• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,620
1,693
159
ಭಾಗ 186


ಒಂದು ಘಂಟೆ ನಂತರ ಮನೆಯೊಳಗೆ ಬಂದ ವಿಕ್ರಂ ಸಿಂಗ್ ತಾನು ಮೊದಲಿಗೆ ನೀತುವಿನೆದುರು ಮಂಡಿಯೂರಿ ಗೌರವ ಸಲ್ಲಿಸಿ ನಿಶಾ ಮತ್ತು ನಿಧಿಯ ಸಮಕ್ಷಮ ಶಿರಬಾಗಿ ನಮಿಸಿದನು. ಪಾವನ ಎಲ್ಲರ ಕಡೆ ನೋಡಿ ವಂಧಿಸಿ ಕೈ ಕಟ್ಟಿಕೊಂಡು ಪಕ್ಕಕ್ಕೆ ಸರಿದಾಗ ಮುಂದಕ್ಕೆ ಬಂದ ಆರುವರೆ ಅಡಿಗಳೆತ್ತರದ ಅಜಾನುಬಾಹು ದಿಲೇರ್ ಸಿಂಗ್ ತನ್ನ ಎಡಗೈಯಲ್ಲಿಡಿದಿದ್ದ ನಾಲ್ಕಡಿ ಖಡ್ಗವನ್ನು ನಿಶಾಳ ಪಾದದ ಬಳಿಯಿಟ್ಟು ಶಿರಬಾಗಿ ವಂಧಿಸಿದ ನಂತರ ನಿಧಿಗೂ ಅದೇ ರೀತಿಯಲ್ಲಿ ನಮಿಸಿದನು. ನೀತುವಿನ ಪಾದದ ಮೇಲೆ ತನ್ನ ತಲೆಯಿಟ್ಟ ದಿಲೇರ್ ಸಿಂಗ್ ಮೇಲೆದ್ದು ಕೈ ಮುಗಿಯುತ್ತ.......

ದಿಲೇರ್....ರಾಜಮಾತೆಗೆ ಈ ಸೇವಕನ ಕೋಟಿ ಕೋಟಿ ನಮನಗಳು ನನ್ನ ವಂದನೆ ಸ್ವೀಕರಿಸಿ.

ನೀತು......ಏನಿದು ದಿಲೇರ್ ಸಿಂಗ್ ಎದ್ದೇಳು ಇವರಿಬ್ಬರೂ ನಿಮ್ಮ ರಾಜಕುಮಾರಿಯರು ಆದರೆ ನಾನು ರಾಜಮಾತೆ ಹೇಗಾಗುತ್ತೀನಿ.

ದಿಲೇರ್......ನೀವು ನಮ್ಮ ರಾಜಕುಮಾರಿಯರಿಗೆ ತಾಯಿ ಅಲ್ಲವಾ ಹಾಗಿರುವಾಗ ನೀವು ನಮಗೆ ರಾಜಮಾತೆಯೇ.

ನೀತು......ನಿಮ್ಮ ಜೊತೆ ವಾದವಿವಾದ ಮಾಡಲಾಗದು ಎಲ್ಲರೂ ಬನ್ನಿ ಒಳಗೆ ಕುಳಿತು ಮಾತನಾಡೋಣ.

ದಿಲೇರ್ ಸಿಂಗ್ ತನ್ನ ಜೊತೆ ಕರೆತಂದಿದ್ದ ಹತ್ತು ಜನ ಅತ್ಯಾಪ್ತರಾದ ರಕ್ಷಕರು ಸಹ ನೀತು ಮತ್ತಿಬ್ಬರು ರಾಜಕುಮಾರಿಯರ ಸಮಕ್ಷಮದಲ್ಲಿ ಶಿರಭಾಗಿದರು.

ನೀತು.....ದಿಲೇರ್ ಸಿಂಗ್ ನಾನು ಏಳು ಜನರಾದರೆ ಸಾಕೆಂದಿದ್ದೆ 10 ಜನರನ್ನು ಕರೆತಂದಿರುವೆಯಲ್ಲ.

ದಿಲೇರ್.......ಹಗಲು ರಾತ್ರಿ ಕಾವಲಿಗೆ ಹತ್ತು ಜನರಿದ್ದರೆ ಸರಿಯೆಂದು ಯೋಚಿಸಿಯೇ ಕರೆ ತಂದಿರುವೆ ಇವರು ಉಳಿದುಕೊಳ್ಳಲು ಅವರೇ ವ್ಯವಸ್ಥೆ ಮಾಡಿಕೊಳ್ತಾರೆ.

ಹರೀಶ......ಅದರ ಅವಶ್ಯಕತೆಯಿಲ್ಲ ದಿಲೇರ್ ನಿಮ್ಮ ಜನರುಗಳಿಗೆ ಉಳಿದುಕೊಳ್ಳಲು ನಮ್ಮ ಏದುರು ಮನೆಯಲ್ಲಿ ವ್ಯವಸ್ಥೆ ಮಾಡಿದ್ದೀವಿ ಪ್ರತಾಪ್ ಇವರನ್ನಲ್ಲಿಗೆ ಕರೆದುಕೊಂಡೋಗಿ ತೋರಿಸು.

ದಿಲೇರ್ ಸಿಂಗ್ ಕಪ್ಪು ಬಣ್ಣದ ಕುರ್ತಾ ಮತ್ತು ಟೈಟಾದ ಪೈಜಾಮ ರೀತಿಯ ಯೋಧನ ವೇಶದಲ್ಲಿದ್ದು ಸೊಂಟಕ್ಕೆ ಬೆಲ್ಟಿನಂತೆ ಉದ್ದನೇ ಬಟ್ಟೆಯನ್ನು ಬಿಗಿಯಾಗಿ ಸುತ್ತಿದ್ದರ ಜೊತೆ ತಲೆಯ ಮೇಲೆ ಪಗಡಿ ಹಾಕಿಕೊಂಡಿದ್ದನು. ಒಟ್ಟಿನಲ್ಲಿ ಆತನ ವೇಷಭೂಶ ಮಹಾರಾಜರ ಆಪ್ತ ರಕ್ಷಕನಂತಿದ್ದು ಅವನನ್ನೇ ನಿಶಾ ಧಿಟ್ಟಿಸಿ ನೋಡುತ್ತ ಅಮ್ಮನನ್ನು ಒರಗಿಕೊಂಡು ನಿಂತಿದ್ದಳು. ಮನೆಯವರೆಲ್ಲರ ಪರಿಚಯ ಮಾಡಿಸಿ ತಿಂಡಿ ಟೀ ಸೇವಿಸಿದ ನಂತರ.......

ನೀತು......ನಾನೀಗ ನೇರವಾಗಿ ವಿಷಯಕ್ಕೆ ಬರ್ತೀನಿ. ಆಚಾರ್ಯರು ನಿನಗೆ ನೀಡಿದ್ದ ಕೆಲಸವೇನಾಯಿತು ದಿಲೇರ್ ಸಿಂಗ್ ?

ದಿಲೇರ್.....ಈ ವಿಷಯವನ್ನು ನಿಮ್ಮೊಬ್ಬರಿಗೇ ಮಾತ್ರ ತಿಳಿಸುವಂತೆ ಆಚಾರ್ಯರು ಹೇಳಿದ್ದರು.

ನೀತು.....ಇಲ್ಲಿರುವವರೆಲ್ಲರೂ ನಮ್ಮವರೇ ದಿಲೇರ್ ನೀನು ಯಾರ ಬಗ್ಗೆಯೂ ಅನುಮಾನ ಪಡಬೇಕಾಗಿಲ್ಲ ನಿಶ್ಚಿಂತೆಯಿಂದ ಹೇಳು.

ದಿಲೇರ್.....ನಿಮ್ಮ ಆದೇಶದಂತೆಯೇ ಆಗಲಿ. ರಾಜಸ್ಥಾನದಲ್ಲಿರುವ xxx ಕಲ್ಲಿನ ಮತ್ತು ಗ್ರಾನೈಟ್ ಕ್ವಾರಿಗಳಲ್ಲಿ ಶೇಖಡ 65ರಷ್ಟು ನಮ್ಮ ಸಂಸ್ಥಾನದ ಅಧೀನದಲ್ಲಿದೆ. ಈಗ ಸಂಸ್ಥಾನದ ಯಜಮಾನರಾದ ಮಹರಾಜ ಅಥವ ಮಹರಾಣಿಯವರಾಗಲಿ ಇಲ್ಲದಿರುವ ಕಾರಣಕ್ಕೆ ಅಲ್ಲಿನ ಕೆಲವು ರಾಣಕಾರಿಣಿಗಳು...ಅಧಿಕಾರಿಗಳು ಮತ್ತು ಹಲವು ಬಿಝನೆಸ್ ಮಾಡುವವರು ಅದನ್ನೆಲ್ಲಾ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇವರೆಲ್ಲರನ್ನು ಮುಂದೆ ಬಿಟ್ಟು ತರೆ ಹಿಂದೆ ಆಡುತ್ತಿರುವುದು ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಕೆಲ ಹಿರಿಯ ಸಚಿವರು. ಆದಷ್ಟು ಬೇಗ ಹಿರಿಯ ರಾಜಕುಮಾರಿ ತಮ್ಮ ಅಧಿಕಾರ ವಹಿಸಿಕೊಳ್ಳದಿದ್ದರೆ ಕಾನೂನಿನ ಅಡಚಣೆಗಳನ್ನು ಸೃಷ್ಟಿಸಿ ಎಲ್ಲಾ ಕ್ವಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತಯಾರಿಯಲ್ಲಿದ್ದಾರೆ ಆಗ ನಾವು ಕಾನೂನಿನ ಪ್ರಕಾರವೇ ಹೋರಾಡ ಬೇಕಾಗುತ್ತೆ ಅದಕ್ಕೆ ಎಷ್ಟು ವರ್ಷಗಳು ಹಿಡಿಯುತ್ತೋ ಯಾರಿಗೆ ಗೊತ್ತು.

ನೀತು......ಇದಾ ಒಳಗಿನ ವಿಷಯ. ದಿಲೇರ್ ಸಿಂಗ್ ನಾನು ನಿನ್ನನ್ನು ಇಲ್ಲಿಗೆ ಕರೆಸಿದ್ದೀನೆಂದರೆ ಅದು ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಕೆಲಸವಂತೂ ಆಗಿರುವುದಿಲ್ಲ ಅಂತ ನಿನಗೆ ಗೊತ್ತಾಗಿರಬೇಕಲ್ಲವಾ.

ದಿಲೇರ್......ನೆನ್ನೆ ನಿಮ್ಮ ಫೋನ್ ಬಂದಾಗಲೇ ನನಗೆ ಅರ್ಥವಾಗಿ ಹೋಯಿತು ನಿಮ್ಮ ಆದೇಶಕ್ಕಾಗಿ ಕಾಯುತ್ತಿದ್ದೀನಿ.

ನೀತು......ಸಂಸ್ಥಾನದ ವಿರುದ್ದ ಕತ್ತಿ ಮಸೆಯುತ್ತಿರುವ ಎಲ್ಲರ ಬಗ್ಗೆ ವಿವರಗಳು ಅವರು ಯಾರೆಂಬುದರ ಸಂಪೂರ್ಣ ಮಾಹಿತಿಗಳು ನಿನ್ನ ಬಳಿ ಇದೆಯಲ್ಲವಾ ?

ದಿಲೇರ್ ಸಿಂಗ್......ಹೌದು ರಾಜಮಾತೆ ಅದರ ಜೊತೆ ನಮ್ಮವರು ಅವರ ಹಿಂದೆಯೇ ನೆರಳಿನಂತಿದ್ದಾರೆ ರಾಜ್ಯದ ಸಿಎಂ ಮತ್ತು ಇತರೆ ಸಚಿವರುಗಳನ್ನೂ ಸೇರಿಸಿ ಎಲ್ಲಾ ಉದ್ಯಮಿಗಳು ಹಿಂದೆಯೂ ನಮ್ಮ ಜನರಿದ್ದಾರೆ.

ನಿಧಿ......ಅವರಲ್ಯಾರೂ ನಾಳಿನ ಸೂರ್ಯೋದಯ ನೋಡದಿರಲಿ ದಿಲೇರ್ ಸಿಂಗ್.

ನಿಧಿಯ ಮಾತನ್ನು ಕೇಳಿ ಮನೆಯವರೆಲ್ಲರೂ ಶಾಕಾಗಿ ಹೋಗಿದ್ದರೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಮುಖದಲ್ಲಿ ವಿಜಯದ ನಗು ಮೂಡಿತು.


.........continue
 

Samar2154

Well-Known Member
2,620
1,693
159
continue.......


ನೀತು......ನಿಮ್ಮ ರಾಜಕುಮಾರಿ ಖುದ್ದಾಗಿ ಆದೇಶಿಸಿದ್ದಾಳೆ ದಿಲೇರ್ ಆದರೆ ಒಂದು ವಿಷಯ ಸದಾ ನೆನಪಿನಲ್ಲಿರಲಿ ಅವರಲ್ಯಾರೊಬ್ಬರ ಹೆಣವೂ ಸಹ ಸಿಗಬಾರದು ಮತ್ತವರು ಏನಾದರೆಂಬ ಸಣ್ಣ ಸುಳಿವು ಕೂಡ ಪ್ರಪಂಚಕ್ಕೆ ಸಿಗಲೇಬಾರದು. ಮರಳುಗಾಡಿನಲ್ಲಿ ಬೀಸುತ್ತಿದ್ದ ಗಾಳಿಯಲ್ಲವರೆಲ್ಲರೂ ವಿಲೀನರಾಗಿ ಮಾಯವಾಗಿ ಹೋಗಿದ್ದಾರೆ ಎನ್ನುವಂತಿರಬೇಕು.

ದಿಲೇರ್.......ಅವರೆಲ್ಲರ ನೆರಳಿಗೂ ಸಹ ಸುಳಿವು ಸಿಗುವುದಿಲ್ಲ ಆ ರೀತಿ ಕೆಲಸ ಮುಗಿಸುವೆ.

ನೀತು.....ನನ್ನ ಮಗಳು ನಿಮ್ಮ ರಾಜಕುಮಾರಿಗೆ ಸ್ವಲ್ಪ ಆತುರ ಜಾಸ್ತಿ ಈ ಕೆಲಸ ನಾಳೆಯೇ ಮಾಡಬೇಕಾಗಿಲ್ಲ ಸರಿಯಾದ ಸಮಯಕ್ಕಾಗಿ ಕಾದು ಆನಂತರ ಒಂದೇ ಪ್ರಹಾರದಲ್ಲಿ ಎಲ್ಲರನ್ನು ನಾಶ ಮಾಡಬೇಕು
ಜೂನ್ 15ರ ನಂತರ ನಾನು ನಿಮ್ಮಿಬ್ಬರು ರಾಜಕುಮಾರಿಯರನ್ನು ಕರೆದುಕೊಂಡು ಉದಯಪುರಕ್ಕೆ ಬರುತ್ತೇನೆ. ಅಲ್ಲಿಗೆ ಬರುವುದಕ್ಕೂ ಮುನ್ನ ನಾನು ನಿಮಗೆ ತಿಳಿಸುವೆ ಆ ದಿನ ಇಲ್ಲಿಗೆ ಛಾಪರ್ ಕಳಿಸುವ ವ್ಯವಸ್ಥೆ ಮಾಡಿ. ವಿಕ್ರಂ ಸಿಂಗ್ ನಿಮ್ಮ ರಾಜಕುಮಾರಿ ನಿಮಗೇನೋ ಕೊಡಬೇಕೆಂದಿದ್ದಾಳೆ ಮುಂದೆ ಅವಳೇ ಹೇಳುತ್ತಾಳೆ.

ನಿಧಿ......ವಿಕ್ರಂ ಸಿಂಗ್ ಇದೊಂದು ರೀತಿಯ ಹಾರಾಡುವ ಹುಳುವಿನ ರೀತಿಯ ಯಂತ್ರ ಸಧ್ಯಕ್ಕೆ ನನ್ನಿಂದ ಮೂರನ್ನು ಮಾತ್ರ ತಯಾರಿಸಲು ಸಾಧ್ಯವಾಯಿತು. ಇದು ಬ್ಯಾಟರಿ ಚಾಲಿತವಾಗಿ ಕೆಲಸ ಮಾಡುತ್ತದೆ ಇದನ್ನು ಒಂದು ಕಿಮೀ.. ದೂರದಿಂದ ನಿಯಂತ್ರಿಸಬಹುದು ಆದರೆ ಇದನ್ನು ಹಾರಾಡಿಸುವ ಮುನ್ನ ಕಂಪ್ಯೂಟರಿನ ಜೊತೆ ಕನೆಕ್ಟ್ ಮಾಡಿ ನಂತರ ಹಾರಾಟಕ್ಕೆ ಬಿಡಬೇಕು. ಇದರಲ್ಲಿ ಪವರಫುಲ್ ಕ್ಯಾಮೆರಾ ಮತ್ತು ಹೈಸೆನ್ಸಿಟಿವಿಟಿ ಮೈಕ್ರೋಫೋನ್ ಅಳವಡಿಸಲಾಗಿದೆ. ಇದು ಯಾವುದೇ ಜಾಗದಲ್ಲಿ ಹಾರಾಡಿದರೂ ಸುತ್ತಮುತ್ತಲಿನ ಐವತ್ತು ಮೀ ಜಾಗದಲ್ಲಿನ ಪ್ರತಿಯೊಂದು ಶಬ್ದಗಳನ್ನೂ ಗ್ರಹಿಸಿ ಕಂಪ್ಯೂಟರಿಗೆ ರವಾನಿಸುತ್ತದೆ. ಇದರಿಂದ ನೀವು ನಮ್ಮವರೇ ಆಗಿದ್ದರೂ ನಮಗೆ ವಿರೋಧವಾಗಿ ನಿಂತಿರುವವರ ಮೇಲೆ ನಿಗಾ ಇಡುವ ಜೊತೆ ಅವರ ಮುಂದಿನ ಚಟುವಟಿಕೆಗಳನ್ನು ಗಮನಿಸಬಹುದು. ಮೊದಲಿಗದನ್ನು ಚಂಚಲಾದೇವಿ ಮತ್ತು ಭಾನುಪ್ರತಾಪ್ ಇವರಿಬ್ಬರ ಅರಮನೆಗಳಲ್ಲಿ ಹಾರಾಡುವುದಕ್ಕೆ ಬಿಡಬೇಕಿದೆ ಮತ್ತು ಒಂದು ನಿರ್ಧಿಷ್ಟವಾಗಿರುವ ಜಾಗದಲ್ಲಿ ಇವುಗಳನ್ನು ಸೇರಿಸಿಬಿಟ್ಟರೆ ಆ ಸ್ಥಳದಲ್ಲಿವು ಇನ್ನೆಂದೂ ತೆಗೆಯಲಾಗದಂತೆ ಅಂಟಿಕೊಂಡು ಬಿಡುತ್ತವೆ. ಇದನ್ನು ಯಾವ್ಯಾವ ರೀತಿ ಉಪಯೋಗಿಸಬೇಕೆಂದು ನಾನೀ ಪತ್ರದಲ್ಲಿ ಪೂರ್ತಿ ವಿವರದಿ ಬರೆದಿದ್ದೇನೆ ನಮ್ಮ ಸಂಸ್ಥಾನದಲ್ಲಿ ನುರಿತ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಪರಿಣಿತ ಇಂಜಿನಿಯರುಗಳು ಇರಬೇಕಲ್ಲವಾ.

ವಿಕ್ರಂ ಸಿಂಗ್........ಹೌದು ಯುವರಾಣಿಯವರೇ ನಮ್ಮಲ್ಲಿ ತುಂಬ ಅತ್ಯುನ್ನತ ತರಬೇತಿ ಹೊಂದಿರುವ ತಂತ್ರಜ್ಞರಿದ್ದಾರೆ ಅವರೆಲ್ಲರಿಗೂ ಇದನ್ನು ನೀಡಿದರೆ ಸರಿಯಾಗಿ ನಿರ್ವಹಣೆ ಮಾಡುತ್ತಾರೆ. ನೀವು ಆದೇಶಿಸಿರುವಂತೆ ಇಂದು ಮರಳಿದ ತಕ್ಷಣವೇ ನಾನೀ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ.

ನೀತು......ನೀವು ನನ್ನನ್ನು ರಾಜಮಾತೆ ಎಂದು ಗೌರವಿಸಿರುವಿರಿ ಆ ಅಧಿಕಾರದಿಂದಲೇ ನಾನು ನಿಮಗೆ ಆದೇಶಿಸುತ್ತಿದ್ದೀನಿ. ಜೂನ್ 15 ಕ್ಕಿಂತ ಮುಂಚೆ ನಿಮ್ಮ ಬಳಿ ರಾಜಮನೆತನದ ವಿರೋಧಿಗಳ ಪೂರ್ತಿ ಮಾಹಿತಿ ಇರಬೇಕು ಮುಂದೇನು ಮಾಡಬೇಕೆಂದು ನಾನಲ್ಲಿಗೆ ಬಂದ ನಂತರ ಹೇಳುತ್ತೇನೆ. ಆದರೆ ದಿಲೇರ್ ಸಿಂಗ್ ನಾವಲ್ಲಿಗೆ ಬರುವುದಕ್ಕೆ ಮುಂಚೆಯೇ ಈ ರಾಜಕಾರಿಣಿಗಳು ಮತ್ತಿತರ ವಿರೋಧಿಗಳ ಅಂತ್ಯ ಆಗಿರಬೇಕು ಯಾರೊಬ್ಬರ ಸುಳಿವೂ ಸಹ ಸಿಗಬಾರದು.

ದಿಲೇರ್......ನಿಮ್ಮ ಆದೇಶ ಅಕ್ಷರಶಃ ಪಾಲನೆಯಾಗುತ್ತದೆ.

ನೀತು....ˌ.ಪಾವನ ನಿನಗೇನಾದರೂ ತಿಳಿಯಿತಾ ?

ಪಾವನ......ಮೇಡಂ ಸಂಸ್ಥಾನದ ಕಂಪನಿಯ ಬೋರ್ಡ್ ಮೆಂಬರ್ ಎಲ್ಲರೂ ರಾಜಮನೆತನಕ್ಕೆ ಅತ್ಯಂತ ನಿಷ್ಠಾವಂತರು ಅವರಲ್ಯಾರೂ ಸಹ ಯಾವುದೇ ರೀತಿಯ ಅವ್ಯವಹಾರ ಮಾಡುತ್ತಿಲ್ಲ. ಆದರೆ ಅಲ್ಲಿ ಕೆಲಸ ಮಾಡುತ್ತಿರುವ ಆರು ಜನ ಮ್ಯಾನೇಜರ್ ಬಗ್ಗೆ ಹೇಳಲಾಗದು. ಅವರು ಕಂಪನಿಯ ಹೆಸರಿನ ಹಿಂದೆ ತಮ್ಮದೇ ಯಾವುದೋ ಒಂದು ಅನೈತಿಕ ಅಕ್ರಮ ಕೆಲಸದಲ್ಲಿ ತೊಡಗಿದ್ದಾರೆಂದು ನನಗೆ ಧೃಡವಾದ ನಂಬಿಕೆಯಿದೆ. ಆದರೆ ನಾನೊಬ್ಬಳೇ ಆಗಿರುವುದರಿಂದ ನನಗವರ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.

ನೀತು......ವಿಕ್ರಂ ಸಿಂಗ್ ರಾಜಸ್ಥಾನಕ್ಕೆ ಮರಳಿದ ತಕ್ಷಣ ಪಾವನಾಳ ಸಹಾಯಕ್ಕೆಂದು ಅತ್ಯಂತ ಚಾಣಾಕ್ಷರಾದ ಕೆಲವರನ್ನು ನೇಮಿಸು ಅಲ್ಲಿನಆರೂ ಜನ ಮ್ಯಾನೇಜರುಗಳ ಬಗ್ಗೆ ಆದಷ್ಟು ಬೇಗ ಎಲ್ಲಾ ಮಾಹಿತಿ ಸಂಗ್ರಹಿಸಿ ನನಗೆ ತಿಳಿಸಬೇಕು.

ವಿಕ್ರಂ ಸಿಂಗ್......ಖಂಡಿತವಾಗಿಯೂ ರಾಜಮಾತೆ.

ನೀತು.....ಪಾವನ ಕಂಪನಿಯ ಚಲಾವಣೆಗೆ ಸಧ್ಯಕ್ಕೆ 1500 ಕೋಟಿ ಹಣ ಸಾಕೆಂದು ಹೇಳಿದೆ ಅಲ್ಲವಾ.

ಪಾವನ.......ಹೌದು ಮೇಡಂ 1400—1500 ಕೋಟಿಗಳಷ್ಟು ಹಣ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಜೂನ್ 20ರ ಬಳಿಕ ಬೋರ್ಡ್ ನಿರ್ವಹಣೆಯಲ್ಲಿರುವ ಕಂಪನಿ ಅಕೌಂಟಿಗೆ 10—12 ಸಾವಿರಗಳಷ್ಟು ಕೋಟಿ ಪೇಮೆಂಟ್ ಆಗಲಿದೆ. ಇನ್ನೂ ಕೆಲವು ಕಂಪನಿಗಳು ಮತ್ತು ಹೊರದೇಶದ ವ್ಯವಹಾರ ಹಾಗು ಐಷಾರಾಮಿ ಹೋಟೆಲ್ಲುಗಳಿಂದ ಬರುವಂಪ ಹಣೆವೆಲ್ಲವೂ ರಾಜಮನೆತನದ ಅಧೀನದಲ್ಲಿರುವಂತ ಅಕೌಂಟಿಗೆ ಬರುತ್ತದೆ. ಅದರಿಂದ ರಾಜಮನೆತನದ ಅಧಿಕಾರಿವನ್ನು ಹೊಂದಿದವರು ಮಾತ್ರ ಹಣ ತೆಗೆಯುವುದಕ್ಕೆ ಸಾಧ್ಯ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಹಣ ತೆಗೆಯಲಾಗದು. ನಮ್ಮ ರಾಜಕುಮಾರಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ಕಂಪನಿಗೆ ಸಂಬಂಧಿಸಿದ ಎಲ್ಲಾ ಅಕೌಂಟುಗಳೂ ಅವರ ಅಧೀನಕ್ಕೆ ಬರುತ್ತೆ.

ನೀತು........ಅದರ ಬಗ್ಗೆ ನಾನು ಯೋಚಿಸುವೆ ಈಗ ನಿನಗೆ 2700 ಕೋಟಿ ಹಣ ನೀಡುವೆ ಅದನ್ನು ಕಂಪನಿಯ ಅಕೌಂಟಿಗೆ ಹಾಕಿಬಿಡು. ಕಂಪನಿಯ ನಿರ್ವಹಣೆಯ ಕಾರ್ಯಗಳು ಮುಗಿದ ನಂತರ ಹಾಗು ಬರಬೇಕಾಗಿರುವ ಪೇಮೆಂಟ್ಸ್ ಬಂದ ನಂತರ ಕಂಪನಿ ಅಕೌಂಟಿನ ಮೂಲಕವೇ ಈ ಹಣವನ್ನು ನಾನೀಗ ನಿನಗೆ ನೀಡುವ ಅಕೌಂಟಿಗೆ ವರ್ಗಾಯಿಸಿಬಿಡು. ಇದು ನಿಮ್ಮ ಕಿರಿಯ ರಾಜಕುಮಾರಿ ಬ್ಯಾಂಕ್ ಖಾತೆ.

ಹರೀಶ.......ಚಿನ್ನಿ ಇನ್ನೂ ಚಿಕ್ಕವಳಲ್ಲವಾ ನೀತು.

ನೀತು......ಮಕ್ಕಳು ವಯಸ್ಕರಾಗುವ ತನಕ ಅವರ ಹೆಸರಿನಲ್ಲಿರುವ ಅಕೌಂಟನ್ನು ತಂದೆ ಅಥವ ತಾಯಿ ಇಬ್ಬರಲ್ಲಿ ಯಾರಾದ್ರು ನಿರ್ವಹಣೆ ಮಾಡಬುಹುದಲ್ಲ ನನ್ನ ಮಗಳ ಖಾತೆ ನಾನು ನೋಡಿಕೊಳ್ಳುವೆ ಈಗ ಮುಂದಿನ ಮಾತುಕತೆಗಳೆಲ್ಲವೂ ನಾವು ಅರಮನೆಗೆ ಬಂದ ಮೇಲೇ. ಈಗ ನೀವೆಲ್ಲರೂ ನಮ್ಮ ಕುಟುಂಬದವರ ಜೊತೆ ಸೌಹಾರ್ದವಾಗಿ ಮಾತನಾಡಬಹುದು ಇಲ್ಯಾವುದೇ ರೀತಿಯ ರಾಜಾಜ್ಞೆಯೂ ನಿಮಗೆ ಅಡ್ಡಿಯಾಗಿರುವುದಿಲ್ಲ.

ಮನೆಯ ಮಕ್ಕಳೆಲ್ಲರೂ ಹೊರಗೆ ಷಟಲ್ ಕಾಕ್ ಆಡುತ್ತಿದ್ದು ಒಳಗೆ ಬಂದ ಸುರೇಶ.......ಚಿನ್ನಿ ನಿನ್ನ ಫ್ರೆಂಡ್ಸ್ ಬಂದಿದೆ ಅವಕ್ಕೆ ನೀನು ತಿಂಡಿ ಕೊಡಲ್ಲವಾ.

ಅಷ್ಟೊತ್ತೂ ಅಮ್ಮನ ಮಡಿಲಲ್ಲಿ ಗಾಂಭೀರ್ಯವೆತ್ತ ರಾಜಕುಮಾರಿ ರೀತಿ ಕುಳಿತು ಎಲ್ಲರನ್ನು ಗಮನಿಸುತ್ತಿದ್ದ ನಿಶಾ ಅಣ್ಣನ ಮಾತಿಗೆ ಕೆಳಗಿಳಿದು......ಮಮ್ಮ ನನ್ನಿ ಫೆಂಡ್ ಬಂತು ದಾಚಿ ಕೊಡು.

ನೀತು ಮಗಳ ತಲೆ ಸವರಿ......ಅಲ್ಲಿ ಆಂಟಿ ಹತ್ತಿರ ಈಸ್ಕೊ ಕಂದ.

ಕಿಚನ್ನಿನತ್ತ ಹೋಗುತ್ತಿರುವಾಗಲೂ ನಿಶಾಳ ದೃಷ್ಟಿ ಮಾತ್ರ ದಿಲೇರ್ ಸಿಂಗ್ ಪಕ್ಕದಲ್ಲಿದ್ದ ಖಡ್ಗದ ಮೇಲಿದ್ದು ಅನುಷಾಳಿಂದ ದ್ರಾಕ್ಷಿ ಮತ್ತು ಗೋಡಂಬಿ ಪಡೆದು ಮನೆಯಾಚೆ ಓಡಿದಳು.

ರಾಜೀವ್.......ಏನಮ್ಮ ನುತು ಇದೆಲ್ಲ ? ಈ ರೀತಿ ಒಂದು ರಾಜ್ಯದ ಮುಖ್ಯಮಂತ್ರಿ....ಮಂತ್ರಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಮಾರಣ ಹೋಮವನ್ನೇ ಮಾಡಿಸಲು ಸಜ್ಜಾಗಿರುವೆಯಲ್ಲ. ಹೀಗೆ ಮಾಡಿದರೆ ಇಡೀ ಸರ್ಕಾರ ಮತ್ತು ಕಾನೂನು ನಮ್ಮ ವಿರುದ್ದ ನಿಲ್ಲುವುದಿಲ್ಲವ ?

ರೇವತಿ......ಹೌದು ಕಣೆ ಈ ರಕ್ತಪಾತವನೆಲ್ಲಾ ಬಿಟ್ಟುಬಿಡು ನೋಡು ಮಕ್ಕಳಿಬ್ಬರೂ ನಮ್ಮ ಜೊತೆ ನೆಮ್ಮದಿಯಾಗಿದ್ದಾರೆ. ನಾವೀಗ ಸುಖ ಶಾಂತಿಯಿಂದ ಇದ್ದೀವಲ್ಲ ಹಿಂದೇನೇ ನಡೆದಿದ್ದರೂ ಅದೆಲ್ಲವನ್ನೂ ಮರೆತು ಬಿಡಮ್ಮ.

ನೀತು......ಅಪ್ಪ ಸಿಎಂ ಅಥವ ಇನ್ನಿತರರನ್ನು ನಾವೇ ಸಾಯಿಸಿದ್ದು ಅಂತ ನಾವೇನಾದರು ಡಂಗೂರ ಸಾರುತ್ತೇವಾ ? ಯಾರಿಗೆ ತಾನೇ ನಮ್ಮ ಮೇಲೆ ಅನುಮಾನ ಬರುವುದಕ್ಕೆ ಸಾಧ್ಯವಿದೆ ಹೇಳಿ ಅಪ್ಪಿತಪ್ಪಿ ಬಂದರೂ ಅದನ್ನೇಗೆ ಏದುರಿಸಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ಅಂತಹ ಪರಿಸ್ಥಿತಿ ನಿರ್ಮಾಣವಾಗುವುದೇ ಇಲ್ಲ. ಈ ದಿಲೇರ್ ಸಿಂಗ್.....ವಿಕ್ರಂ ಸಿಂಗ್ ಇವರಂತೆಯೇ ಸಾವಿರಾರು ಜನ ಕೇವಲ ನಿಶಾ ಮತ್ತು ನಿಧಿಗಾಗಿ ತಮ್ಮ ಪ್ರಾಣ ನೀಡುವುದಕ್ಕೂ ಸಹ ಒಂದು ಕ್ಷಣ ಯೋಚಿಸುವುದಿಲ್ಲ ಇವರ ತ್ಯಾಗ ಬಲಿದಾನಗಳಿಗೆ ಅವಮಾನ ಮಾಡೆಂದು ಹೇಳುತ್ತಿದ್ದೀರಾ ? ಅಮ್ಮ ನಾನೆಲ್ಲವನ್ನು ಮರೆತು ಇಲ್ಲೇ ಮಕ್ಕಳ ಜೊತೆ ನೆಮ್ಮದಿಯಾಗಿರಲು ಸಾಧ್ಯವೆಂದುಕೊಂಡಿದ್ದೀರಾ ಅದು ಸಾಧ್ಯವಾಗದ ಮಾತು ಯಾಕೆ ಗೊತ್ತ. ಸೂರ್ಯವಂಶದ ಸಮಸ್ತ ಆಸ್ತಿಗೂ ನಿಧಿ ಮತ್ತು ನಿಶಾ ಇಬ್ಬರೇ ವಾರಸುದಾರರು ಅಲ್ಲಿ ಅಧಿಕಾರವನ್ನು ಇವರಿಬ್ಬರು ಮಾತ್ರ ಪಡೆಯುವುದಕ್ಕೆ ಅರ್ಹರು ಬೇರೆ ಯಾರೂ ಸಹ ಹಕ್ಕು ಪ್ರತಿಪಾದಿಸದಂತೆ ರಾಜ ರಾಣಪ್ರತಾಪ್ ಅವರು ಬರೆದಿರುವ ವಿಲ್ ಸೂಚಿಸುತ್ತದೆ. ನಾವು ಕಾನೂನಿನಡಿಯೇ ಇವರಿಬ್ಬರ ಹಕ್ಕು ಕೊಡಿಸುವುದಕ್ಕೆ ಮುಂದಾದರೂ ಅದರಲ್ಲಿ ಹತ್ತು ಅಲ್ಲ ನೂರಾರು ಅಡಚಣೆಗಳನ್ನು ಸೃಷ್ಟಿಸುವವರು ಇರುವ ತನಕವೂ ಸುಲಭವಾಗಿ ಹಕ್ಕು ಪಡೆಯಲು ಸಾಧ್ಯವಿಲ್ಲ. ಇವರಿಬ್ಬರೇ ನಿಜವಾದ ರಾಜಮನೆತನದ ಮಕ್ಕಳೆಂಬುದಕ್ಕೆ ಸಾಕ್ಷಿ ಪುರಾವೆಗಳನ್ನು ಕೇಳುತ್ತಾ ಕೋರ್ಟಿನಲ್ಲಿ ಧಾವೆ ಹೂಡುತ್ತಾರೆ. ನಾವು ಕೋರ್ಟು ಕಛೇರಿಗಳಿಗೆ ಅಲೆಯುತ್ತ ಜೀವನ ಸವೆದು ಹೋಗುತ್ತದೆಯೇ ಹೊರತು ಸಮಸ್ಯೆಗೆ ಪರಿಹಾರವಂತೂ ಸಿಗುವುದಿಲ್ಲ. ಅದಕ್ಕಾಗಿ ಸಮಸ್ಯೆ ಸೃಷ್ಟಿಸುವ ಎಲ್ಲ ಜನರನ್ನು ದಾರಿಯಿಂದ ಸರಿಸಿ ನಂತರವೇ ಇವರಿಬ್ಬರು ತಮ್ಮ ಹಕ್ಕು ಪ್ರತಿಪಾದಿಸುವುದೆಂಬ ತಂತ್ರಕ್ಕೆ ನಾನು ಮುಂದಾಗಿರುವುದು. ರಾಜ ಸಂಸ್ಥಾನದ ದ್ರೋಹಿಗಳಿಗೆ ಅದರ ವಾರಸುದಾರಳು ರಾಜಕುಮಾರಿ ಹಿಂದಿರುಗಿದ್ದಾಳೆಂದು ಗೊತ್ತಾಗಿದೆ ಆದರೆ ಅವಳೆಲ್ಲಿದ್ದಾಳೆ ಎಂಬುದು ಮಾತ್ರ ಅವರಿಗೆ ತಿಳಿದಿಲ್ಲ. ನಾವೆಲ್ಲ ಮರೆತು ಸುಮ್ಮನಿದ್ದರೂ ಅವರು ಸುಮ್ಮನಿರುತ್ತಾರಾ ? ಎಂದಾದರೊಂದು ದಿನ ನನ್ನ ಮಕ್ಕಳ ಸುಳಿವು ಅವರಿಗೆ ಸಿಕ್ಕರೆ ಅವರು ಸುಮ್ಮನೆ ಕೂರುತ್ತಾರಾ ಖಂಡಿತವಾಗಿ ಇಲ್ಲ ಏನಾದರೊಂದು ಷಡ್ಯಂತ್ರ ಮಾಡೇ ಮಾಡುತ್ತಾರೆ. ನನ್ನ ಮಕ್ಕಳಿಗೆ ತೊಂದರೆ ಏದುರಾಗುವ ಮುಂಚೆಯೇ ಅದನ್ನು ಬೇರು ಸಮೇತವಾಗಿ ಕಿತ್ತು ಬಿಸಾಕಿ ಎಲ್ಲಾ ವಿದ್ರೋಹಿಗಳನ್ನೂ ಭೂಗತ ಮಾಡಿದಾಗಲೇ ಯಾವ ಭಯ ಆತಂಕವಿಲ್ಲದೆ ನನ್ನಿಬ್ಬರೂ ಮಕ್ಕಳು ನೆಮ್ಮದಿಯಾಗಿ ಇರುವಂತಹ ವಾತಾವರಣ ಸೃಷ್ಟಿಸಲು ಸಾಧ್ಯ ಇದು ತಾಯಿಯಾಗಿ ನನ್ನ ಕರ್ತವ್ಯವೂ ಹೌದು ರಾಣಾಪ್ರತಾಪ್ ಮತ್ತು ಸುಧಾಮಣಿಯ ಮಕ್ಕಳು ನನ್ನ ಮಕ್ಕಳಾಗಿರುವುದಕ್ಕೆ ನಾನವರ ಋಣ ಸಂದಾಯ ಮಾಡಲು ದಾರಿಯೂ ಹೌದು. ನನ್ನ ಮುದ್ದು ಕಂದಮ್ಮ ತಾಯಿಯ ಎದೆ ಹಾಲನ್ನು ಸಹ ಕುಡಿಯಲಿಲ್ಲ ಅಪ್ಪ ಯಾರೆಂದು ತಿಳಿದುಕೊಂಡು ಅವನಿಂದ ತನ್ನ ಚಿಕ್ಕ ಚಿಕ್ಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮುಂಚೆಯೇ ಅವರಿಬ್ಬರನ್ನು ಕಳೆದುಕೊಂಡು ಅನಾಥಳಾಗಿದ್ದಳು. ರಾಜಕುಮಾರಿಯಂತೆ ಮೆರೆಯಬೇಕಾದ ಮಗಳು ಚಿಕ್ಕ ವಯಸ್ಸಿನಲ್ಲಿ ಅನಾಥಾಶ್ರಮದಲ್ಲಿ ಯಾರೂ ಇಲ್ಲದಿರುವವಳ ರೀತಿ ಬದುಕುವಂತೆ ಮಾಡಿದವರನ್ನು ನಾನು ಮರೆತು ಬಿಡಬೇಕಾ ? ಅಮ್ಮ ನೀವು ಇದೆಲ್ಲ ಹೇಳುವುದಕ್ಕೂ ಕಾರಣವಿದೆ ಅದು ನನಗೂ ಗೊತ್ತು ಆದರೆ ಯಾರೇ ಅಡ್ಡಿಪಡಿಸಿದರೂ ಸರಿ ಈ ರಕ್ತರಂಜಿತವಾದ ಭವಿಷ್ಯದ ದಿನಗಳು ನಡೆದೇ ತೀರುತ್ತದೆ. ನೀವೇನೂ ಹೆದರಬೇಡಿ ಅಮ್ಮ ಯಾರಿಗೂ ಸಹ ಏನೂ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ನಿಮ್ಮ ಮಾತನ್ನು ಕೇಳದಿರುವುದಕ್ಕೆ ದಯವಿಟ್ಟು ಕ್ಷಮಿಸಿಬಿಡಿ.

ರಾಜೀವ್......ನೀನು ಹೇಳಿದ್ದರಲ್ಲಿ ಯಾವುದೂ ತಪ್ಪಿಲ್ಲ ಕಣಮ್ಮಾ ನೀನು ಅದಕ್ಕಾಗಿ ಕ್ಷಮೆ ಕೇಳುವ ಅಗತ್ಯವಿಲ್ಲ. ನಾವು ವರ್ತಮಾನ ಜೀವನದಲ್ಲಿ ಬದುಕುತ್ತ ಇತಿಹಾಸ ಮತ್ತು ಭವಿಷ್ಯದ ಬಗ್ಗೆ ಸ್ವಲ್ಪವೂ ಯೋಚಿಸಿರಲಿಲ್ಲ. ನಾವೆಲ್ಲವನ್ನು ಮರೆತರೂ ವಿರೋಧಿಗಳು ಮಾತ್ರ ಸುಮ್ಮನಿರುವುದಿಲ್ಲ ನೀನು ಮುನ್ನಡೆ ಪುಟ್ಟಿ ನಾನು ನಿನ್ನ ಜೊತೆಗೇ ಇದ್ದೀನಿ.

ರೇವತಿ......ಕ್ಷಮಿಸೇ ಮೊಮ್ಮಕ್ಕಳ ಜೊತೆ ಕಳೆಯುತ್ತಿರುವ ಆನಂದದ ದಿನಗಳನ್ನೇ ನೆನೆದು ಅವರಿಗಿರುವ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಯೋಚಿಸಲಿಲ್ಲ ನಾವೆಲ್ಲರೂ ನಿನ್ನ ಜೊತೆಗಿದ್ದೀವಿ ಕಣಮ್ಮ.

ನಿಶಾ ಮನೆಯೊಳಗೆ ಓಡೋಡಿ ಬಂದಾಗ ಅವಳ ಹಿಂದೆಯೇ ಪುಟ್ಟ ಕುಕ್ಕಿ ಮರಿಗಳೂ ಕುಣಿದಾಡುತ್ತ ಬಂದವು. ಈಗಲೂ ನಿಶಾಳ ದೃಷ್ಟಿ ದಿಲೇರ್ ಸಿಂಗ್ ಪಕ್ಕದಲ್ಲಿರುವ ಖಡ್ಗದ ಮೇಲೆಯೇ ನೆಟ್ಟಿತ್ತು.

ಹರೀಶ......ಚಿನ್ನಿ ಮರಿ ಬಾರಮ್ಮ ಇಲ್ಲಿ ಏನ್ ನೋಡ್ತಿದ್ದೀಯಾ ?

ಅಪ್ಪನನ್ನು ಸೇರಿಕೊಂಡು ನಿಂತ ನಿಶಾ ದಿಲೇರ್ ಸಿಂಗ್ ಕಡೆ ಬೆರಳು ತೋರಿಸುತ್ತ.......ಪಪ್ಪ ಅದಿ ಬೇಕು ನಂಗಿ ಬೇಕು.....ಎಂದಳು.

ದಿಲೇರ್ ಸಿಂಗ್ ಮುಗುಳ್ನಗುತ್ತ ನಿಶಾಳೆದುರು ಮಂಡಿಯೂರಿ ತನ್ಮ ಖಡ್ಗವನ್ನವಳ ಪಾದದ ಬಳಿಯಿಟ್ಟು ಕೈ ಮುಗಿದನು. ಅವನನ್ನೊಮ್ಮೆ ನೋಡಿದ ನಿಶಾ ಬಗ್ಗೆ ಕತ್ತಿಯನ್ನೆತ್ತಿಕೊಳ್ಳುವ ಪ್ರಯತ್ನ ಮಾಡಿದರೂ ತುಂಬ ಪುಟ್ಟವಳಾದ ಕಾರಣ ಸಾಧ್ಯವಾಗಲಿಲ್ಲ. ನಿಧಿ ತಂಗಿ ಪಾದದ ಬಳಿಯಿಂದ ಖಡ್ಗವನ್ನೆತ್ತಿ ಅದನ್ನು ಹೊರಗೆಳೆದು ಖಡ್ಗದ ಹಿಡಿಯಲ್ಲಿ ತಂಗಿಯ ಕೈಯನ್ನು ಹಿಡಿಸಿದಾಗ ನಿಶಾಳ ಮುಖದಲ್ಲಿ ರಾಜಕುಮಾರಿ ಛಾಯೆಯ ಗಾಂಭೀರ್ಯ ಎದ್ದು ಕಾಣಿಸತೊಡಗಿತು.

ನೀತು ಗರ್ವದಿಂದ ಮಕ್ಕಳಿಬ್ಬರನ್ನು ನೋಡಿ......ಅಮ್ಮ ನೋಡಿ ನನ್ನ
ಇಬ್ಬರು ಮಕ್ಕಳ ಮುಖದಲ್ಲಿರುವ ರಾಜಮನೆತನದ ತೇಜಸ್ಸು ಹೇಗೆ ಮೂಡಿಬಂದಿದೆ ಅಂತ. ತಾಯಿ ನಾನೇ ಆಗಿದ್ದರೂ ಅವರ ರಕ್ತದಲ್ಲಿ ರಾಜವಂಶದ ಛಾಯೆ ಇದೆಯಲ್ಲವಾ. ಖಡ್ಗ ರಾಜಪರಂಪರೆಯ ಪ್ರತೀಕವಾದದ್ದು ಅದರಿಂದ ಅವರಿಬ್ಬರನ್ನೂ ವ್ಯತಿರಕ್ತರನಾಗಿಸಲು ಹೇಗೆ ಸಾಧ್ಯವಿದೆ ? ನಿಧಿ ಕತ್ತಿ ಒರಣಿಯೊಳಗೆ ಹಾಕಿಬಿಡಮ್ಮ ಕಂದ ನೀನು ಬಾಯಿಲ್ಲಿ ( ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡು ) ನೀನು ಇನ್ನೂ ತುಂಬ ಪುಟ್ಟವಳು ಕಂದ ಸ್ವಲ್ಪ ದೊಡ್ಡವಳಾಗು ಆಮೇಲೆ ನಿಂಗೆ ಒಂದು ಪುಟಾಣಿ ಕತ್ತಿ ತರಿಸಿಕೊಡ್ತೀನಿ ಆಯ್ತಾ ಈಗ ಬೇಡ.

ಸುಮ.......ನೀತು ಎಲ್ಲರನ್ನೂ ಊಟಕ್ಕೆ ಏಬ್ಬಿಸು ರೆಡಿಯಾಗಿದೆ.

ರಜನಿ......ಮುಂದಿನ ಅಂಗಳದಲ್ಲಿ ಎಲ್ಲರೂ ಕೂರುವುದಕ್ಕೆಂದು ಪ್ರತಾಪ್ ವ್ಯವಸ್ಥೆ ಮಾಡಿದ್ದಾನೆ.

ದಿಲೇರ್.....ನಾವು ನಿಮ್ಮೊಂದಿಗೆ ಊಟಕ್ಕೆ ಕೂರುವುದು.......

ನೀತು.....ದಿಲೇರ್ ಸಿಂಗ್ ರಾಣಿ ಸುಧಾಮಣಿ ನಿಮ್ಮಿಬ್ಬರಿಗೂ ಸಹ ಊಟ ಬಡಿಸುತ್ತಿದ್ದರೆಂಬ ವಿಷಯ ನನಗೆ ಗೊತ್ತಿದೆ. ನೀವಿಬ್ಬರೂ ಅವರಿಗಿಂತ ಒಂದೆರಡು ವರ್ಷ ಚಿಕ್ಕವರಾಗಿದ್ದರೂ ನಿಮ್ಮನ್ನು ಅವರು ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರೆಂಬ ವಿಷಯವೂ ಗೊತ್ತಿದೆ. ಈಗಲೂ ನಮ್ಮ ಜೊತೆ ಊಟಕ್ಕೆ ಕೂರಲು ಸಂಕೋಚಿಸುವಿರಾ ?

ಊಟ ಮುಗಿದ ನಂತರ ಮನೆಯ ಗಂಡಸರ ಜೊತೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಮುಕ್ತವಾಗಿ ಮಾತನಾಡುತ್ತಿದ್ದರೆ ನೀತು ಸಹ ಪಾವನಾಳಿಗೆ ರೂಮಿನಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದ್ದಳು. ದಿಲೇರ್ ಸಿಂಗ್ ಹೊರಡುವುದಕ್ಕೂ ಮುನ್ನ ತನ್ನ ಹತ್ತು ಜನ ಆಪ್ತರ ಬಳಿ ನಿಂತು ಮನೆಯ ಯಾರೊಬ್ಬರಿಗೂ ತೊಂದರೆಯಾಗದ ರೀತಿ ತಮ್ಮ ನಿಷ್ಠೆಯನ್ನು ಪ್ರದರ್ಶಿಸುವಂತೇಳಿದನು.

ನೀತು.......ನಿಧಿ ನೀನಿಲ್ಲೇ ಇರು ನಾನು ನಿಮ್ಮಪ್ಪ ಹೋಗಿ ಹಣದ ಬ್ಯಾಗುಗಳನ್ನು ಕೊಟ್ಟು ಕಳುಹಿಸಿ ಬರ್ತೀವಿ.

ನಿಶಾ ಅಮ್ಮ ಅಪ್ಪ ಎಲ್ಲಿಗೋ ಹೋಗುತ್ತಾರೆಂದು ಕೇಳಿಸಿಕೊಂಡು ಚಪ್ಪಲಿ ಹಾಕಿಕೊಂಡವಳೇ ನೇರವಾಗಿ ಅಪ್ಪನ ಹೆಗಲಿಗೇರಿಕೊಂಡಳು

ನಿಧಿ.....ಅಮ್ಮ ಅಲ್ನೋಡಿ ನೀವು ಬೇಡ ಅಂತೀರ ಅಂತ ಚಿಲ್ಟಾರಿ ಆಗಲೇ ಅಪ್ಪನ ಬಳಿ ಹೋಗಿದ್ದಾಳೆ.

ರೇವತಿ......ಪಾಪ ಕಣೆ ಅವಳಿಗೆ ಗದರದೆ ಜೊತೆಗೆ ಕರೆದೊಯ್ಯಿ.

ನೀತು......ಈಗ ಬೇಡ ಅನ್ನುವುದಕ್ಕೂ ಸಾಧ್ಯವಿಲ್ಲಮ್ಮ ಅವರಪ್ಪ ಆಗಲೇ ಮಗಳನ್ನು ಕಾರಿನೊಳಗೆ ಕೂರಿಸಿಯಾಗಿದೆ. ಅಮ್ಮ ನಾವು ಹೋಗಿ ಬಂದುಬಿಡ್ತೀವಿ.

ಎಲ್ಲರೂ ಹೊರಡುವುದಕ್ಕೆ ಮನೆ ಗೇಟಿನ ಹತ್ತಿರ ಬಂದಾಗ ಎರಡು ಮಹಿಂದ್ರ ಜೀಪುಗಳು ಮನೆ ಮುಂದೆ ಬಂದು ನಿಂತವು.

ಅಶೋಕ......ರಕ್ಷಕರಿಗೆ ಓಡಾಡುವುದಕ್ಕೆ ಯಾವುದೇ ತೊಂದರೆ ಆಗದಿರಲಿ ಅಂತ ಇದನ್ನು ತರಿಸಿದ್ದೀವಿ.

ದಿಲೇರ್......ನಾನೂ ಇದರ ಬಗ್ಗೆ ಹೇಳಬೇಕೆಂದಿದ್ದೆ ಅಷ್ಟರಲ್ಲಿ ನೀವೇ ವ್ಯವಸ್ಥೆ ಮಾಡಿದ್ದೀರ.

ಹರೀಶ...ನೀತು ಮಗಳ ಜೊತೆ ಪಾವನಾಳನ್ನು ಕರೆದೊಯ್ದರೆ ಅವರ ಹಿಂದೆ ಜಾನಿ ಮತ್ತು ಅಶೋಕನ ಜೊತೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಹೊರಟರು. ಮನೆಯಿಂದ ತೆರಳುವ ಮುನ್ನ ವಿಕ್ರಂ ಮತ್ತು ದಿಲೇರ್ ಸಿಂಗ್ ಇಬ್ಬರೂ ನಿಧಿಯ ಮುಂದೆ ಮಂಡಿಯೂರಿ ಗೌರವ ಸೂಚಿಸುತ್ತಿರುವುದನ್ನು ಮಕ್ಕಳೆಲ್ಲರೂ ಮೊದಲ ಬಾರಿ ತುಂಬಾನೇ ಆಶ್ಚರ್ಯದಿಂದ ನೋಡುತ್ತಿದ್ದರು. ಜಾನಿಯ ತೋಟದಿಂದ ಹಣದ ಬ್ಯಾಗುಗಳನ್ನು ತೆಗೆದುಕೊಂಡು ಫುಡ್ ಯೂನಿಟ್ಟಿಗೆ ಬಂದಾಗ ಅಲ್ಲಿ ನಿಂತಿದ್ದ ಎರಡು ಛಾಪರ್ ನೋಡಿ ಅದರಲ್ಲಿ ಕೂರಿಸುವಂತೆ ನಿಶಾ ಅಮ್ಮನ ಕೆನ್ನೆ ಸವರುತ್ತ ಕೇಳಿದಳು.

ವಿಕ್ರಂ ಸಿಂಗ್.....ಎಲ್ಲವೂ ನಿಮ್ಮದೇ ಯುವರಾಣಿಯವರೇ ಬನ್ನಿರಿ ಒಂದು ಸುತ್ತು ಹಾಕಿಕೊಂಡು ಬರೋಣ.

ನೀತು......ಇಲ್ಲಿ ಬೇಡ ವಿಕ್ರಂ ಸಿಂಗ್ ಈ ಊರಿನಲ್ಲಿ ನನ್ನ ಮಗಳು ಸಾಮಾನ್ಯಳಂತೆ ಇರಲಿ ಹುಟ್ಟೂರಿಗೆ ಬಂದಾಗ ಅವಳಿಗೆ ಚಿಟ್ಟಾಗುವ ತನಕ ರೌಂಡ್ ಸುತ್ತಲಿ ಚಿನ್ನಿ ಈಗ ಬೇಡ ಕಂದ ನಾಳೆ ಹೋಗೋಣ ಆಯ್ತಾ.....ಎಂದು ಮಗಳನ್ನು ಸಮಾಧಾನ ಮಾಡುತ್ತಿದ್ದಳು.

ಹರೀಶ.....ನೀವು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಏಕೆಂದರೆ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ನಾವೀಗ ಕಣ್ಮರೆ ಮಾಡುತ್ತಿರುವುದು ಹಾಗಾಗಿ ಪ್ರತೀ ಹೆಜ್ಜೆಯನ್ನು ನಾವು ತುಂಬಾನೇ ಎಚ್ಚರಿಕೆಯಿಂದ ಇಡಬೇಕಾಗಿದೆ.

ದಿಲೇರ್ ಸಿಂಗ್....ನೀವೇನೂ ಚಿಂತಿಸಬೇಡಿ ಸರ್ ನಾವು ಮಾಡಿದ್ದು ಅನ್ನುವುದಕ್ಕೆ ಸಣ್ಣದೊಂದು ಸುಳಿವೂ ಸಿಗದಂತೆ ಕೆಲಸ ಮಾಡ್ತೀವಿ. ರಾಜಮಾತೆ ನಾವಿನ್ನು ಹೊರಡುತ್ತೇವೆ.

ನೀತು.......ಜೂನ್ 15ರ ನಂತರ ನಾನು ಫೋನ್ ಮಾಡುವೆ ನೀವು ಇಲ್ಲಿಗೆ ಛಾಪರ್ ಕಳುಹಿಸುವ ವ್ಯವಸ್ಥೆ ಮಾಡಿ.

ವಿಕ್ರಂ ಸಿಂಗ್......ನಾನೇ ಖುದ್ದಾಗಿ ಬರುತ್ತೇನೆ ರಾಜಮಾತೆ.

ನೀತು......ಪಾವನ ಯಾವುದೇ ರೀತಿ ಸಹಾಯ ಬೇಕಿದ್ದರೂ ನನಗೆ ತಿಳಿಸು ಅಥವ ಇವರಿಬ್ಬರನ್ನು ಸಂಪರ್ಕಿಸು ನನಗೆ ಪ್ರತಿದಿನವೂ ಅಲ್ಲಿ ಏನೇನು ನಡೆಯುತ್ತಿದೆ ಎಂಬ ವರದಿ ನೀಡಬೇಕು.

ಮೂವರೂ ಸರಿ ಎಂದೇಳಿ ಹೊರಟರೆ ಎರಡೂ ಹೆಲಿಕಾಪ್ಟರ್ ಗಗನ ಏತರಕ್ಕೇರುತ್ತ ಹಾರುತ್ತಿದ್ದುದನ್ನು ನಿಶಾ ಕಣ್ಬಾಯಿ ತೆರೆದುಕೊಂಡು ನೋಡುತ್ತಿದ್ದಳು. ಜಾನಿಯನ್ನು ಡ್ರಾಪ್ ಮಾಡಿ ಬರಲು ಅಶೋಕ ತೆರಳಿದರೆ ನಿಶಾ ಅಪ್ಪ ಅಮ್ಮನ ಜೊತೆ ಮನೆಗೆ ಹಿಂದಿರುಗಿದಳು. ಆ ದಿನವೆಲ್ಲಾ ಇದೇ ವಿಷಯವಾಗಿ ಚರ್ಚೆಗಳು ನಡೆಯುತ್ತಿದ್ದು ತಮ್ಮ ಹಾಗು ತಂಗಿಯರು ನಿಧಿಯನ್ನು ಸುತ್ತುವರಿದು ರಾಜಮನೆತನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
 
  • Like
Reactions: hsrangaswamy

Samar2154

Well-Known Member
2,620
1,693
159
Update posted.
 

hsrangaswamy

Active Member
967
258
63
ಕುತೂಹಲ ತಣಿಸಲು ಮುಂದಿನ ಭಾಗ ಬೇಕಾಗುತ್ತದೆ. ನಿರೀಕ್ಷೆಯಲ್ಲಿ ಓದುಗರು.
 

Venky@55

Member
205
80
28
ಮುಂದಿನ ಭಾಗಕ್ಕಾಗಿ ಕಾಯುತ್ತಾ.....
 

Karanswap

Member
285
128
44
Please update
 

Samar2154

Well-Known Member
2,620
1,693
159
ಕುತೂಹಲ ತಣಿಸಲು ಮುಂದಿನ ಭಾಗ ಬೇಕಾಗುತ್ತದೆ. ನಿರೀಕ್ಷೆಯಲ್ಲಿ ಓದುಗರು.
ಮುಂದಿನ ಭಾಗಕ್ಕಾಗಿ ಕಾಯುತ್ತಾ.....
Please update

ಫೈನಲ್ ಟಚಸ್ ಕೊಡ್ತಿದ್ದೀನಿ ಬೆಳಿಗ್ಗೆ ನಿಮ್ಮೆಲ್ಲರ ಮುಂದೆ ದೊಡ್ಡದೊಂದು ಅಪ್ಢೇಟ್ ನೀಡುವೆ.
 

Samar2154

Well-Known Member
2,620
1,693
159
ಭಾಗ 187


ಮಾರನೇ ದಿನ ತಿಂಡಿಯಾದ ನಂತರ.......

ಹರೀಶ......ಗಿರೀಶ ನಿನ್ನ ಜೊತೆ ದೃಷ್ಟಿ—ರಶ್ಮಿ ಇಬ್ಬರನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಬಾ ಅವರೂ ಅಲ್ಲಿನ ವಾತಾವರಣವನ್ನು ನೋಡಲಿ.

ಗಿರೀಶ......ಸರಿ ಅಪ್ಪ ಆದರೆ ಇಬ್ಬರನ್ನು ಹೇಗೆ ಕರೆದೊಯ್ಯಲಿ.

ರಶ್ಮಿ.....ನಾವಿಬ್ಬರು ಇನ್ನೊಂದು ಗಾಡಿಯಲ್ಲಿ ಬರ್ತೀವಲ್ಲ.

ಗಿರೀಶ.....ನಿನಗಿನ್ನೂ ಸರಿಯಾಗಿ ಗಾಡಿ ಓಡಿಸೋಕೆ ಬರಲ್ಲ ಅದಕ್ಕೆ ಕಾಲೇಜು ಶುರುವಾಗೋದಕ್ಕಿಂತ ಮುಂಚೆ ಕಾಲೋನಿಯೊಳಗಡೆ ನೀವಿಬ್ಬರು ಚೆನ್ನಾಗಿ ಪ್ರಾಕ್ಟೀಸ್ ಮಾಡಿ. ನಿಮ್ಮಿಬ್ಬರಿಗಿಂತ ಮುಂಚೆ ನಮಿತ ಗಾಡಿ ಓಡಿಸೋದಕ್ಕೆ ಕಲಿತಿದ್ದಾಳೆ ಅದುವೇ ನೀವಿಬ್ಬರೂ ಕಲಿಯಲು ಶುರು ಮಾಡಿದ ನಂತರ ಅವರು ಶುರು ಮಾಡಿದ್ದು.

ದೃಷ್ಟಿ......ಏನಿಲ್ಲ ನಾವೂ ಚೆನ್ನಾಗಿ ಓಡಿಸ್ತೀವಿ ಅಲ್ವಾ ಅಕ್ಕ.

ನಿಧಿ.....ಈಗ ಬಿಸಿಲೂ ಜಾಸ್ತಿ ಇರಲ್ಲ ಹೇಗೂ ಮನೆಯಲ್ಲಿ ಎರಡು ಆಕ್ಟಿವಾ ಇದೆಯಲ್ಲ ಈ ವಾರ ಪೂರ್ತಿ ಚೆನ್ನಾಗಿ ಪ್ರಾಕ್ಟೀಸ್ ಮಾಡಿ ಈಗ ಕಾಲೇಜಿಗೆ ನಾನೇ ಬರ್ತೀನಿ ಕಾರಲ್ಲೇ ಹೋಗೋಣ.

ಅಪ್ಪನ ಹೆಗಲಿಗೆ ಜೋತಾಕಿಕೊಂಡಿದ್ದ ನಿಶಾ.....ಪಪ್ಪ ನಾನಿ ಬೇಲ ಪಪ್ಪ ನಾನಿ ಹೋತಿನಿ.

ಹರೀಶ......ಬೇಡ ಕಂದ ನಾನು ನೀನು ಬೇರೆ ಕಡೆ ಮಾಮನ ಜೊತೆ ರೌಂಡ್ ಹೋಗಣ ಆಯ್ತಾ.

ಶೀಲಾ....ರೀ ನೀವೀಗೆಲ್ಲಿಗೆ ಹೋಗೋದು ?

ಹರೀಶ........ಸರ್ಪ್ರೈಸ್ ಬಂದಾಗ ನಿನಗೇ ತಿಳಿಯುತ್ತೆ ನಡಿ ಕಂದ ಅನು ಇವಳಿಗೆ ಬೇರೆ ಬಟ್ಟೆ ಹಾಕಿ ಬಿಡಮ್ಮ.

ಅನುಷ.....ಬಾ ಚಿನ್ನಿ ಮರಿ ಒಳ್ಳೆ ಫ್ರಾಕ್ ಹಾಕಿಕೊಂಡು ನೀನು ಪಪ್ಪ ಜೊತೆ ಟಾಟಾ ಹೋಗುವಂತೆ.

ನಿಧಿಯ ಜೊತೆ ಮೂವರು ಕಾಲೇಜ್ ನೋಡಿಕೊಂಡು ಬರುವುದಕ್ಕೆ ತೆರಳಿದರೆ ರೇವಂತ್ ಜೊತೆಯಲ್ಲಿ ಹರೀಶ ಮಗಳನ್ನೆತ್ತಿಕೊಂಡು ಹೊರಟನು. ಮಹಡಿಯಲ್ಲಿದ್ದ ನೀತು ಕೆಳಗೆ ಬಂದು ಮಗಳು ಎಲ್ಲೂ ಕಾಣಿಸದಿದ್ದಾಗ.....

ನೀತು.....ಎಲ್ಲೇ ನನ್ನ ಚೋಟ್ ಮೆಣಸಿನಕಾಯಿಯ ಸದ್ದೇ ಇಲ್ವಲ್ಲ.

ಶೀಲಾ.....ಅವರಪ್ಪನ ಜೊತೆ ಹೋಗಿದ್ದಾಳೆ.

ನೀತು.....ಎಲ್ಲಿಗೆ ?

ಶೀಲಾ......ನನಗೂ ಹೇಳಲಿಲ್ಲ ಕಣಮ್ಮ ಅದೇನೋ ಗೊತ್ತಿಲ್ಲ ಒಳ್ಳೆ ಸರ್ಪ್ರೈಸ್ ಅಂತ ಹೇಳಿ ಹೋಗಿದ್ದಾರೆ.

ನೀತು......ಅನು ಇವರ ಜೊತೆ ಸೆಕ್ಯೂರಿಟಿಗೆ ಹೋಗಿದ್ದಾರಾ ?

ಅನುಷ......ಹೂಂ ಅಕ್ಕ ರೇವಂತ್ ಅಣ್ಣನ ಹಿಂದೆಯೇ ನಾಲ್ಕು ಜನ ಜೀಪಿನಲ್ಲಿ ಹೋಗಿದ್ದಾರೆ.

ಎರಡು ಘಂಟೆ ನಂತರ........

ಗುಡುಗುಡು ಶಬ್ದ ಮಾಡುತ್ತ ಬುಲೆಟ್ ಕ್ಲಾಸಿಕ್ ಗಾಡಿ ಮನೆಯೊಳಗೆ ಪ್ರವೇಶಿಸಿದರೆ ಅಪ್ಪನ ಮುಂದೆ ಕುಳಿತಿದ್ದ ನಿಶಾ ತುಂಬ ಖುಷಿಯಲ್ಲಿ ಕಿರುಚಾಡುತ್ತ ಅಮ್ಮನನ್ನು ಕೂಗುತ್ತಿದ್ದಳು.

ಸುಮ......ಓ ಅಪ್ಪ ಮಗಳು ಹೊಸ ಗಾಡಿ ತೆಗೆದುಕೊಂಡು ಬರಲು ಹೋಗಿದ್ದಾ ?

ನೀತು......ರೀ ಇದೇನ್ರಿ ಇದು ಚಿಕ್ಕ ಮಕ್ಕಳ ಸೈಕಲ್ಲಿಗೆ ಕಟ್ಟುವ ರೀತಿ ಹಿಂದೆ ಮುಂದೆ ಎರಡೆರಡು ಬೆಲೂನ್ ಕಟ್ಟಿ ಕಳಿಸಿದ್ದಾರೆ.

ರೇವಂತ್.......ಶೋರೂಮಲ್ಲಿ ಹಲವು ಕಡೆ ಬೆಲೂನ್ ಕಟ್ಟಿದ್ದರು ನಿನ್ನ ಚಿಲ್ಟಾರಿ ಬಿಡಬೇಕಲ್ಲ ಅದರಲ್ಲಿ ನಾಲ್ಕನ್ನು ಗಾಡಿಗೆ ಕಟ್ಟುವ ತನಕ ಶೋರೂಮಲ್ಲಿದವರ ಹಿಂದಿಂದೆಯೇ ಓಡಾಡ್ತಾ ಇದ್ದಳು.

ಸುರೇಶ.....ಅಪ್ಪ ಗಾಡಿ ಚೆನ್ನಾಗಿದೆ ಇನ್ಮೇಲೆ ಇದರಲ್ಲಿಯೇ ಸ್ಕೂಲಿಗೆ ಹೋಗೋದು ತಾನೇ.

ನೀತು.....ಒಂದು ಗಾಡಿಯಲ್ಲಿ ನೀನು ಅಪ್ಪ ನಯನ ಮೂವರೂ ಹೋಗಲು ಆಗಲ್ಲ ಕಣೋ ಜೊತೆಗೆ ನಿಮ್ಮ ಬ್ಯಾಗುಗಳು ಇರುತ್ತಲ್ಲ. ಅದಕ್ಕೆ ಇನ್ಮುಂದೆ ಶಾಲೆಗೆ ಕಾರಿನಲ್ಲೇ ಹೋಗಬೇಕು.

ಅನುಷ.......ಭಾವ ಹೇಗೂ ನನ್ನ ಕಾರು ಮನೆಯಲ್ಲೇ ನಿಂತಿರುತ್ತಲ್ಲ ನೀವು ಅದರಲ್ಲೇ ಹೋಗಬಹುದು.

ರೇವಂತ್......ಹೂಂ ಅದೇ ಸರಿ ಹೇಗೂ ಅಶೋಕನ ಜೊತೆ ರವಿ ಹೋಗ್ತಾರೆ ರವಿಯ ಕಾರನ್ನು ಅಣ್ಣ ತೆಗೆದುಕೊಂಡು ಹೋಗ್ತಾನಲ್ಲ ನಾನಂತೂ ನಮ್ಮ ಕಾರು ಬರುವವರೆಗೆ ಬುಲೆಟಿನಲ್ಲೇ ಹೋಗ್ತೀನಿ.

ಪ್ರೀತಿ.......ರೀ ನೀವು ಕಾರ್ ಬುಕ್ ಮಾಡಿದ್ದೀರಾ ? ಯಾವಾಗ ?

ರೇವಂತ್......ನಿಮಗ್ಯಾರಿಗೂ ಹೇಳಿಲ್ಲ ಅಲ್ಲವ ಹತ್ತು ದಿನಗಳಾಗಿದೆ ಎರಡು ಕಾರು ಬುಕ್ ಮಾಡಿದ್ದೀವಿ ಇನ್ನೊಂದು ತಿಂಗಳಿನಲ್ಲಿ ಬರುತ್ತೆ ಅಂತ ಹೇಳಿದ್ದಾರೆ.

ನಿಶಾ......ಮಮ್ಮ ಇದಿ ನನ್ನಿ ಗಾಲಿ ಬಾ ಕೂಚಿ.

ನೀತು.......ಸರಿ ಕಂದ ಇದು ನಿಂದೇ ಗಾಡಿ ಈಗ ಕೆಳಗಿಳಿ.

ನಿಶಾ.....ನಾನಿ ಬಲಲ್ಲ ಮಮ್ಮ ಇಲ್ಲಿ ಕೂಚಿ ಮಾತೀನಿ.

ನೀತು......ಏಟ್ ಬೇಕಾ ?

ನಿಶಾ......ಏತ್ ಅಣ್ಣಗೆ ಕೊಲು ನಂಗಿ ಬೇಲ ನನ್ನಿ ಎತ್ತಿ ಮಮ್ಮ...... ಎನ್ನುತ್ತ ತನ್ನೆರಡು ಕೈಗಳನ್ನು ಅಮ್ಮನತ್ತ ಚಾಚಿದಳು.

ಸುರೇಶ್......ಲೇ ಚೋಟ್ ಮೆಣಸಿನಕಾಯಿ ನಂಗೆ ಏಟ್ ಕೊಡ್ಬೇಕ.

ನಯನ......ವೆರಿಗುಡ್ ಚಿನ್ನಿ ನಿಮ್ಮಣ್ಣಂಗೆ ಏಟು ಕೊಡಬೇಕಾದ್ದೇ.

ಪ್ರೀತಿ......ನೀವಿಬ್ರೂ ಕಿತ್ತಾಟ ಶುರು ಮಾಡಿದ್ರೆ ನಾನೇ ನಿಮ್ಮಿಬ್ಬರಿಗೆ ಕೊಡ್ತೀನಿ ಪುಸ್ತಕಗಳೆಲ್ಲವೂ ಬಂದಿದೆ ತಾನೇ ಹೋಗಿ ಓದಿಕೊಳ್ಳಿ.

ಹರೀಶ....ನಿಧಿ ಕಾಲೇಜಿನಿಂದ ಇನ್ನೂ ಬಂದಿಲ್ಲವಾ ?

ಅನುಷ.....ಅವರಾಗಲೇ ಕಾಲೇಜಿನಿಂದ ಹೊರಟು ಸವಿತಾ ಅಕ್ಕನ ಮನೆಯಲ್ಲಿದ್ದಾರಂತೆ ಅಲ್ಲೇ ಊಟ ಮಾಡಿಕೊಂಡು ಬರ್ತೀವಿ ಅಂತ ಫೋನ್ ಮಾಡಿ ಹೇಳಿದ್ದಾರೆ.

ಸುಮ....ನೀವೂ ಎಲ್ಲ ನಡೀರಿ ಊಟ ಮಾಡೋಣ ರೇವಂತ್ ಈಗ ನೀನು ಫ್ಯಾಕ್ಟರಿ ಕಡೆ ಹೋಗಬೇಕ ?

ರೇವಂತ್.......ಹೂಂ ಅತ್ತಿಗೆ ಬೆಳಗ್ಗಿನಿಂದಲೂ ಶೋರೂಮಿನಲ್ಲಿದ್ದೆ ಈಗೊಂದು ರೌಂಡ್ ಹೋಗಿ ಬರಬೇಕು.

ಹರೀಶ......ನಡಿ ಊಟ ಮಾಡ್ಕೊಂಡು ನಾನೂ ಬರ್ತೀನಿ.

ನಿಶಾ......ಪಪ್ಪ ನಾನಿ ಬತೀನಿ.

ನೀತು......ನಿನಗೆರಡು ಕೊಡ್ತೀನಿ ಸುಮ್ಮನೆ ಊಟ ಮಾಡಿಕೊಂಡು ತಾತನ ಜೊತೆ ಸ್ವಲ್ಪ ತಾಚಿ ಮಾಡುವೆ ನಡಿ.

ಸಂಜೆ ಮನೆಗೆ ಬಂದ ಅಶೋಕ...ರವಿ...ವಿಕ್ರಂ ಮೂವರೂ ಬುಲೆಟ್ ಮೇಲೆ ಒಂದೊಂದು ರೌಂಡ್ ಹೊಡೆದರೆ ನಿಶಾ ಎಲ್ಲರ ಜೊತೆಯಲ್ಲಿ ತಾನೂ ರೌಂಡ್ ಸುತ್ತುತ್ತಿದ್ದಳು. ಸಂಜೆವರೆಗೂ ಸವಿತಾಳ ಮನೆಯಲ್ಲಿ ಇದ್ದ ನಿಧಿ ಮನೆಗೆ ಮರಳಿದಾಗ ಬುಲೆಟ್ ತಂದಿರುವುದನ್ನು ತಿಳಿದು ತಾನೂ ಒಂದು ರೌಂಡ್ ಹೋಗಿ ಬರ್ತೀನೆಂದಳು.

ನಯನ.......ಅಕ್ಕ ನಿಮಗೆ ಬುಲೆಟ್ ಓಡಿಸುವುದಕ್ಕೂ ಬರುತ್ತಾ ?

ನಿಧಿ......ಯಾಕೆ ಅದೇನು ರಾಕೆಟ್ಟಾ ಅದರಲ್ಲೇನು ಮಹ ?

ನಯನ.....ಅಲ್ಲ ಅಕ್ಕ ಬುಲೆಟ್ ತುಂಬ ಭಾರವಾಗಿದೆ ಅದನ್ನಿಡಿದು ಸ್ಟಾಂಡ್ ಹಾಕುವುದಕ್ಕೇ ಸುರೇಶ ಒದ್ದಾಡ್ತಿದ್ದ ನೀವು ಓಡಿಸ್ತೀರ ?

ಸುರೇಶ.....ಏಯ್ ಕೋತಿ ನಾನ್ಯಾವಾಗ ಬುಲೆಟ್ ಸ್ಟಾಂಡ್ ಹಾಕ್ತಿದ್ದೆ ಒದ್ದಾಡ್ತಿದ್ದೆ ಅಂತ ಏನೇನೋ ಹೇಳ್ತಿದ್ದೀಯಲ್ಲ.

ನಯನ.....ನೀನು ಹಾಕಲಿಲ್ಲ ಆದರೆ ನಿನ್ನಿಂದ ಹಾಕಲು ಆಗುವುದಿಲ್ಲ ಅಂತ ಹೇಳಿದ್ದಷ್ಟೆ.

ನೀತು......ನೀವಿಬ್ರೂ ಪುನಃ ಕಿತ್ತಾಡಲು ಶುರು ಮಾಡಿದ್ರಾ.

ಸುರೇಶ.....ಅಮ್ಮ ನಾನೇನೂ ಮಾಡ್ಲಿಲ್ಲ ಕಣಮ್ಮ ಸುಮ್ಮನೆ ನಿಂತಿದ್ದೆ ಈ ಕೋತಿಯೇ ಶುರು ಮಾಡಿದ್ದು.

ನಯನ.....ನೋಡಿ ಅತ್ತೆ ನನ್ನ ಕೋತಿ ಅಂತಾನೆ.

ನೀತು.....ಸುರೇಶ ಹಾಗನ್ನುತ್ತಾರಾ ?

ಸುರೇಶ.....ಅಮ್ಮ ಇವಳೇ ಕಾಲ್ಕೆರೆದು ಜಗಳಕ್ಕೆ ಬಂದರೂ ನೀನು ನಂಗೇ ಬೈಯೋದು ಕಣಮ್ಮ.

ನೀತು....ಅಲ್ನೊಡು ನಿಮ್ಮಿಬ್ಬರ ಜಗಳ ನೋಡುತ್ತ ಖುಷಿಯಾಗಿ ಚಪ್ಪಾಳೆ ತಟ್ಟಿಕೊಂಡು ನನ್ನ ಚಿಲ್ಟಾರ್ ಏಂಜಾಯ್ ಮಾಡ್ತಿದ್ದಾಳೆ. ನೀವಿಬ್ಬರೂ ಈಗ ಹತ್ತನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಬರೆಯುತ್ತೀರಾ ಈಗಲೂ ಚಿಕ್ಕಮಕ್ಕಳ ರೀತಿ ಕಚ್ಚಾಡುವುದು ಸರಿಯಾ ?

ಪ್ರೀತಿ........ನಿನ್ನದೇ ತಪ್ಪು ಕಣೆ ಈ ಕೋತಿನ ತಲೆ ಮೇಲೆ ಕೂರಿಸಿ ಪಾಪ ಎಲ್ಲದಕ್ಕೂ ಸುರೇಶನನ್ನೇ ಬೈಯ್ತೀಯ ಅದಕ್ಕೆ ಇವಳು ಇಷ್ಟು ಹೆಚ್ಚಿಕೊಂಡಿರೋದು ಬಾಲ ಕಟ್ ಮಾಡಿದ್ರೆ ಸರಿ ಹೋಗುತ್ತೆ.

ನಿಧಿ.......ಅತ್ತೆ ನೀವು ವರಿ ಮಾಡ್ಕೊಬೇಡಿ ಇನ್ನೊಂದ್ಸಲ ಕಿತ್ತಾಡಲಿ ನಾನೇ ಇಬ್ರಿಗೂ ಸರಿಯಾಗಿ ಮಾಡ್ತೀನಿ. ಚಿನ್ನಿ ನಡಿ ನಾವೊಂದು ರೌಂಡ್ ಹೋಗಿ ಬರೋಣ.

ನಿಧಿ ತಂಗಿಯನ್ನು ಮುಂದೆ ಕೂರಿಸಿಕೊಂಡು ಬುಲೆಟ್ಟಿನಲ್ಲಿ ಹೊರಟರೆ ತಮ್ಮ ಹಿರಿಮಗಳನ್ನು ನೋಡಿ ನೀತು—ಹರೀಶ ಹೆಮ್ಮೆ ಪಡುತ್ತಿದ್ದರು.


......continue
 

Samar2154

Well-Known Member
2,620
1,693
159
continue.....


ಮಾರನೇ ದಿನ ಸುಕನ್ಯಾ—ಸವಿತಾರ ಹೆಸರಿನಲ್ಲಿ ಖರೀಧಿಸುತ್ತಿರುವ ಮನೆಯ ಮಾತುಕತೆಯನ್ನು ರವಿಯ ಮುಂದಾಳತ್ವದಲ್ಲಿ ಮುಗಿಸಿ ಜೂನ್ 10ನೇ ತಾರೀಖಿನಂದು ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ರವಿ.....ಸರ್ ಹೇಗೂ ನಾವು ಮನೆ ತೆಗೆದುಕೊಳ್ಳುವುದು ಖಚಿತವೇ ನೀವು ಒಪ್ಪಿಕೊಂಡರೆ ನಾಳೆಯಿಂದ ಮನೆಯೊಳಗಿನ ಕೆಲವು ಕೆಲಸ ಪ್ರಾರಂಭಿಸಬಹುದಾ ?

ಮನೆ ಮಾಲೀಕ......ಖಂಡಿತವಾಗಿ ಶುರು ಮಾಡಿ ಇನ್ನೆರಡು ವಾರವೇ ನಾನು ಮಾಲೀಕನಾಗಿರುವುದು ಆಮೇಲೆ ನಿಮ್ಮದೇ ತಾನೇ.

ವಿವೇಕ್......ಆದರೂ ಸರ್ ನಮ್ಮ ಹೆಸರಿಗೆ ವರ್ಗಾವಣೆ ಆಗುವರೆಗೆ ನಾವೇನೇ ಮಾಡುವುದಕ್ಕೂ ನಿಮ್ಮ ಅನುಮತಿಯ ಅಗತ್ಯವಿರುತ್ತೆ.

ಮನೆ ಮಾಲೀಕ.....ನೀವು ನಿಮ್ಮಿಷ್ಟದಂತೆ ಮನೆಯಲ್ಲೇನು ಚೇಂಜ್ ಮಾಡಬೇಕೆಂದು ಅನಿಸಿದರೂ ಮಾಡಿರಿ ನನ್ನದೇನು ಅಭ್ಯಂತರವಿಲ್ಲ

ರಜನಿ....ಅಂತೂ ಇನ್ನೊಂದು ತಿಂಗಳಿನೊಳಗೇ ನೀವಿಬ್ಬರೂ ನಮ್ಮ ಕಾಲೋನಿಗೇ ಬರುತ್ತಿದ್ದೀರ ತುಂಬ ಸಂತೋಷವಾಗ್ತಿದೆ ಕಣೆ.

ಅಣ್ಣ ಅಕ್ಕಂದಿರ ಜೊತೆ ನಿಶಾ ಹೊರಗೆ ಬಾಲ್ ಆಡುತ್ತಿದ್ದರೆ ಅವಳ ರಕ್ಷಣೆಗೆಂದು ಬಂದಿರುವವರಲ್ಲಿ ನಾಲ್ವರು ಗೇಟಿನ ಹತ್ತಿರವೇ ನಿಂತು ಕಾವಿಲಿಗಿದ್ದರು. ಮನೆಯೊಳಗೋಡಿ ಬಂದ ನಿಶಾ ಅಮ್ಮನನ್ನು ಸೇರಿ ನಿಂತು......ಮಮ್ಮ ನಂಗಿ ಸುಸಿ ಆತು.

ನೀತು ಮಗಳನ್ನೆತ್ತಿ ಮುದ್ದಾಡುತ್ತ......ನನ್ನ ಕಂದನಿಗೆ ಸುಸ್ತಾಗಿದೆಯ ನಡಿ ಚಿನ್ನಿ ನಿಂಗೆ ಜೂಸ್ ಕೊಡ್ತೀನಿ ನಿನ್ನ ಸುಸ್ತೆಲ್ಲ ಮಾಯವಾಗುತ್ತೆ.

ನಿಶಾ ಜೂಸ್ ಹೀರಿದ ನಂತರ ತಕ್ಷಣವೇ ಮನೆಯಾಚೆ ಓಡಿ ಪುನಃ ಅಣ್ಣಂದಿರ ಜೊತೆ ಆಡತೊಡಗಿದಳು.
* *
* *
ಜೂನ್ ಒಂದನೇ ತಾರೀಖು.....

ಇಂದಿನಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು ಹರೀಶ... ಸುರೇಶ ಮತ್ತು ನಯನ ಶಾಲೆಗೆ ಹೋಗಲು ರೆಡಿಯಾಗಿದ್ದರೆ ಗಿರೀಶ ಮತ್ತವನ ಭಾವೀ ಪತ್ನಿಯರಾಗುವ ರಶ್ಮಿ—ದೃಷ್ಟಿ ಕಾಲೇಜಿಗೆಂದು ರೆಡಿಯಾಗಿದ್ದರು. ಪ್ರೀತಿ ಅತ್ತೆಯ ಜೊತೆ ಫ್ರೆಶಾಗಿ ಕೆಳಗೆ ಬಂದ ನಿಶಾ ಅಪ್ಪ...ಅಣ್ಣಂದಿರ ಜೊತೆ ಅಕ್ಕಂದಿರು ರೆಡಿಯಾಗಿರುವುದನ್ನು ಕಂಡು ಅಪ್ಪನ ಬಳಿಗೋಡಿ ಮಡಿಲಿಗೇರಿದಳು.

ನಿಶಾ....ಪಪ್ಪ ನಿನಿ ಟಾಟಾ ಹೋತಿ ನಾನಿ ಬತೀನಿ.

ಹರೀಶ ಮಗಳನ್ನು ಮುದ್ದಾಡಿ......ಚಿನ್ನಿ ಮರಿ ನಾನೆಲ್ಲಿಗೂ ಟಾಟಾ ಹೋಗ್ತಿಲ್ಲ ಕಂದ ಸ್ಕೂಲಿಗೆ ಹೋಗೋದು ನೋಡಲ್ಲಿ ಅಕ್ಕ ಅಣ್ಣ ಸ್ಕೂಲಿಗೆ ರೆಡಿಯಾಗಿ ಯೂನಿಫಾರಂ ಹಾಕಿಕೊಂಡಿಲ್ಲವಾ.

ನಿಶಾ ತಲೆ ಕೆರೆದುಕೊಳ್ಳುತ್ತ.....ಪಪ್ಪ ನಾನಿ ಕೂಲ್ ಬೇಲ.

ಹರೀಶ ನಗುತ್ತ.....ನೀನಿನ್ನೂ ತುಂಬ ಪುಟ್ಟವಳು ಕಂದ ಇನ್ನೂ ಸ್ವಲ್ಪ ದೊಡ್ಡವಳಾಗು ಆಮೇಲೆ ನೀನೂ ದಿನ ಸ್ಕೂಲಿಗೆ ಬರುವಂತೆ ಈಗ ನಿನ್ನ ಕುಕ್ಕಿ ಮರಿ ಜೊತೆ ಆಡ್ತಿರು ಪಪ್ಪ ಸಂಜೆ ಬರುತ್ತೆ.

ಶೀಲಾ......ಈ ವರ್ಷವೂ ನೀವು ಕಾಲೋನಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡ್ತೀರಾ ?

ನೀತು.....ಅದೆಲ್ಲ ಬೇಡ ಕಣ್ರಿ ಈ ವರ್ಷದಿಂದ ನೀವು ಟ್ಯೂಶನ್ ಮಾಡುವುದಕ್ಕೇನು ಹೋಗಬೇಡಿ ಮನೆ ಮಕ್ಕಳಿಗೆ ಹೇಳಿಕೊಟ್ಟರೆ ಅಷ್ಟೇ ಸಾಕು.

ರವಿ.....ನೀತು ಮಾಡಲಿ ಬಿಡಮ್ಮ ವಿದ್ಯಾದಾನ ಒಳ್ಳೆಯದೇ ಅಲ್ಲವ.

ರಾಜೀವ್..ಹೌದಮ್ಮ ರವಿ ಹೇಳೋದು ಸರಿಯಾಗಿದೆ.

ಹರೀಶ.....ಇಲ್ಲ ಮಾವ ಈ ವರ್ಷದಿಂದ ನಮಗೆ ಟ್ಯೂಶನ್ ಮಾಡೊ
ಅವಕಾಶವಿಲ್ಲ. ಸರ್ಕಾರಿ ಶಾಲೆಯ ಪ್ರಾಧ್ಯಾಪಕರು ಮನೆಯ ಪಾಠ ಮಾಢುವಂತಿಲ್ಲ ಎಂದು ಸರ್ಕಾರದಿಂದ ಆದೇಶದ ಪ್ರತಿ ಬಂದಿದೆ ಅದಕ್ಕೆ ಮಾಡುತ್ತಿಲ್ಲ.

ನೀತು....ಅಬ್ಬ ಒಳ್ಳೆಯದಾಯಿತು ಮುಂದಿನ ಸಲ ಚುನಾವಣೆಯಲ್ಲಿ ನಾನಿದೇ ಪಕ್ಷಕ್ಕೆ ಓಟ್ ಹಾಕ್ತೀನಿ.

ಸುರೇಶ ಖುಷಿಯಾಗಿ.......ಅಂದ್ರೆ ಅಪ್ಪ ಇನ್ಮೇಲೆ ಟ್ಯೂಶನ್ ಇಲ್ಲ ಮನೆಯಲ್ಲೇ ಓದಿಕೊಳ್ಳೋದು ಅನ್ನಿ.

ಹರೀಶ......ಟ್ಯೂಶನ್ ಇಲ್ಲದಿದ್ದರೇನು ನಾನು ನಿಮ್ಮಿಬ್ಬರಿಗೆ ಮಾಥ್ಸ್ ಜೊತೆ ಸೈನ್ಸ್ ಹೇಳಿಕೊಡ್ತೀನಿ ನಿಮ್ಮ ಸವಿತಾ ಮೇಡಂ ಸೋಷಿಯಲ್ ಸೈನ್ಸ್ ಜೊತೆ ಅವರೂ ಕನ್ನಡ ಹೇಳಿಕೊಡ್ತಾರೆ.

ನಯನ.....ಮಾವ ಸುಕನ್ಯಾ ಮೇಡಂ ಯಾವ ಸಬ್ಜೆಕ್ಟ್ ಮಾಡೋದು

ಹರೀಶ......ಸುಕನ್ಯಾ ನಿಮಗೆ ಸಂಸ್ಕೃತ ಅಥವ ಹಿಂದಿ ಮಾಡ್ತಾಳೆ.

ಸುರೇಶ......ಅಪ್ಪ ಹೋದ ವರ್ಷ ಅವರು ಇಂಗ್ಲೀಷ್ ಮಾಡಿದ್ರು.

ಹರೀಶ......ನಿಮ್ಮ ಕ್ಲಾಸಿಗೆ ಈ ಸಲ ಬ್ರಿಜೇಷ್ ಸರ್ ಮಾಡೋದು ನಡೀರಿ ಹೋಗೋಣ ಟೈಮಾಯಿತು.

ಪ್ರೀತಿ ಅತ್ತೆಯ ಜೊತೆ ನಿಂತಿದ್ದ ನಿಶಾ ಅಪ್ಪ..ಅಣ್ಣ..ಅಕ್ಕನಿಗೆ ಟಾಟಾ ಮಾಡಿ ಬೀಳ್ಕೊಡುವಷ್ಟರಲ್ಲಿ ಕಾಲೇಜಿಗೆ ಹೋಗುವ ಮೂವರು ಸಹ ರೆಡಿಯಾಗಿ ಬಂದರು.

ರೇವತಿ.....ನೀವ್ಮೂರು ಜನ ಹೇಗೆ ಹೋಗ್ತೀರಾ

ರಶ್ಮಿ......ಅಜ್ಜಿ ನಮ್ಮನ್ನ ಅಕ್ಕ ಡ್ರಾಪ್ ಮಾಡ್ತಾರೆ.

ಸುಮ.....ಈ ವಾರ ನಿಧಿ ಬಿಡ್ತಾಳೆ ಅತ್ತೆ ಮುಂದಿನ ವಾರದಿಂದ ಇವರೇ ಆಕ್ಟಿವಾದಲ್ಲಿ ಹೋಗಲಿ.

ರಜನಿ.....ಇನ್ನೂ ರಶ್ಮಿ—ದೃಷ್ಟಿಗೆ ಟ್ರಾಫಿಕ್ಕಿನಲ್ಲಿ ಅಷ್ಟಾಗಿ ಸ್ಕೂಟರ್ ಓಡಿಸಿ ಅಭ್ಯಾಸವಿಲ್ಲವಲ್ಲ ಆಮೇಲೆ ಎಲ್ಲಿಗಾದರೂ ಗುದ್ದಿದರೇನು ?

ಸುಮ.....ಎಲ್ಲಿಗಾದರೂ ಗುದ್ದಲಿ ಬೇರೆ ಯಾರಿಗಾದ್ರೂ ಗುದ್ದಿ ಹೆಚ್ಚು ಕಡಿಮೆ ಮಾಡಿಬಿಟ್ಟರೆ ಅಂತ ಯೋಚಿಸಬೇಕು.

ದೃಷ್ಟಿ....ಅಮ್ಮ ನಾನು ರಶ್ಮಿ ನೀಟಾಗೇ ಓಡಿಸ್ತೀವಿ.

ರಶ್ಮಿ......ಹೂಂ ಆಂಟಿ ಕಾಲೋನಿಯೊಳಗೆ ನಾವೆಷ್ಟು ಕರೆಕ್ಟಾಗಿಯೇ ಓಡಿಸ್ತೀವಿ ಗೊತ್ತ ಬೇಕಿದ್ದರೆ ಅಕ್ಕನನ್ನೇ ಕೇಳಿ.

ಗಿರೀಶ.....ಕಾಲೋನಿಯೊಳಗೆ ಯಾವಾಗಲೋ ಒಂದೊಂದು ಗಾಡಿ ಬರುತ್ತೆ ಟೌನಿನಲ್ಲಿ ಹಾಗಲ್ಲ ಗೊತ್ತಿರಲಿ.

ನಿಧಿ......ಸುಮ್ನಿರು ಗಿರೀಶ ಅತ್ತೆ ನೀವೇನೂ ಚಿಂತಿಸುವ ಅಗತ್ಯವಿಲ್ಲ ಇಬ್ಬರೂ ಗಾಡಿ ನೀಟಾಗೇ ಓಡಿಸ್ತಾರೆ ಹೊರಗೆ ಬಿಡದಿದ್ದರೆ ಅವರಿಗೆ ಪ್ರಾಕ್ಟೀಸ್ ಆಗುವುದಾದರೂ ಹೇಗೆ ? ಈ ವಾರವಿಡೀ ಕಾಲೇಜಿನಿಂದ ಬಂದ ಮೇಲೆ ಟೌನಿನೊಳಗೆ ಗಾಡಿ ಓಡಿಸಲಿ ಅಲ್ಲವಾ ತಾತ.

ರಾಜೀವ್.....ಕರೆಕ್ಟಾಗಿ ಹೇಳಿದೆ ಕಣಮ್ಮ ನಾವೇ ಬಿಡದಿದ್ದರೆ ಗಾಡಿ ಓಡಿಸುವ ಪ್ರಾಕ್ಟೀಸ್ ಎಲ್ಲಿಂದ ಆಗುತ್ತೆ.

ನೀತು ಹೊರಬರುತ್ತ.......ಅಮ್ಮ ಮಕ್ಕಳನ್ನು ಡ್ರಾಪ್ ಮಾಡಲು ನಿಧಿ
ಜೊತೆ ನಾನೂ ಹೋಗಿ ಬರ್ತೀನಿ.

ಅಮ್ಮ ರೆಡಿಯಾಗಿರುವುದನ್ನು ನೋಡಿದ ನಿಶಾ ಅವಳ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ ನೀತು.........ಹೂಂ ಕಂದ ನೀನು ಬಾ ನಿನ್ನ ಬಿಟ್ಟು ಹೋಗಲ್ಲ.

ರಜನಿ......ಚಿನ್ನಿ ಅಮ್ಮ ಹೋಗಿ ಬೇಗ ಬರ್ತಾಳೆ ಪುಟ್ಟಿ ನೀನಿನ್ನೂ ಚಾನ ಮಾಡಿಲ್ಲ ಆಮೇಲೆ ತಿಂಡಿ ತಿನ್ಬೇಕು.

ನಿಶಾ ತಲೆ ಅಳ್ಳಾಡಿಸುವುದನ್ನು ನೋಡಿ ರೇವತಿ......ಹೋಗಿ ಬರಲಿ ಬಿಡಮ್ಮ ಎಲ್ಲರೂ ಇಂದಿನಿಂದ ಶಾಲಾ ಕಾಲೇಜಿಗೆ ಹೋಗುತ್ತಾರಲ್ಲ ಪಾಪ ಅವಳಿಗೂ ಬೇಸರವಾಗುತ್ತೆ.

ಮೂವರು ಮಕ್ಕಳನ್ನು ಕಾಲೇಜಿನಲ್ಲಿ ಬಿಟ್ಟು ಹಿಂದಿರುಗುವಾಗ ನಿಧಿ ಅಮ್ಮನಿಗೆ ಡ್ರೈವ್ ಮಾಡಲು ಬಿಟ್ಟು ನಿಶಾಳನ್ನು ಮುದ್ದಾಡುತ್ತಿದ್ದಳು.

ನೀತು......ಏನೀವತ್ತು ಅಕ್ಕ ತಂಗಿ ತುಂಬಾ ಮುದ್ದಾಡ್ತಿದ್ದೀರಲ್ಲ.

ನಿಧಿ.....ಅಮ್ಮಇವಳ ಜೊತೆಯಲ್ಲಿ ಕಳೆಯುವುದಕ್ಕೆ ನನಗೆ ಸಮಯ ಸರಿಯಾಗಿ ಸಿಕ್ಕಿರಲಿಲ್ಲ. ಇವಳೊಬ್ಬಳನ್ನೇ ಮುದ್ದಿಸಿದರೆ ಇನ್ನುಳಿದ ತಮ್ಮ ತಂಗಿಯರು ಅಕ್ಕನಿಗೆ ನಮ್ಮ ಮೇಲೆ ಪ್ರೀತಿಯಿಲ್ಲ ಅಂದ್ದೊಂಡ್ರೆ ಅದು ತಪ್ಪಾಗುತ್ತೆ ಅದಕ್ಕೆ ಅವರ ಜೊತೆಗಿರುತ್ತಿದ್ದೆ. ಈಗೆಲ್ಲರೂ ಶಾಲೆ ಕಾಲೇಜಿಗೆ ಹೋಗುವುದರಿಂದ ನಾನೀ ಚಿಲ್ಟಾರಿ ಜೊತೆಯಲ್ಲಿ ಜಾಸ್ತಿ ಸಮಯ ಕಳೆಯಬಹುದು.

ನಿಧಿ....ನಿಧಿ ಒಂದು ಕುಟುಂಬದಿಂದ ದೂರವಾಗಿ ಆಶ್ರಮದಲ್ಲಿದ್ದರೂ ನಿನಗೆ ಎಲ್ಲರನ್ನೇಗೆ ಪ್ರೀತಿಯಿಂದ ಸಂಭಾಳಿಸಬಹುದೆಂದು ಚೆನ್ನಾಗಿ ತಿಳಿದಿದೆ ಕಂದ. ಚಿನ್ನಿಗೆ ಬುದ್ದಿ ಚುರುಕಾಗಲಿ ಅಂತ ಹಲವಾರು ರೀತಿ ಆಟದ ಸಾಮಾನುಗಳನ್ನು ತಂದಿದ್ದೆವು ಆದರಿನ್ನೂ ಅವನ್ನು ಹೊರಗೆ ತೆಗೆದಿಲ್ಲ ಕಣೆ. ಈಗ ಹೇಗಿದ್ದರೂ ಇವಳೊಬ್ಬಳೇ ತಾನೇ ಇರೋದು ಅದನ್ನೆಲ್ಲಾ ತೆಗೆದು ಒಂದೊಂದಾಗಿ ಚಿನ್ನಿಗೆ ಹೇಳಿಕೊಡು ಈ ಚೋಟ ಶೈತಾನ್ ಈಗಿನಿಂದಲೇ ಚೂಟಿಯಾಗಿರಬೇಕು.

ನಿಧಿ....ಸರಿ ಅಮ್ಮ ಹಾಗೇ ಮಾಡ್ತೀನಿ ಚಿನ್ನಿ ಆಟ ಆಡಣ್ವಾ.

ನಿಶಾ ಖುಷಿಯಿಂದ.....ಅಕ್ಕ ಬಾಲ್ ಆಟ ಆತೀನಿ.

ನಿಧಿ.....ಬಾಲ್ ಬೇಡ ಚಿನ್ನಿ ಮರಿ ಬೇರೆ ಆಟ ಆಡೋಣ.

ಮನೆ ತಲುಪಿ ಸ್ನಾನ ತಿಂಡಿ ಮುಗಿಸಿ ಮಹಡಿಯಲ್ಲಿ ಅಮ್ಮನ ರೂಂ ಸೇರಿಕೊಂಡ ನಿಧಿ ಅಲ್ಲಿರುವ ಹಲವಾರು ರೀತಿ ಜೋಡಿಸುವುದು... ಕೂಡಿಸುವುದು....ಸೇರಿಸುವುವಂತ ಆಟದ ಸಾಮಾನುಗಳನ್ನೆಲ್ಲಾ ತೆಗೆದು ತಂಗಿಗೆ ಹೇಳಿಕೊಡುತ್ತಿದ್ದಳು. ನಿಶಾ ಎಲ್ಲವನ್ನು ಶ್ರದ್ದೆಯಿಂದ ನೋಡಿ ಕಲಿತುಕೊಂಡು ಅಕ್ಕನನ್ನು ಕೇಳುತ್ತ ಅವಳು ಹೇಳಿಕೊಟ್ಟಂತೆ ಜೋಡಿಸುತ್ತ ಆಡತೊಡಗಿದಳು.

ಕೆಳಗೆ ಹೆಂಗಸರು ಮಾತನಾಡುತ್ತಿದ್ದಾಗ ನೀತು ರೆಡಿಯಾಗಿ ಬಂದು...

ರೇವತಿ.....ಇದೇನೇ ಪುನಃ ಎಲ್ಲಿಗೆ ಹೊರಟೆಯಮ್ಮ ?

ನೀತು.....ಅಮ್ಮ ಅಶೋಕರ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಈ ಊರಿಗೆ ಶಿಫ್ಟಾಗಿದ್ದಾರೆ ಹೋಗಿ ಏನಾದರು ತೊಂದರೆ ಇದೆಯಾ ಅಂತ ಕೇಳಿಕೊಂಡು ಬರ್ತೀನಿ.

ಪ್ರೀತಿ.....ನೀತು ಐದು ನಿಮಿಷ ಕಾದಿರು ನಾನು...ಅಕ್ಕ...ರಜನಿ ಸಹ ನಿನ್ನ ಜೊತೆ ಬರ್ತೀವಿ.....ಎಂದೇಳಿ ಮೂವರು ರೆಡಿಯಾಗಲು ತಮ್ಮ ರೂಮಿಗೆ ಹೋದರೆ ನೀತು ಅಪ್ಪ ಅಮ್ಮನ ಜೊತೆ ಮಾತನಾಡುತ್ತ ಕುಳಿತಳು.
* *
* *

......continue
 

Samar2154

Well-Known Member
2,620
1,693
159
continue........


ಅಕ್ಕ ಹೇಳಿಕೊಟ್ಟ ಆಟಗಳನ್ನೆಲ್ಲಾ ಒಂದು ಘಂಟೆಗೂ ಅಧಿಕ ಹೊತ್ತು ಆಡಿದ ನಿಶಾ ಅಮ್ಮನ ಹತ್ತಿರ ಹೋಗಬೇಕೆಂದಾಗ ನಿಧಿ ತಂಗಿಯನ್ನು ಕೆಳಗೆ ಕರೆತಂದಳು. ಮನೆಯಲ್ಯಾರೂ ಕಾಣಿಸದೆ ಎಲ್ಲಾ ಕಡೆಯೂ ಹುಡುಕಾಡಿದ ನಿಶಾ ಅಜ್ಜಿಯ ಹತ್ತಿರ ಹೋಗಿ......

ನಿಶಾ.....ಅಜ್ಜಿ ನನ್ನಿ ಮಮ್ಮ ಲೆಲ್ಲಿ ?

ನಿಧಿ......ಹೌದಜ್ಜಿ ಅಮ್ಮ..ಅತ್ತೆ...ಆಂಟಿ ಯಾರೂ ಕಾಣುತ್ತಿಲ್ಲ ಶೀಲಾ ಆಂಟಿ ಮಾತ್ರ ರೂಮಿನಲ್ಲಿದ್ದಾರೆ.

ರೇವತಿ.....ಎಲ್ಲರೂ ಅಶೋಕನ ಫ್ಯಾಕ್ಟರಿಯ ಹತ್ತಿರ ಹೋಗಿದ್ದಾರೆ.

ನಿಧಿಯ ಕಾಲಿಗೆ ಜೋತು ಬಿದ್ದ ನಿಶಾ.....ಅಕ್ಕ ನನ್ನಿ ಮಮ್ಮ ಹತ್ತಾ ಹೋಗಣ ಬಾ ನನ್ನಿ ಮಮ್ಮ ಬೇಕು.

ರಾಜೀವ್.....ನಿಧಿ ನನ್ನ ಪುಟಾಣಿಯ ಜೊತೆ ನೀನೂ ಫ್ಯಾಕ್ಟರಿಯ ಹತ್ತಿರ ಹೋಗಿ ಬಾರಮ್ಮ ಅವಳಮ್ಮ ಹತ್ತಿರ ಹೋಗದೆ ಬಿಡಲ್ಲ.

ನಿಧಿ.....ಸರಿ ತಾತ ಅಮ್ಮನನ್ನು ಕೇಳ್ತೀನಿ ಅಕಸ್ಮಾತ್ ಅವರೇ ಮನೆ ಕಡೆ ಬರುತ್ತಿದ್ದರೆ ನಾವ್ಯಾಕೆ ಹೋಗೋದು.

ನೀತುವಿನ ಜೊತೆ ಮಾತನಾಡಿದ ನಿಧಿ ಅವರಿನ್ನೂ ಅಲ್ಲೇ ಇರುವ ಬಗ್ಗೆ ತಿಳಿದು ಅಜ್ಜಿ ತಾತನಿಗೆ ಹೇಳಿ ತಂಗಿಯ ಜೊತೆ ಸ್ವಿಫ್ಟ್ ಕಾರಿನಲ್ಲಿ ಹೊರಟರೆ ರಾಜಮನೆಯ ಆರಕ್ಷಕರಲ್ಲಿ ನಾಲ್ವರು ಜೀಪಿನಲ್ಲಿ ಇವರ ಹಿಂದೆ ಬೆಂಗಾವಲಿಗೆ ಹೊರಟರು. ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಿರುವ ಅಶೋಕನ ಆಫೀಸಿನ ಹಲವು ನೌಕರರು ಫ್ಯಾಕ್ಟರಿಯ ಹಿಂಭಾಗದಲ್ಲಿ ನಿರ್ಮಿಸಲಾದ ವಸತಿ ಸಮುಚ್ಚಯಕ್ಕೆ ಶಿಫ್ಟಾಗಿದ್ದು ಅಲ್ಲಿನ ಗೃಹಪ್ರವೇಶವನ್ನು ಮನೆ ಮಟ್ಟಕ್ಕೆ ಮೇ ತಿಂಗಳ ಕೊನೆಯಲ್ಲಿ ನೆರವೇರಿಸಲಾಗಿತ್ತು. ಅಲ್ಲಿ ವಾಸಿಸುವವರಿಗೆ ಸಕಲ ರೀತಿ ಸವಲತ್ತಿನ ಜೊತೆ ಪಕ್ಕದಲ್ಲಿಯೇ ಶುದ್ದ ಕುಡಿಯುವ ನೀರಿನ ಘಟಕವನ್ನು ಸಳ ಹಾಕಿಕೊಡಲಾಗಿತ್ತು.

ನೀತು......ಇಲ್ಲಿ ನೀವು ವಾಸಿಸುವುದಕ್ಕೆ ಯಾವುದೇ ತೊಂದರೆಯೂ ಆಗ್ತಿಲ್ಲ ತಾನೇ ಏನೇ ಸಮಸ್ಯೆಗಳಿದ್ದರೂ ಸಂಕೋಚವಿಲ್ಲದೆ ಹೇಳಿ.

ಆಫೀಸ್ ಮಾನೇಜರ್.....ಇಲ್ಲ ಮೇಡಂ ಎಲ್ಲ ರೀತಿಯ ಅನುಕೂಲ ಸಹ ಇಲ್ಲಿ ಮಾಡಿಕೊಟ್ಟಿದ್ದೀರ ಯಾವುದೇ ತೊಂದರೆಗಳಿಲ್ಲ.

ಅಶೋಕನ ಆಫೀಸಿನಲ್ಲಿ ಕೆಲಸ ಮಾಡುವವರ ಮಡದಿಯಲ್ಲಿ.....

ಹೆಂಗಸು1.....ನಮ್ಮ ಮಕ್ಕಳು ಇಲ್ಲಿಂದ ಶಾಲೆಗೆ ಹೋಗಿ ಬರುವುದಕ್ಕೆ ನೀವೇ ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟಿದ್ದೀರ ಅದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು ಮೇಡಂ.

ರಜನಿ....ಫ್ಯಾಕ್ಟರಿಯಿಂದ ಶಾಲೆಗೆ 6ಕಿಮೀ.. ದೂರವಿದೆ ಪ್ರತಿನಿತ್ಯ ನೀವು ಮಕ್ಕಳನ್ನು ಕರೆದೊಯ್ದು ಬಿಡುವುದು ಕರೆತರುವುದು ಕಷ್ಟದ ಕೆಲಸವೇ. ಇಲ್ಲಿಂದ ಒಟ್ಟು 45 ಮಕ್ಕಳು ಶಾಲೆಗೆ ಹೋಗುತ್ತಿರುವ ಕಾರಣ ನಾವೇ ಒಂದು ಬಸ್ಸಿನ ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಬಂದೆವು.

ನೀತು.....ನಿಮ್ಮೆಲ್ಲರನ್ನು xxxನಿಂದ ಕಾಮಾಕ್ಷಿಪುರಕ್ಕೆ ಶಿಫ್ಟ್ ಮಾಡಿಸಿ ಇಲ್ಲಿ ನಿಮಗೆ ತೊಂದರೆಯಾಗದ ರೀತಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಅಲ್ಲವ. ಇದಕ್ಕೆಲ್ಲಾ ನೀವು ನಮಗೆ ಧನ್ಯವಾದವನ್ನು ಹೇಳೊ ಅಗತ್ಯವಿಲ್ಲ ಇದೆಲ್ಲವೂ ನಮ್ಮ ಜವಾಬ್ದಾರಿ.

ಹೆಂಗಸು 3.....ಆದರೂ ಮೇಡಂ ಯಾವ ಫ್ಯಾಕ್ಟರಿಯವರು ತಮ್ಮಲ್ಲಿ ಕೆಲಸ ಮಾಡುವ ನೌಕರರಿಗೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ ಹೇಳಿ ಇದಕ್ಕಾಗಿ ನಿಮಗೆ ಧನ್ಯವಾದ ಹೇಳಿದರೆ ತಪ್ಪಿಲ್ಲ.

ಇವರೆಲ್ಲರ ಮಾತುಕತೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಸ್ವಿಫ್ಟ್ ಕಾರು ಎಲ್ಲರ ಹತ್ತಿರವೇ ನಿಂತರೆ ಕೆಳಗಿಳಿದ ನಿಧಿ ತಂಗಿಯನ್ನೂ ಇಳಿಸಿದಳು. ಒಮ್ಮೆ ತಮ್ಮ ಹಿಂದೆ ನಿಂತಿದ್ದ ರಕ್ಷಕರನ್ನು ನೋಡಿದ ನಿಶಾ ಅಮ್ಮನ ಬಳಿಗೋಡಿ ಅವಳ ಹೆಗಲಿಗೇರಿದಳು.

ನೀತು.....ಈ ನನ್ನ ಚಿಲ್ಟಾರಿಯ ಪರಿಚಯ ನಿಮಗೆಲ್ಲರಿಗೂ ಆಗಿದೆ ಇವಳು ನಿಧಿ ಅಂತ ನನ್ನ ಹಿರಿಮಗಳು ಬೇರೆ ಊರಿನಲ್ಲಿ ಓದುತ್ತಿದ್ಳು ಈ ವರ್ಷದಿಂದ ಇದೇ ಊರಲ್ಲಿ ಮುಂದುವರಿಸುತ್ತಾಳೆ.

ಅಲ್ಲಿ ನೆರೆದಿದ್ದ ಆಫೀಸ್ ನೌಕರರ ಕುಟುಂಬದ ಸುಮಾರು 30—35 ಜನ ಮಹಿಳೆಯರು ನೀತು ಮತ್ತು ನಿಧಿ ಇಬ್ಬರನ್ನು ತುಂಬ ಅಚ್ಚರಿಯ ದೃಷ್ಟಿಯಲ್ಲಿ ನೋಡುತ್ತಿದ್ದರು.

ಮಹಿಳೆ14.......ಮೇಡಂ ತಪ್ಪು ತಿಳಿಯಬೇಡಿ ಇವಳು ನಿಜವಾಗೂ ನಿಮ್ಮ ಮಗಳೇನ ?

ನೀತು......ಯಾಕೆ ಅನುಮಾನವಾ ?

ಮಹಿಳೆ28.......ಮೇಡಂ ಇವರು ಹೇಳಿದ್ದು ಅನುಮಾನದಿಂದಲ್ಲ ಆದರೆ ನಿಮಗಿಷ್ಟು ದೊಡ್ಡ ಮಗಳಿದ್ದಾಳೆಂದರೆ ನಂಬಲಿಕ್ಕೆ ಆಗ್ತಿಲ್ಲ.

ಮಹಿಳೆ16....ಹೂಂ ಮೇಡಂ ಈ ಮುದ್ದಾದ ಮಗು ನಿಮ್ಮ ಮಗಳು ಎಂದರೆ ತಿಳಿಯುತ್ತೆ ಆದರಿಷ್ಟು ದೊಡ್ಡ ಹುಡುಗಿ......

ಮಹಿಳೆ7.......ನಿಮಗೆ ಅಬ್ಬಬ್ಬಾ ಎಂದರೆ 26—27 ವರ್ಷವೇ ಆಗಿದೆ ಅನಿಸುತ್ತೆ ಆದರೆ 18—19 ವರ್ಷದ ದೊಡ್ಡ ಮಗಳು ಹೇಗೆ ?

ನೀತು ನಗುತ್ತ......ಅಯ್ಯೋ ನನಗೆ 25 ವರ್ಷವಲ್ಲ 38 ತುಂಬಿದೆ ನನ್ನನ್ನೇನು ಚಿಕ್ಕ ಹುಡುಗಿ ಅಂದ್ಕೊಂಡಿದ್ದೀರಾ ?

ರಜನಿ.....ಮತ್ತಿನ್ನೇನು ನೀವೆಲ್ಲರೂ ಸೇರಿ ಈ ಮುದುಕಿಗೆ ತುಂಬಾನೇ ಬಿಲ್ಡಪ್ ಕೊಡ್ತಿದ್ದೀರಲ್ಲ.

ರಜನಿಯ ಮಾತಿಗೆ ಎಲ್ಲರೂ ನಕ್ಕರೆ ನಿಶಾ ಅರಮನೆಯ ರಕ್ಷಕರನ್ನೇ ಧಿಟ್ಟಿಸಿ ನೋಡುತ್ತಿದ್ದಳು.

ನೀತು.....ಏನಾಯ್ತಮ್ಮ ಚಿನ್ನಿ ಅವರನ್ನೇಕೆ ಹಾಗೆ ನೋಡ್ತಿದ್ದೀಯ ?

ನಿಧಿ......ಅಮ್ಮ ಇವಳು ಅವರನ್ನಲ್ಲ ನೋಡ್ತಿರೋದು ಅವರ ಹತ್ತಿರ ಇದೆಯಲ್ಲ ಆ ಕತ್ತಿಗಳನ್ನ ನೋಡ್ತಿದ್ದಾಳೆ ಅದಕ್ಕೇ ಇವಳಿಗೂ ಒಂದು ಪ್ಲಾಸ್ಟಿಕ್ ಕತ್ತಿ ತೆಗೆದುಕೊಡಬೇಕಮ್ಮ.

ನೀತು......ಹೂಂ ಕಣೆ ಮನೆಗೆ ಹೋಗ್ತಾ ತಗೊಳ್ಳೋಣ.

ಹರೀಶ ಫೋನ್ ಮಾಡಿ......

ಹರೀಶ......ಎಲ್ಲಿದ್ದೀಯಮ್ಮ ಪುಟ್ಟಿ ? ನಿಮ್ಮಮ್ಮ ಜೊತೆಗಿದ್ದಾಳಾ ?

ನಿಧಿ......ಹೂಂ ಅಪ್ಪ ನಾವೆಲ್ಲರೂ ಫ್ಯಾಕ್ಟರಿಯ ಹತ್ತಿರ ಬಂದಿದ್ದೀವಿ ಅಮ್ಮ ಜೊತೆಯಲ್ಲಿದ್ದಾರೆ.

ಹರೀಶ......ಒಳ್ಳೆಯದಾಯಿತು. ಈಗಲೇ ನಿಮ್ಮಮ್ಮನ ಜೊತೆ ನೀನು ಯೂನಿವರ್ಸಿಟಿ ಕಾಲೇಜಿನ ಹತ್ತಿರ ಬಾ ನಿಮ್ಮ ಪ್ರಿನ್ಸಿಪಾಲ್ ಫೋನ್ ಮಾಡಿದ್ದರು ನಾನೂ ಶಾಲೆಯಿಂದ ಹೊರಡುತ್ತಿದ್ದೀನಿ.

ನಿಧಿ.....ಸರಿಯಪ್ಪ ಮನೆಗೆ ಹೋಗಿ ಡಿಕ್ಯುಮೆಂಟ್ಸ್ ತೆಗೆದುಕೊಂಡು ನಾನು ಅಮ್ಮ ಬರ್ತೀವಿ.

ಹರೀಶ......ನಾನೇ ಪ್ರಿನ್ಸಿಪಾಲ್ ಹತ್ತಿರ ಹೋಗಿ ಬರೋಣವೆಂದು ನಿನ್ನ ಡಾಕ್ಯುಮೆಂಟ್ಸ್ ಬೆಳಿಗ್ಗೆಯೇ ತೆಗೆದಿಟ್ಟುಕೊಂಡಿದ್ದೆ ಆದರೆ ನಿನ್ನ ಮತ್ತು ನಿಮ್ಮಮ್ಮನನ್ನೂ ಕರೆದುಕೊಂಡು ಬನ್ನಿ ಅಂದರು ನೀವಿಬ್ಬರು ನೇರವಾಗಿ ಹೊರಟು ಬಂದುಬಿಡಿ.

ನಿಧಿ......ಆಯ್ತಪ್ಪ ಈಗಲೇ ಹೊರಡ್ತೀವಿ....ಎಂದು ಫೋನಿಟ್ಟಳು.

ನೀತು......ನಿಮ್ಮಪ್ಪ ಎಲ್ಲಿಗೆ ಕರಿತಿರೋದು ?

ನಿಧಿ......ಅಮ್ಮ ನಾವೀಗಲೇ ಡಿಗ್ರಿ ಕಾಲೇಜಿನ ಹತ್ತಿರ ಹೋಗ್ಬೇಕಂತೆ ಅಪ್ಪನಿಗೆ ಪ್ರಿನ್ಸಿಪಾಲ್ ಫೋನ್ ಮಾಡಿ ನಮ್ಮಿಬ್ಬರನ್ನು ಬರುವುದಕ್ಕೆ ಹೇಳಿದ್ದಾರಂತೆ.

ನೀತು...ನಡಿ ಮನೆಗೆ ನಿನ್ನ ಡಾಕ್ಯುಮೆಂಟ್ಸ್ ತಗೊಂಡು ಹೋಗೋಣ

ನಿಧಿ......ಅದೆಲ್ಲವೂ ಅಪ್ಪನ ಹತ್ತಿರವೇ ಇದೆಯಂತೆ ನಮ್ಮನ್ನಿಲ್ಲಿಂದ ನೇರವಾಗಿ ಯೂನಿವರ್ಸಿಟಿಗೆ ಬನ್ನಿರೆಂದು ಹೇಳಿದರು.

ಸುಮ.....ನೀತು ನೀವಿಬ್ಬರು ಹೊರಡಿ ಮೊದಲು ನಿಧಿ ಕಾಲೇಜಿನ ಅಡ್ಮಿಷನ್ ಕೆಲಸ ಮುಗಿಸಿ.....ಎಂದು ನಿಧಿಯ ಹಣೆಗೆ ಮುತ್ತಿಟ್ಟು ಗುಡ್ಲಕ್ ಹೇಳಿದಳು.

ಅವಳಂತೆಯೇ ಪ್ರೀತಿ— ರಜನಿಯೂ ವಿಷಸ್ ಹೇಳಿದ ನಂತರ..... ಒಯ್ ಚೋಟ್ ಮೆಣಸಿನಕಾಯಿ ನೀನು ಅಮ್ಮನ ಜೊತೆ ಬೇಡ ಬಾ ನಾವು ಮನೆಗೆ ಹೋಗೋಣ.

ನಿಶಾ ಬರಲ್ಲವೆಂದು ತಲೆ ಅಳ್ಳಾಡಿಸಿ ಅಮ್ಮನನ್ನು ತಬ್ಬಿಕೊಂಡಳು.

ನೀತು.....ಇಲ್ಲ ಕಂದ ಅಮ್ಮ ನಿನ್ನ ಬಿಟ್ಟೋಗಲ್ಲ ನಡಿ ನಾವು ಅಕ್ಕನ ಕಾಲೇಜ್ ನೋಡಿಕೊಂಡು ಬರೋಣ.

ಅಮ್ಮ ಮಕ್ಕಳಿಬ್ಬರು ಸ್ವಿಫ್ಟಲ್ಲಿ ಹೊರಟರೆ ರಕ್ಷಕರು ಅವರನ್ನು ತಮ್ಮ ಜೀಪಿನಲ್ಲಿ ಹಿಂಬಾಲಿಸುತ್ತ ಹೊರಟರು.

ಮಹಿಳೆ25.....ಮೇಡಂ ಒಂದು ವಿಷಯ ಕೇಳಬಹುದಾ ನೀವು ತಪ್ಪು ತಿಳಿಯಬಾರದು.

ಪ್ರೀತಿ.....ನಾವೇಕೆ ತಪ್ಪು ತಿಳಿಯುತ್ತೀವಿ ಏನದು ಕೇಳಿ.

ಮಹಿಳೆ25.....ಮೇಡಂ ನೀವೆಲ್ಲರೂ ಇಲ್ಲಿಗೆ ಬಂದಾಗ ನಿಮ್ಮ ಜೊತೆ ಯಾವ ಸೆಕ್ಯೂರಿಟಿಯವರೂ ಇರಲಿಲ್ಲ ಆದರೆ ನೀತು ಮೇಡಂನ ಮಕ್ಕಳಿಬ್ಬರು ಬಂದಾಗ ಅವರಿಗೆ ಸೆಕ್ಯೂರಿಟಿಯವರು ಬಂದಿದ್ದರು.

ಮಹಿಳೆ18....ಹೌದು ಮೇಡಂ ನಾವೆಲ್ಲರೂ ಗಮನಿಸಿದೆವು ಅದಕ್ಕೇ ನಿಮ್ಮನ್ನು ಕೇಳಿದ್ದು.

ಮಹಿಳೆ34.....ಮೇಡಂ ಇವರು ಸಾಮಾನ್ಯ ಸೆಕ್ಯೂರಿಟಿಯವರೆಂದು ಕಾಣಿಸಲಿಲ್ಲ ಯಾವುದೋ ರಾಜಮಹಾರಾಜರ ಅಪ್ತ ರಕ್ಷಕರಂತೆ ಕಾಣಿಸುತ್ತಿದ್ದರು.

ಸುಮ.....ಇದರ ಬಗ್ಗೆ ನಾವು ಜಾಸ್ತಿ ಹೇಳಲಾಗುವುದಿಲ್ಲ ಆದರಿಷ್ಟು ಮಾತ್ರ ಹೇಳಬಲ್ಲೆ ನಮ್ಮ ಮನೆಯ ಪುಟ್ಟ ದೇವತೆ ನಿಶಾ ಸಾಮಾನ್ಯ ಹುಡುಗಿಯಲ್ಲ. ಅದಕ್ಕಾಗಿಯೇ ಅವಳ ಮೇಲೆ ಕೆಲವು ದುಷ್ಟಶಕ್ತಿಗಳ ಕಣ್ಣಿದೆ ಅವಳಿಗೋಸ್ಕರವೇ ನಾವು ಸೆಕ್ಯೂರಿಟಿ ಇಟ್ಟಿರುವುದು.

ಮಹಿಳೆ22.....ಪಾಪ ಮೇಡಂ ಅಷ್ಟು ಮುದ್ದಾದ ಮಗುವಿನ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿದೆ ಅವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಲ್ಲರೂ ನರಕದಲ್ಲಿ ಕೊಳೆಯುತ್ತಾರೆ.

ಮಹಿಳೆ29.....ನಾವೆಲ್ಲರೂ ಅದನ್ನೇ ಬೇಡಿಕೊಳ್ತೀವಿ ಮೇಡಂ ನಿಶಾ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ.

ರಜನಿ.....ನಿಮ್ಮಂತ ಒಳ್ಳೆ ಮನಸ್ಸಿನವರ ಹಾರೈಕೆಯೇ ನಮ್ಮ ಮನೆ ಮಗುವಿಗೆ ಶ್ರೀರಕ್ಷೆ.

ಪ್ರೀತಿ.....ನಿಮಗೆ ಯಾವುದೇ ರೀತಿ ತೊಂದರೆಗಳಿದ್ದರೂ ನಾವೇನು ತಿಳಿದುಕೊಳ್ತೀವೋ ಅಂತ ಯೋಚಿಸದೆ ನಿಸ್ಸಂಕೋಚವಾಗಿ ತಿಳಿಸಿ ನಾವದನ್ನು ಬಗೆಹರಿಸುತ್ತೀವಿ.

ರಜನಿ.....ಇಲ್ಲಯೇ ಸೆಕ್ಯೂರಿಟಿಯ ಮುಖ್ಯಸ್ಥ ಬಸ್ಯ ಅಂತ ಇರ್ತಾನೆ ಅವನ ಬಳಿ ತಿಳಿಸಿದರೂ ಸಾಕು. ಕಛೇರಿ ಪ್ರಾರಂಭವಾದ ನಂತರ ಎಲ್ಲರೂ ಇಲ್ಲಿಯೆ ಸಿಗುತ್ತಾರೆ.

ಹೆಂಗಸರಿಂದ ಬೀಳ್ಗೊಂಡು ಮೂವರು ಮನೆಯ ಕಡೆಗೆ ಹೊರಟರೆ ಹೆಂಗಸರ ಸಹಜ ಪ್ರವೃತ್ತಿಯಂತೆ ಎಲ್ಲರೂ ಅಲ್ಲಿಯೇ ಸೇರಿಕೊಂಡು ನಿಶಾಳ ವಿಷಯವಾಗಿ ಮಾತನಾಡುತ್ತ ನಿಂತರು.
* *
* *

........continue
 
Top