ್ರೋಹ ಮಾಡಿದಂತಾಗಲ್ವ. ಪಿಂಕಿ ಹುಟ್ಟಿದಾಗ ಹಳ್ಳಿಯವರೇ ಸೇರಿ ಹಬ್ಬದ ರೀತಿ ಇವಳ ಹುಟ್ಟನ್ನು ಆಚರಣೆ ಮಾಡಿದ್ರಂತೆ ಇವಳಿಗೂ ತಾನು ಹುಟ್ಟಿದ ಮನೆ...ಹಳ್ಳಿ ಇವುಗಳ ಪರಿಚಯ ಮಾಡಿಸುವುದು ನಮ್ಮ ಕರ್ತವ್ಯ ಕಣೆ.
ಅನುಷ......ಕ್ಷಮಿಸಿ ಅಕ್ಕ ಮಗಳು ಬಂದಾಗಿನಿಂದ ನಾನಿದರ ಬಗ್ಗೆ ಏನನ್ನೂ ಯೋಚಿಸಿಯೇ ಇರಲಿಲ್ಲ ಇವಳ ಕಿಲಕಾರಿಗಳಲ್ಲೇ ನನ್ನ ದಿನ ಸಾಗಿ ಹಾಕ್ತಿದ್ದೆ.
ರಾಜೀವ್......ಬಾರಮ್ಮ ಇಲ್ಲಿ ಕಂದ ( ಅನುಷಾಳನ್ನು ಪಕ್ಕದಲ್ಲಿ ಕೂರಿಸಿಕೊಂಡು ) ಯಾವುದೇ ಒಂದು ಸಂಬಂಧದ ಅಡಿಪಾಯ ಸುಳ್ಳಿನಿಂದ ಆಗಿರಬಾರದು. ಹಾಗೇನಾದರೂ ಆದದ್ದಾದ್ರೆ ಮುಂದೆ ಒಂದಲ್ಲೊಂದು ದಿನ ಆ ಸಂಬಂಧ ಕುಸಿದು ಬೀಳುವುದು ಖಚಿತ. ಪಿಂಕಿ ನಿನ್ನ ಮತ್ತು ಪ್ರತಾಪ್ ಮಗಳು ಎನ್ನುವುದಕ್ಕೆ ಬೇಕಾಗಿರುವ ದಾಖಲೆಗಳನ್ನು ವರ್ಧನ್ ಮಾಡಿಸಿಕೊಟ್ಟಿಲ್ವ ಇನ್ಯಾಕಮ್ಮ ಭಯ. ಪಿಂಕಿ ಬೆಳೆದು ವಯಸ್ಕಳಾಗಿ ಆಕೆಗೆ ತಿಳುವಳಿಕೆ ಬಂದಾಗ ತನ್ನ ಜನ್ಮದಾತರು ಯಾರೆಂದು ಆಕೆಗೆ ತಿಳಿದರೆ ಅವಳ ಮನಸ್ಸಾಗೆಷ್ಟು ನೋವಾಗಲ್ಲ ಹೇಳಮ್ಮ.
ರೇವತಿ.......ಮುಂದೊಂದು ದಿನ ಪಿಂಕಿಗೆ ಅವಳ ಹೆತ್ತವರಾರು ? ಅವರಿಗೇನಾಯ್ತು ಅನ್ನೋದನ್ನು ತಿಳಿಸಬೇಕಾಗಿರೋದು ತಂದೆ ತಾಯಿಯರಾಗಿ ನಿಮ್ಮಿಬ್ಬರ ಕರ್ತವ್ಯ. ಅದಕ್ಕೂ ಮುನ್ನ ಅವಳಿಗೆ ಪ್ರೀತಿ....ವಾತ್ಸಲ್ಯದಿಂದ ಬೆಳೆಸಿ ಒಳ್ಳೆಯದು ಕೆಟ್ಟದ್ದನ್ನು ನಾವು ತಿಳಿಹೇಳಬೇಕು.
ನೀತು......ಹೌದು ಕಣೆ ಪಿಂಕಿ ಹೆತ್ತವರೇನಾದರೆಂದು ಹಳ್ಳಿಯ ಜನರಿಗೂ ತಿಳಿದುಕೊಳ್ಳಲು ಕಾಯ್ತಿದ್ದಾರೆ. ಅವರಿಬ್ಬರೂ ತಮ್ಮ ಮಗಳೊಂದಿಗೆ ಕಾಣೆಯಾಗಿರುವ ಬಗ್ಗೆ ಹಳ್ಳಿಯ ಠಾಣೆಯಲ್ಲಿ ಪಂಚಾಯ್ತಿಯ ಕಡೆಯಿಂದಲೇ ಕಂಪ್ಲೇಂಟ್ ಕೊಟ್ಟಿದ್ದಾರಂತೆ.
ಶೀಲಾ......ನೀನ್ಯಾವುದರ ಬಗ್ಗೆಯೂ ಯೋಚಿಸ್ಬೇಡ ಕಣೆ ಅನು ಹಳ್ಳಿಯವರು ನಿನಗೂ ಪಿಂಕಿಗೆ ಆಶೀರ್ವಾದ ನೀಡಿ ಕಳಿಸ್ತಾರೆ.
ಪ್ರೀತಿ.......ರೀ ನಡೀರಿ ನೀವು ಫ್ಯಾಕ್ಟರಿಯಲ್ಲಿದು ಕಡಿದಾಕೊದು ಅಷ್ಟರಲ್ಲೇ ಇದೆ ನೀತು ಜೊತೆ ನಾವೂ ಹೋಗಿಬರೋಣ.
ಅಶೋಕ.......ಲೋ ನಿನ್ನೆಂಡ್ತಿ ಏನ್ ಮಾರಾಯ ಸುಮ್ಮನಿದ್ರೂ ಮಾನ ಕಳೀತಾಳಲ್ಲ ನಾಲ್ಕು ಬಿಡೋದಲ್ವ.
ಪ್ರೀತಿ........ಹಾಂ ಏನಂದ್ರಿ ಅಶೋಕ್ ?
ಅಶೋಕ ತಡಬಡಾಯಿಸಿ.......ನಾನೇನಂದೆ ಬೆಳಿಗ್ಗೆಯಿಂದಲೂ ಗ್ಯಾಸ್ ಪ್ರಾಬ್ಲಂ ಅಂತಿದ್ದ ಅದಕ್ಕೆ ನಾಲ್ಕು ಬಿಡು ಸರಿಹೋಗುತ್ತೆ ಅಂದೆ ಅಲ್ವೆನೋ ರೇವಂತ್.
ರೇವಂತ್.....ನನ್ನೆಂಡ್ತಿ ಹುಬ್ಬೇರಿಸಿದ ತಕ್ಷಣ ನಿನ್ನ ಗ್ಯಾಸ್ ಪೂರ್ತಿ ಲೀಕಾಗೋಯ್ತಲ್ಲಪ್ಪ ನನಗೆ ಹೇಳಿಕೊಡ್ತಿದ್ದೀಯ.
ಅಶೋಕ........ಎಲ್ಲಾ ನಮ್ಮನೇ ಈ ಲೇಡಿ ಡಾನ್ ಸಹವಾಸದಿಂದ ಹೆಂಗಸರೆಲ್ರೂ ತುಂಬ ಹೆಚ್ಕೊಂಡ್.......
ಅಶೋಕ ಮಾತಾಡ್ತಿದ್ದಾಗ ನೀತು ಏದ್ದು ನಿಂತಿದ್ದನ್ನು ಕಂಡು ತಕ್ಷಣ ಅಲ್ಲಿಂದೆದ್ದು ಏದುರು ಮನೆಗೊಂದೇ ಓಟ ಓಡಿಬಿಟ್ಟನು.
ನೀತು.......ರಜನಿ ಒಂದಿನ ನಿನ್ ಗಂಡ ನನ್ ಕೈಲಿ ಸರಿಯಾಗೇ ತಿಂತಾರೆ ಕಣೆ ನೋಡ್ತಿರು.
ರಜನಿ.......ನೀವಿಬ್ರೇನಾದ್ರೂ ಮಾಡ್ಕೊಳ್ರಮ್ಮ ನನ್ನನ್ನು ಮಾತ್ರ ಮಧ್ಯಕ್ಕೆಳಿಬೇಡಿ ನಾಳಿದ್ದು ಯಾರೆಲ್ಲ ಹೋಗ್ತಿರೋದು.
ನೀತು.......ಅಣ್ಣ—ಅತ್ತಿಗೆ ನಾನು ಅಜಯ್ ಜೊತೆ ಜ್ಯೋತಿ ಪ್ರಶಾಂತ್ ಇಬ್ರೂ ಹಿಮಾಚಲಕ್ಕೆ ಹೋಗ್ತಾರೆ.
ಸೌಭಾಗ್ಯ.......ಸ್ವಾತಿಗೆಲ್ಲಾ ಹೇಳಿದ್ದೀಯೆನಮ್ಮ ಜ್ಯೋತಿ ?
ಜ್ಯೋತಿ.......ಹೂಂ ಚಿಕ್ಕಮ್ಮ ಅವಳಿಗಿಲ್ಲ ನಿಶಾ ಪೂನಂ ಜೊತೆ ಮೂವರು ತಮ್ಮ ತಂಗಿಯರು ಸಿಕ್ಕಿರೋದೇ ಸ್ವರ್ಗದಂತೆ ಆಗೋಗಿದೆ ಏನೂ ತಂಟೆ ಮಾಡದೆ ಹೋಗಿ ಬಾರಮ್ಮ ನಾನಿಲ್ಲೇ ಇರ್ತೀನಿ ಅಂದ್ಬಿಟ್ಳು.
ಶೀಲಾ.....ಮಕ್ಕಳಿಗೆ ಮಕ್ಕಳೇ ಜೊತೆಯಲ್ವ ಜ್ಯೋತಿ ರಾತ್ರಿಯೂ ನಿಶಾ ಅವಳನ್ನು ಬಿಡಲ್ಲ ಜೊತೆಗೇ ಮಲಗಿಸಿಕೊಳ್ತಾಳೆ ನೋಡು.
* *
* *
.....continue