ಭಾಗ 186
ಒಂದು ಘಂಟೆ ನಂತರ ಮನೆಯೊಳಗೆ ಬಂದ ವಿಕ್ರಂ ಸಿಂಗ್ ತಾನು ಮೊದಲಿಗೆ ನೀತುವಿನೆದುರು ಮಂಡಿಯೂರಿ ಗೌರವ ಸಲ್ಲಿಸಿ ನಿಶಾ ಮತ್ತು ನಿಧಿಯ ಸಮಕ್ಷಮ ಶಿರಬಾಗಿ ನಮಿಸಿದನು. ಪಾವನ ಎಲ್ಲರ ಕಡೆ ನೋಡಿ ವಂಧಿಸಿ ಕೈ ಕಟ್ಟಿಕೊಂಡು ಪಕ್ಕಕ್ಕೆ ಸರಿದಾಗ ಮುಂದಕ್ಕೆ ಬಂದ ಆರುವರೆ ಅಡಿಗಳೆತ್ತರದ ಅಜಾನುಬಾಹು ದಿಲೇರ್ ಸಿಂಗ್ ತನ್ನ ಎಡಗೈಯಲ್ಲಿಡಿದಿದ್ದ ನಾಲ್ಕಡಿ ಖಡ್ಗವನ್ನು ನಿಶಾಳ ಪಾದದ ಬಳಿಯಿಟ್ಟು ಶಿರಬಾಗಿ ವಂಧಿಸಿದ ನಂತರ ನಿಧಿಗೂ ಅದೇ ರೀತಿಯಲ್ಲಿ ನಮಿಸಿದನು. ನೀತುವಿನ ಪಾದದ ಮೇಲೆ ತನ್ನ ತಲೆಯಿಟ್ಟ ದಿಲೇರ್ ಸಿಂಗ್ ಮೇಲೆದ್ದು ಕೈ ಮುಗಿಯುತ್ತ.......
ದಿಲೇರ್....ರಾಜಮಾತೆಗೆ ಈ ಸೇವಕನ ಕೋಟಿ ಕೋಟಿ ನಮನಗಳು ನನ್ನ ವಂದನೆ ಸ್ವೀಕರಿಸಿ.
ನೀತು......ಏನಿದು ದಿಲೇರ್ ಸಿಂಗ್ ಎದ್ದೇಳು ಇವರಿಬ್ಬರೂ ನಿಮ್ಮ ರಾಜಕುಮಾರಿಯರು ಆದರೆ ನಾನು ರಾಜಮಾತೆ ಹೇಗಾಗುತ್ತೀನಿ.
ದಿಲೇರ್......ನೀವು ನಮ್ಮ ರಾಜಕುಮಾರಿಯರಿಗೆ ತಾಯಿ ಅಲ್ಲವಾ ಹಾಗಿರುವಾಗ ನೀವು ನಮಗೆ ರಾಜಮಾತೆಯೇ.
ನೀತು......ನಿಮ್ಮ ಜೊತೆ ವಾದವಿವಾದ ಮಾಡಲಾಗದು ಎಲ್ಲರೂ ಬನ್ನಿ ಒಳಗೆ ಕುಳಿತು ಮಾತನಾಡೋಣ.
ದಿಲೇರ್ ಸಿಂಗ್ ತನ್ನ ಜೊತೆ ಕರೆತಂದಿದ್ದ ಹತ್ತು ಜನ ಅತ್ಯಾಪ್ತರಾದ ರಕ್ಷಕರು ಸಹ ನೀತು ಮತ್ತಿಬ್ಬರು ರಾಜಕುಮಾರಿಯರ ಸಮಕ್ಷಮದಲ್ಲಿ ಶಿರಭಾಗಿದರು.
ನೀತು.....ದಿಲೇರ್ ಸಿಂಗ್ ನಾನು ಏಳು ಜನರಾದರೆ ಸಾಕೆಂದಿದ್ದೆ 10 ಜನರನ್ನು ಕರೆತಂದಿರುವೆಯಲ್ಲ.
ದಿಲೇರ್.......ಹಗಲು ರಾತ್ರಿ ಕಾವಲಿಗೆ ಹತ್ತು ಜನರಿದ್ದರೆ ಸರಿಯೆಂದು ಯೋಚಿಸಿಯೇ ಕರೆ ತಂದಿರುವೆ ಇವರು ಉಳಿದುಕೊಳ್ಳಲು ಅವರೇ ವ್ಯವಸ್ಥೆ ಮಾಡಿಕೊಳ್ತಾರೆ.
ಹರೀಶ......ಅದರ ಅವಶ್ಯಕತೆಯಿಲ್ಲ ದಿಲೇರ್ ನಿಮ್ಮ ಜನರುಗಳಿಗೆ ಉಳಿದುಕೊಳ್ಳಲು ನಮ್ಮ ಏದುರು ಮನೆಯಲ್ಲಿ ವ್ಯವಸ್ಥೆ ಮಾಡಿದ್ದೀವಿ ಪ್ರತಾಪ್ ಇವರನ್ನಲ್ಲಿಗೆ ಕರೆದುಕೊಂಡೋಗಿ ತೋರಿಸು.
ದಿಲೇರ್ ಸಿಂಗ್ ಕಪ್ಪು ಬಣ್ಣದ ಕುರ್ತಾ ಮತ್ತು ಟೈಟಾದ ಪೈಜಾಮ ರೀತಿಯ ಯೋಧನ ವೇಶದಲ್ಲಿದ್ದು ಸೊಂಟಕ್ಕೆ ಬೆಲ್ಟಿನಂತೆ ಉದ್ದನೇ ಬಟ್ಟೆಯನ್ನು ಬಿಗಿಯಾಗಿ ಸುತ್ತಿದ್ದರ ಜೊತೆ ತಲೆಯ ಮೇಲೆ ಪಗಡಿ ಹಾಕಿಕೊಂಡಿದ್ದನು. ಒಟ್ಟಿನಲ್ಲಿ ಆತನ ವೇಷಭೂಶ ಮಹಾರಾಜರ ಆಪ್ತ ರಕ್ಷಕನಂತಿದ್ದು ಅವನನ್ನೇ ನಿಶಾ ಧಿಟ್ಟಿಸಿ ನೋಡುತ್ತ ಅಮ್ಮನನ್ನು ಒರಗಿಕೊಂಡು ನಿಂತಿದ್ದಳು. ಮನೆಯವರೆಲ್ಲರ ಪರಿಚಯ ಮಾಡಿಸಿ ತಿಂಡಿ ಟೀ ಸೇವಿಸಿದ ನಂತರ.......
ನೀತು......ನಾನೀಗ ನೇರವಾಗಿ ವಿಷಯಕ್ಕೆ ಬರ್ತೀನಿ. ಆಚಾರ್ಯರು ನಿನಗೆ ನೀಡಿದ್ದ ಕೆಲಸವೇನಾಯಿತು ದಿಲೇರ್ ಸಿಂಗ್ ?
ದಿಲೇರ್.....ಈ ವಿಷಯವನ್ನು ನಿಮ್ಮೊಬ್ಬರಿಗೇ ಮಾತ್ರ ತಿಳಿಸುವಂತೆ ಆಚಾರ್ಯರು ಹೇಳಿದ್ದರು.
ನೀತು.....ಇಲ್ಲಿರುವವರೆಲ್ಲರೂ ನಮ್ಮವರೇ ದಿಲೇರ್ ನೀನು ಯಾರ ಬಗ್ಗೆಯೂ ಅನುಮಾನ ಪಡಬೇಕಾಗಿಲ್ಲ ನಿಶ್ಚಿಂತೆಯಿಂದ ಹೇಳು.
ದಿಲೇರ್.....ನಿಮ್ಮ ಆದೇಶದಂತೆಯೇ ಆಗಲಿ. ರಾಜಸ್ಥಾನದಲ್ಲಿರುವ xxx ಕಲ್ಲಿನ ಮತ್ತು ಗ್ರಾನೈಟ್ ಕ್ವಾರಿಗಳಲ್ಲಿ ಶೇಖಡ 65ರಷ್ಟು ನಮ್ಮ ಸಂಸ್ಥಾನದ ಅಧೀನದಲ್ಲಿದೆ. ಈಗ ಸಂಸ್ಥಾನದ ಯಜಮಾನರಾದ ಮಹರಾಜ ಅಥವ ಮಹರಾಣಿಯವರಾಗಲಿ ಇಲ್ಲದಿರುವ ಕಾರಣಕ್ಕೆ ಅಲ್ಲಿನ ಕೆಲವು ರಾಣಕಾರಿಣಿಗಳು...ಅಧಿಕಾರಿಗಳು ಮತ್ತು ಹಲವು ಬಿಝನೆಸ್ ಮಾಡುವವರು ಅದನ್ನೆಲ್ಲಾ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇವರೆಲ್ಲರನ್ನು ಮುಂದೆ ಬಿಟ್ಟು ತರೆ ಹಿಂದೆ ಆಡುತ್ತಿರುವುದು ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಕೆಲ ಹಿರಿಯ ಸಚಿವರು. ಆದಷ್ಟು ಬೇಗ ಹಿರಿಯ ರಾಜಕುಮಾರಿ ತಮ್ಮ ಅಧಿಕಾರ ವಹಿಸಿಕೊಳ್ಳದಿದ್ದರೆ ಕಾನೂನಿನ ಅಡಚಣೆಗಳನ್ನು ಸೃಷ್ಟಿಸಿ ಎಲ್ಲಾ ಕ್ವಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತಯಾರಿಯಲ್ಲಿದ್ದಾರೆ ಆಗ ನಾವು ಕಾನೂನಿನ ಪ್ರಕಾರವೇ ಹೋರಾಡ ಬೇಕಾಗುತ್ತೆ ಅದಕ್ಕೆ ಎಷ್ಟು ವರ್ಷಗಳು ಹಿಡಿಯುತ್ತೋ ಯಾರಿಗೆ ಗೊತ್ತು.
ನೀತು......ಇದಾ ಒಳಗಿನ ವಿಷಯ. ದಿಲೇರ್ ಸಿಂಗ್ ನಾನು ನಿನ್ನನ್ನು ಇಲ್ಲಿಗೆ ಕರೆಸಿದ್ದೀನೆಂದರೆ ಅದು ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಕೆಲಸವಂತೂ ಆಗಿರುವುದಿಲ್ಲ ಅಂತ ನಿನಗೆ ಗೊತ್ತಾಗಿರಬೇಕಲ್ಲವಾ.
ದಿಲೇರ್......ನೆನ್ನೆ ನಿಮ್ಮ ಫೋನ್ ಬಂದಾಗಲೇ ನನಗೆ ಅರ್ಥವಾಗಿ ಹೋಯಿತು ನಿಮ್ಮ ಆದೇಶಕ್ಕಾಗಿ ಕಾಯುತ್ತಿದ್ದೀನಿ.
ನೀತು......ಸಂಸ್ಥಾನದ ವಿರುದ್ದ ಕತ್ತಿ ಮಸೆಯುತ್ತಿರುವ ಎಲ್ಲರ ಬಗ್ಗೆ ವಿವರಗಳು ಅವರು ಯಾರೆಂಬುದರ ಸಂಪೂರ್ಣ ಮಾಹಿತಿಗಳು ನಿನ್ನ ಬಳಿ ಇದೆಯಲ್ಲವಾ ?
ದಿಲೇರ್ ಸಿಂಗ್......ಹೌದು ರಾಜಮಾತೆ ಅದರ ಜೊತೆ ನಮ್ಮವರು ಅವರ ಹಿಂದೆಯೇ ನೆರಳಿನಂತಿದ್ದಾರೆ ರಾಜ್ಯದ ಸಿಎಂ ಮತ್ತು ಇತರೆ ಸಚಿವರುಗಳನ್ನೂ ಸೇರಿಸಿ ಎಲ್ಲಾ ಉದ್ಯಮಿಗಳು ಹಿಂದೆಯೂ ನಮ್ಮ ಜನರಿದ್ದಾರೆ.
ನಿಧಿ......ಅವರಲ್ಯಾರೂ ನಾಳಿನ ಸೂರ್ಯೋದಯ ನೋಡದಿರಲಿ ದಿಲೇರ್ ಸಿಂಗ್.
ನಿಧಿಯ ಮಾತನ್ನು ಕೇಳಿ ಮನೆಯವರೆಲ್ಲರೂ ಶಾಕಾಗಿ ಹೋಗಿದ್ದರೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಮುಖದಲ್ಲಿ ವಿಜಯದ ನಗು ಮೂಡಿತು.
.........continue
ಒಂದು ಘಂಟೆ ನಂತರ ಮನೆಯೊಳಗೆ ಬಂದ ವಿಕ್ರಂ ಸಿಂಗ್ ತಾನು ಮೊದಲಿಗೆ ನೀತುವಿನೆದುರು ಮಂಡಿಯೂರಿ ಗೌರವ ಸಲ್ಲಿಸಿ ನಿಶಾ ಮತ್ತು ನಿಧಿಯ ಸಮಕ್ಷಮ ಶಿರಬಾಗಿ ನಮಿಸಿದನು. ಪಾವನ ಎಲ್ಲರ ಕಡೆ ನೋಡಿ ವಂಧಿಸಿ ಕೈ ಕಟ್ಟಿಕೊಂಡು ಪಕ್ಕಕ್ಕೆ ಸರಿದಾಗ ಮುಂದಕ್ಕೆ ಬಂದ ಆರುವರೆ ಅಡಿಗಳೆತ್ತರದ ಅಜಾನುಬಾಹು ದಿಲೇರ್ ಸಿಂಗ್ ತನ್ನ ಎಡಗೈಯಲ್ಲಿಡಿದಿದ್ದ ನಾಲ್ಕಡಿ ಖಡ್ಗವನ್ನು ನಿಶಾಳ ಪಾದದ ಬಳಿಯಿಟ್ಟು ಶಿರಬಾಗಿ ವಂಧಿಸಿದ ನಂತರ ನಿಧಿಗೂ ಅದೇ ರೀತಿಯಲ್ಲಿ ನಮಿಸಿದನು. ನೀತುವಿನ ಪಾದದ ಮೇಲೆ ತನ್ನ ತಲೆಯಿಟ್ಟ ದಿಲೇರ್ ಸಿಂಗ್ ಮೇಲೆದ್ದು ಕೈ ಮುಗಿಯುತ್ತ.......
ದಿಲೇರ್....ರಾಜಮಾತೆಗೆ ಈ ಸೇವಕನ ಕೋಟಿ ಕೋಟಿ ನಮನಗಳು ನನ್ನ ವಂದನೆ ಸ್ವೀಕರಿಸಿ.
ನೀತು......ಏನಿದು ದಿಲೇರ್ ಸಿಂಗ್ ಎದ್ದೇಳು ಇವರಿಬ್ಬರೂ ನಿಮ್ಮ ರಾಜಕುಮಾರಿಯರು ಆದರೆ ನಾನು ರಾಜಮಾತೆ ಹೇಗಾಗುತ್ತೀನಿ.
ದಿಲೇರ್......ನೀವು ನಮ್ಮ ರಾಜಕುಮಾರಿಯರಿಗೆ ತಾಯಿ ಅಲ್ಲವಾ ಹಾಗಿರುವಾಗ ನೀವು ನಮಗೆ ರಾಜಮಾತೆಯೇ.
ನೀತು......ನಿಮ್ಮ ಜೊತೆ ವಾದವಿವಾದ ಮಾಡಲಾಗದು ಎಲ್ಲರೂ ಬನ್ನಿ ಒಳಗೆ ಕುಳಿತು ಮಾತನಾಡೋಣ.
ದಿಲೇರ್ ಸಿಂಗ್ ತನ್ನ ಜೊತೆ ಕರೆತಂದಿದ್ದ ಹತ್ತು ಜನ ಅತ್ಯಾಪ್ತರಾದ ರಕ್ಷಕರು ಸಹ ನೀತು ಮತ್ತಿಬ್ಬರು ರಾಜಕುಮಾರಿಯರ ಸಮಕ್ಷಮದಲ್ಲಿ ಶಿರಭಾಗಿದರು.
ನೀತು.....ದಿಲೇರ್ ಸಿಂಗ್ ನಾನು ಏಳು ಜನರಾದರೆ ಸಾಕೆಂದಿದ್ದೆ 10 ಜನರನ್ನು ಕರೆತಂದಿರುವೆಯಲ್ಲ.
ದಿಲೇರ್.......ಹಗಲು ರಾತ್ರಿ ಕಾವಲಿಗೆ ಹತ್ತು ಜನರಿದ್ದರೆ ಸರಿಯೆಂದು ಯೋಚಿಸಿಯೇ ಕರೆ ತಂದಿರುವೆ ಇವರು ಉಳಿದುಕೊಳ್ಳಲು ಅವರೇ ವ್ಯವಸ್ಥೆ ಮಾಡಿಕೊಳ್ತಾರೆ.
ಹರೀಶ......ಅದರ ಅವಶ್ಯಕತೆಯಿಲ್ಲ ದಿಲೇರ್ ನಿಮ್ಮ ಜನರುಗಳಿಗೆ ಉಳಿದುಕೊಳ್ಳಲು ನಮ್ಮ ಏದುರು ಮನೆಯಲ್ಲಿ ವ್ಯವಸ್ಥೆ ಮಾಡಿದ್ದೀವಿ ಪ್ರತಾಪ್ ಇವರನ್ನಲ್ಲಿಗೆ ಕರೆದುಕೊಂಡೋಗಿ ತೋರಿಸು.
ದಿಲೇರ್ ಸಿಂಗ್ ಕಪ್ಪು ಬಣ್ಣದ ಕುರ್ತಾ ಮತ್ತು ಟೈಟಾದ ಪೈಜಾಮ ರೀತಿಯ ಯೋಧನ ವೇಶದಲ್ಲಿದ್ದು ಸೊಂಟಕ್ಕೆ ಬೆಲ್ಟಿನಂತೆ ಉದ್ದನೇ ಬಟ್ಟೆಯನ್ನು ಬಿಗಿಯಾಗಿ ಸುತ್ತಿದ್ದರ ಜೊತೆ ತಲೆಯ ಮೇಲೆ ಪಗಡಿ ಹಾಕಿಕೊಂಡಿದ್ದನು. ಒಟ್ಟಿನಲ್ಲಿ ಆತನ ವೇಷಭೂಶ ಮಹಾರಾಜರ ಆಪ್ತ ರಕ್ಷಕನಂತಿದ್ದು ಅವನನ್ನೇ ನಿಶಾ ಧಿಟ್ಟಿಸಿ ನೋಡುತ್ತ ಅಮ್ಮನನ್ನು ಒರಗಿಕೊಂಡು ನಿಂತಿದ್ದಳು. ಮನೆಯವರೆಲ್ಲರ ಪರಿಚಯ ಮಾಡಿಸಿ ತಿಂಡಿ ಟೀ ಸೇವಿಸಿದ ನಂತರ.......
ನೀತು......ನಾನೀಗ ನೇರವಾಗಿ ವಿಷಯಕ್ಕೆ ಬರ್ತೀನಿ. ಆಚಾರ್ಯರು ನಿನಗೆ ನೀಡಿದ್ದ ಕೆಲಸವೇನಾಯಿತು ದಿಲೇರ್ ಸಿಂಗ್ ?
ದಿಲೇರ್.....ಈ ವಿಷಯವನ್ನು ನಿಮ್ಮೊಬ್ಬರಿಗೇ ಮಾತ್ರ ತಿಳಿಸುವಂತೆ ಆಚಾರ್ಯರು ಹೇಳಿದ್ದರು.
ನೀತು.....ಇಲ್ಲಿರುವವರೆಲ್ಲರೂ ನಮ್ಮವರೇ ದಿಲೇರ್ ನೀನು ಯಾರ ಬಗ್ಗೆಯೂ ಅನುಮಾನ ಪಡಬೇಕಾಗಿಲ್ಲ ನಿಶ್ಚಿಂತೆಯಿಂದ ಹೇಳು.
ದಿಲೇರ್.....ನಿಮ್ಮ ಆದೇಶದಂತೆಯೇ ಆಗಲಿ. ರಾಜಸ್ಥಾನದಲ್ಲಿರುವ xxx ಕಲ್ಲಿನ ಮತ್ತು ಗ್ರಾನೈಟ್ ಕ್ವಾರಿಗಳಲ್ಲಿ ಶೇಖಡ 65ರಷ್ಟು ನಮ್ಮ ಸಂಸ್ಥಾನದ ಅಧೀನದಲ್ಲಿದೆ. ಈಗ ಸಂಸ್ಥಾನದ ಯಜಮಾನರಾದ ಮಹರಾಜ ಅಥವ ಮಹರಾಣಿಯವರಾಗಲಿ ಇಲ್ಲದಿರುವ ಕಾರಣಕ್ಕೆ ಅಲ್ಲಿನ ಕೆಲವು ರಾಣಕಾರಿಣಿಗಳು...ಅಧಿಕಾರಿಗಳು ಮತ್ತು ಹಲವು ಬಿಝನೆಸ್ ಮಾಡುವವರು ಅದನ್ನೆಲ್ಲಾ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇವರೆಲ್ಲರನ್ನು ಮುಂದೆ ಬಿಟ್ಟು ತರೆ ಹಿಂದೆ ಆಡುತ್ತಿರುವುದು ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಕೆಲ ಹಿರಿಯ ಸಚಿವರು. ಆದಷ್ಟು ಬೇಗ ಹಿರಿಯ ರಾಜಕುಮಾರಿ ತಮ್ಮ ಅಧಿಕಾರ ವಹಿಸಿಕೊಳ್ಳದಿದ್ದರೆ ಕಾನೂನಿನ ಅಡಚಣೆಗಳನ್ನು ಸೃಷ್ಟಿಸಿ ಎಲ್ಲಾ ಕ್ವಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತಯಾರಿಯಲ್ಲಿದ್ದಾರೆ ಆಗ ನಾವು ಕಾನೂನಿನ ಪ್ರಕಾರವೇ ಹೋರಾಡ ಬೇಕಾಗುತ್ತೆ ಅದಕ್ಕೆ ಎಷ್ಟು ವರ್ಷಗಳು ಹಿಡಿಯುತ್ತೋ ಯಾರಿಗೆ ಗೊತ್ತು.
ನೀತು......ಇದಾ ಒಳಗಿನ ವಿಷಯ. ದಿಲೇರ್ ಸಿಂಗ್ ನಾನು ನಿನ್ನನ್ನು ಇಲ್ಲಿಗೆ ಕರೆಸಿದ್ದೀನೆಂದರೆ ಅದು ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಕೆಲಸವಂತೂ ಆಗಿರುವುದಿಲ್ಲ ಅಂತ ನಿನಗೆ ಗೊತ್ತಾಗಿರಬೇಕಲ್ಲವಾ.
ದಿಲೇರ್......ನೆನ್ನೆ ನಿಮ್ಮ ಫೋನ್ ಬಂದಾಗಲೇ ನನಗೆ ಅರ್ಥವಾಗಿ ಹೋಯಿತು ನಿಮ್ಮ ಆದೇಶಕ್ಕಾಗಿ ಕಾಯುತ್ತಿದ್ದೀನಿ.
ನೀತು......ಸಂಸ್ಥಾನದ ವಿರುದ್ದ ಕತ್ತಿ ಮಸೆಯುತ್ತಿರುವ ಎಲ್ಲರ ಬಗ್ಗೆ ವಿವರಗಳು ಅವರು ಯಾರೆಂಬುದರ ಸಂಪೂರ್ಣ ಮಾಹಿತಿಗಳು ನಿನ್ನ ಬಳಿ ಇದೆಯಲ್ಲವಾ ?
ದಿಲೇರ್ ಸಿಂಗ್......ಹೌದು ರಾಜಮಾತೆ ಅದರ ಜೊತೆ ನಮ್ಮವರು ಅವರ ಹಿಂದೆಯೇ ನೆರಳಿನಂತಿದ್ದಾರೆ ರಾಜ್ಯದ ಸಿಎಂ ಮತ್ತು ಇತರೆ ಸಚಿವರುಗಳನ್ನೂ ಸೇರಿಸಿ ಎಲ್ಲಾ ಉದ್ಯಮಿಗಳು ಹಿಂದೆಯೂ ನಮ್ಮ ಜನರಿದ್ದಾರೆ.
ನಿಧಿ......ಅವರಲ್ಯಾರೂ ನಾಳಿನ ಸೂರ್ಯೋದಯ ನೋಡದಿರಲಿ ದಿಲೇರ್ ಸಿಂಗ್.
ನಿಧಿಯ ಮಾತನ್ನು ಕೇಳಿ ಮನೆಯವರೆಲ್ಲರೂ ಶಾಕಾಗಿ ಹೋಗಿದ್ದರೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಮುಖದಲ್ಲಿ ವಿಜಯದ ನಗು ಮೂಡಿತು.
.........continue