• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,694
1,759
159
Continue......


ನಿಶಾ........ಮಮ್ಮ..ಮಮ್ಮ ಲಿಲ್ಲಿ ಬಾ.

ನೀತು.......ಈಗ ನನ್ನ ಮಗಳ ಕಣ್ಣಿಗೆ ಅದೇನು ಬಿತ್ತಪ್ಪ.....ಎಂದು ನಗುತ್ತ ಮಗಳ ಹತ್ತಿರ ಬಂದರೆ ಒಂದು ಬೆಳ್ಳಿ ಸ್ಟೂಲಿನ ಮೇಲಿಟ್ಟಿದ್ದ ಬೆಳ್ಳಿಯಿಂದಲೇ ಮಾಡಿರುವ ತಿಜೋರಿಯತ್ತ ಬೆರಳು ತೋರಿದಳು.

ನೀತು......ಇದನ್ನೆಲ್ಲಿಂದ ಹುಡುಕಿದೆಯಮ್ಮ ಕಂದ ಈಗ ನಿನಗಿದೂ ಬೇಕಾ ?

ನಿಶಾ......ಮಮ್ಮ ಇದಿ ಏನು ?

ವರ್ಧನ್ ತಿಜೋರಿಯನ್ನು ಮುಟ್ಟಿ ನಮಸ್ಕರಿಸಿ......ಅಕ್ಕ ಇದೊಂದು ಅತ್ಯಂತ ಪುರಾತನವಾದ ತಿಜೋರಿ ಇದರ ಮೂಲ ಯಾವುದೆಂದು ಗೊತ್ತಿಲ್ಲ ಆದರೆ ಸೂರ್ಯವಂಶಿಗಳ ಕಳೆದ 13—14 ಪೀಳಿಗೆಗಳಲ್ಲಿ ಯಾರೊಬ್ಬರಿಂದಲೂ ಈ ತಿಜೋರಿಯನ್ನು ತೆಗೆಯಲಾಗಿಲ್ಲ ಅಂತ ಅಪ್ಪ ಹೇಳುತ್ತಿದ್ದರು.

ಹರೀಶ......ತಿಜೋರಿ ತೆಗೆಯಲಾಗಿಲ್ಲ ಅಂದರೇನು ವರ್ಧನ್ ? ಇದರ ಕೀ ಕಳೆದು ಹೋಗಿದೆಯಾ ?

ವರ್ಧನ್......ಭಾವ ಬೀಗವೇ ಇಲ್ಲದಿರುವಾಗ ಕೀ ಎಲ್ಲಿಂದ ತಾನೇ ಕಳೆದು ಹೋಗುವುದಕ್ಕೆ ಸಾಧ್ಯ ?

ನಿಧಿ......ಈ ತಿಜೋರಿಗೆ ಬೀಗವೇ ಇಲ್ಲವಾ....ಎಂದು ತಿಜೋರಿಯ ಸುತ್ತಲೂ ನೋಡಿದರೆ ಅದಕ್ಕೊಂದು ಸಣ್ಣ ಕಿಂಡಿಯೂ ಇರಲಿಲ್ಲ.

ನಿಶಾ ತಿಜೋರಿಯನ್ನೇ ತುಂಬ ಗಮನವಿಟ್ಟು ನೋಡುತ್ತಿದ್ದು ಅವಳಿಗೆ ಅದೇನನ್ನಿಸಿತೋ ಏನೋ ಕತ್ತಿನಲ್ಲಿ ಹಾಕಿಕೊಂಡಿದ್ದ " ॐ " ಕಾರದ ಡಾಲರನ್ನಿಡಿದು ಆ ತಿಜೋರಿಯ ಮುಂಭಾಗದಲ್ಲಿ ಕೆತ್ತನೆ ಮಾಡಿದ್ದ ಶಿವ ಪಾರ್ವತಿಯರ ವಿಗ್ರಹದ ಕೆಳಗಿರುವ " ॐ " ಕಾರದ ಚಿನ್ನೆಯ ಮೇಲಿಟ್ಟಳು. ನೀತು ಮಗಳೇನು ಮಾಡುತ್ತಿದ್ದಾಳೆಂದು ನೋಡುತ್ತ ಇರುವಾಗಲೇ ಆಚ್ಚರಿಯೆಂಬಂತೆ ತಿಜೋರಿಯ ಮೇಲಿರುವ " ॐ " ಕಾರದ ಚಿನ್ನೆಯು ನಿಶಾ ಕತ್ತಿನಲ್ಲಿದ್ದ ಜಗತ್ತಿನ ಏಕೈಕ ಅಮೂಲ್ಯವಾದ ರುದ್ರಾಕ್ಷಿ ಜಡಿತವಾದ "ॐ" ಕಾರದ ಡಾಲರಿನ ಸ್ಪರ್ಶವನ್ನು ಗುರುತಿಸಿ ಒಂದು ಪ್ರಕಾಶಮಾನವಾದ ಬೆಳಕನ್ನು ಹೊರಸೂಸಿತು. ಎಲ್ಲರಿಗೂ ಕೆಲಹೊತ್ತು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗಿ ಬಂದಿದ್ದು ನಂತರ ಕಣ್ತೆರೆದರೆ ತಿಜೋರಿಯ ಬಾಗಿಲು ತೆರೆದುಕೊಂಡಿದ್ದು ನಿಶಾ ಅದನ್ನೇ ಕಣ್ಣರಳಿಸಿ ನೋಡುತ್ತ ಮುಗುಳ್ನಗುತ್ತಿದ್ದಳು.

ಹರೀಶ........ಕಂದ ಇದನ್ನೇಗೆ ತೆಗೆದೆಯಮ್ಮ ?

ನಿಶಾ ಮುಗ್ದತೆಯಿಂದ....ಮಮ್ಮ ಹೇಳಿ ನಾನಿ ತೆದ್ದಿ ಪಪ್ಪ....ಎಂದಾಗ
ಪ್ರತಿಯೊಬ್ಬರೂ ಅವಳನ್ನೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದರು. ಅವಳಾಡುತ್ತಿದ್ದ ಮಾತುಗಳನ್ನು ನಿಧಿ ಹಿಂದಿಗನುವಾದಿಸಿ ಚಿಕ್ಕಪ್ಪನಿಗೆ ಹೇಳುತ್ತಿದ್ದು ಅದನ್ನು ಕೇಳಿ ಆತನಿಗೂ ಪರಮಾಶ್ಚರ್ಯವಾಯಿತು.

ವರ್ಧನ್.....ಇದೊಂದು ರೀತಿಯ ಪವಾಡವೇ ಹಲವಾರು ಪೀಳೆಗೆ ತೆಗೆಯಲಾಗದಿದ್ದ ತಿಜೋರಿಯನ್ನು ನಮ್ಮ ಕಂದ ಸಲೀಸಾಗಿಯೇ ತೆಗೆದು ಬಿಟ್ಟಿದ್ದಾಳಲ್ಲ.

ಅನುಷ......ಇದೇನಿದು ತಿಜೋರಿಯಲ್ಲಿ ಒಂದು ಪುಟ್ಟ ಲಿಂಗವನ್ನು ಬಿಟ್ಟರೆ ಬೇರೇನೂ ಇಲ್ಲ.

ನಿಶಾ ತಕ್ಷಣ ಲಿಂಗವನ್ನು ಕೈನಲ್ಲೆತ್ತಿಕೊಂಡು......ಇದಿ ನಂದು ನಾನಿ ಕೊಲಲ್ಲ ಲಿಲ್ಲ ಪಪ್ಪ ಇದಿ ನಂದು.

ಹರೀಶ ಮಗಳನ್ನೆತ್ತಿ ಮುದ್ದಾಡಿ.....ಆಯ್ತಮ್ಮ ಕಂದ ಇದು ನಿಂದೇ ಯಾರಿಗೂ ಕೊಡ್ಬೇಡ.....ಎನ್ನುತ್ತಿದ್ದರೆ ನಿಶಾ ಕೈಯಲ್ಲಿಡಿದಿದ್ದ ಲಿಂಗ ಮತ್ತು ಅಮೂಲ್ಯವಾದ ಏಕೈಕ ರುದ್ರಾಕ್ಷಿ ಜಡಿತವಾಗಿದ್ದ ॐ ಕಾರದ ಡಾಲರನ್ನು ಪರಸ್ಪರ ಸೋಕಿಸುತ್ತಿದ್ದಳು. ಒಂದು ಕ್ಷಣ ಅರಮನೆಯೇ ಕಂಪಿಸುವಂತಹ ಸ್ಪೋಟದ ಶಬ್ದವು ಆ ಲಿಂಗದಿಂದಲೇ ಬಂದಿದ್ದು ಎಲ್ಲರೂ ನಡುಗಿ ಬೆವತು ಹೋದರು. ಶಬ್ದದ ತೀವ್ರತೆ ಅರಮನೆಯ ಹೊರಗಿನವರೆಗೂ ಅನುಭವವಾಗಿದ್ದು ತಕ್ಷಣವೇ ಆಚಾರ್ಯರು.... ರಾಣಾ ಮತ್ತು ವಿಕ್ರಂ ಸಿಂಗ್ ನೆಲಮಾಳಿಗೆಯ ಕೊಠಡಿಗೆ ಬಂದರು.

ಆಚಾರ್ಯರು......ಇಲ್ಲೇನು ನಡೆಯಿತಮ್ಮ ನೀತು ? ಏನಾ ಶಬ್ದ ?

ನೀತು.......ಏನೆಂದು ಗೊತ್ತಿಲ್ಲ ಗುರುಗಳೇ ಮೊದಲು ಮಹರಾಣಿ ಅವರ ಖಾಸಗಿ ರೂಮಿನಲ್ಲಿದ್ದ ಬೀರುವಿನ ಬಾಗಿಲನ್ನು ನಿಶಾ ಖುದ್ದು ತೆಗೆದಳು ಅದು ಯಾರ ಸಹಾಯವಿಲ್ಲದೆಯೇ. ಈಗ ಕಳೆದ ಕೆಲವು ತಲೆಮಾರುಗಳಿಂದಲೂ ತೆಗೆಯಲಾಗದಿದ್ದ ಈ ತಿಜೋರಿಯನ್ನು ಸಹ ತೆಗೆದಿದ್ದಾಳೆ. ಯಾರು ಹೇಳಿಕೊಟ್ಟರೆಂದು ಕೇಳಿದರೆ ಅಮ್ಮ ನಂಗೆ ಹೇಳ್ತು ನಾನು ತೆಗೆದೆ ಅಂತಿದ್ದಾಳೆ ಗುರುಗಳೇ ಆದರೆ ಇದರ ಬಗ್ಗೆ ನನಗೇನೂ ಗೊತ್ತೇ ಇಲ್ವಲ್ಲ.

ಆಚಾರ್ಯರು ತಮ್ಮ ಜೋಳಿಗೆಯಿಂದ ಒಂದು ಚಿಟಕಿ ವಿಭೂತಿ ತೆಗೆದು ನಿಶಾಳ ಹಣೆಗಿಟ್ಟು ತಮ್ಮ ಹೆಬ್ಬೆರನ್ನವಳ ಹಣೆಗೊತ್ತಿಡಿದು ಕೆಲವು ಮಂತ್ರ ಪಠಿಸಲು ಪ್ರಾರಂಭಿಸಿದರು. ಹತ್ತು ನಿಮಿಷ ಕಳೆದ ಹಾಗೇ ಆಚಾರ್ಯರ ಮುಖದಲ್ಲಿ ಮುಗುಳ್ನಗೆ ಮೂಡಿ ಕಣ್ಣನ್ನು ತೆರೆಯುತ್ತ.......ಇಲ್ಲಿನ ಕೆಲಸ ಮುಗಿದಿದ್ದರೆ ಮೇಲೆ ಹೋಗೋಣ ಅಲ್ಲಿಯೇ ಈ ವಿಷಯದ ಬಗ್ಗೆ ಹೇಳುವೆ.

ಎಲ್ಲರೂ ಆಚಾರ್ಯರನ್ನು ಹಿಂಬಾಲಿಸಾದರೆ ವರ್ಧನ್ ತಿಜೋರಿ ಒಳಗಿದ್ದ ಅಣ್ಣನ ಬ್ರೀಫ್ಕೇಸನ್ನು ನಿಧಿಯ ಕೈಗಿತ್ತು ತಿಜೋರಿಯನ್ನು ಬಂದ್ ಮಾಡಿ ಎಲ್ಲಾ ಬಾಗಿಲುಗಳನ್ನು ಹಾಕಿ ಮೇಲೆ ಬಂದನು. ಅರಮನೆಯ ಒಂದು ರೂಮಿನಲ್ಲಿ ಎಲ್ಲರೂ ಸೇರಿದ್ದು......

ಆಚಾರ್ಯರು.....ಇದು ಅಸಾಧ್ಯವಾದರೂ ಸತ್ಯ. ಅಮ್ಮ ನನಗೆ ಹೇಳಿಕೊಟ್ಟರು ನಾನು ಮಾಡಿದೆ ಎಂದು ನಿಶಾ ಹೇಳುತ್ತಿರುವುದು ನಿನ್ನ ವಿಷಯವನ್ನಲ್ಲ ನೀತು ಇದನ್ನೆಲ್ಲಾ ನಿಶಾಳ ಮನಸ್ಸಿನಲ್ಲಿರುವ ಅವಳನ್ನು ಹೆತ್ತ ತಾಯಿ ಸುಧಾಮಣಿ ಮಗಳಿಗೆ ಹೇಳಿಕೊಟ್ಟಿದ್ದಾಳೆ.... ಎಂದಾಗ ಎಲ್ಲರೂ ಆಶ್ಚರ್ಯದಿಂದ ಆಚಾರ್ಯರು ಹಾಗು ನಿಶಾಳ ಕಡೆ ನೋಡತೊಡಗಿದರು.

ಆಚಾರ್ಯರು......ಇದರಲ್ಲಿ ಆಶ್ಚರ್ಯಗೊಳ್ಳುವಂತದ್ದೇನೂ ಇಲ್ಲ ನೀತು ತಾಯಿಯಾದವಳು ಮರಣಿಸಿದ ನಂತರವೂ ಮಗಳೊಟ್ಟಿಗೆ ಅವಿನಾಭಾವ ಅಲೌಕಿಕ ಸಂಬಂಧ ಹೊಂದಿರುತ್ತಾಳೆ. ಸುಧಾಮಣಿ ವಿಷಯವಾಗಿ ಹೇಳುವುದಾದರೆ ಅವಳ ರಕ್ತ ಹಂಚಿಕೊಂಡು ಹುಟ್ಟಿದ ಮಗು ನಿಶಾ ಆದರೆ ಸುಧಾಳಿಗೆ ಅತ್ಯಂತ ಪ್ರಿಯವಾದವಳು ತನ್ನ ಗಂಡನಿಗಿಂತಲೂ ಎಂದರೆ ಅದು ನಿಧಿ. ಇವರಿಬ್ಬರ ವಿಷಯದಲ್ಲಿ ನಿಶಾಳ ಕೈ ಕೊಂಚ ಮೇಲಿದೆ ಏಕೆಂದರೆ ನಿಧಿ ತಾಯಿಯ ಮಡಿಲಿನಲ್ಲಿ ಬೆಳೆದವಳು ಆದರೆ ನಿಶಾ ಅದೇ ತಾಯಿಯ ಗರ್ಭದಲ್ಲಿ ಬೆಳೆಯುತ್ತ ಈ ಲೋಕಕ್ಕೆ ಕಾಲಿಟ್ಟವಳು. ಹಾಗಾಗಿ ನಿಶಾಳ ಜೊತೆ ಸುಧಾಮಣಿಗೆ ಅಲೌಕಿಕವಾದ ಸಂಬಂಧವಿದೆ ಜೊತೆ ಇಬ್ಬರ ಒಡನಾಟಗಳು ನಿಶಾ ಹುಟ್ಟಿದಾಗಿನಿಂದಲೂ ಅವಳ ಮನಸ್ಸಿನಲ್ಲೇ ನಡೆಯುತ್ತ ಬಂದಿದೆ. ನೀತು ಈ ನಿನ್ನ ಮಗಳು ನಿನ್ನ ಮಡಿಲನ್ನು ಸೇರುವುದರಲ್ಲಿ ಸುಧಾಳ ಪ್ರೇರಣೆಯಿತ್ತೆಂದರೆ ತಪ್ಪಾಗಲಾರದು. ಮಗಳ ಮನಸ್ಸಿನಲ್ಲಿಯೇ ನೆಲೆಸಿರುವ ಸುಧಾಮಣಿ ಆಗಾಗ ಮಗಳಿಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತಿರುತ್ತಾಳೆ ಅವಳಿಗ್ಯಾವುದೋ ಮುಖ್ಯವಾದ ಕೆಲಸ ಮಗಳ ಮೂಲಕ ಮಾಡಿಸಬೇಕಾಗಿದೆ ಅನಿಸುತ್ತಿದೆ ಏನೆಂಬುದನ್ನು ತಿಳಿದುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಅದು ಮುಗಿದಾಗಲೇ ಸುಧಾಮಣಿಗೆ ಮುಕ್ತಿ ದೊರಕುವುದು ಅಲ್ಲಿಯವರೆಗೂ ಆಕೆ ಮಗಳ ಮನಸ್ಸಿನಲ್ಲಿಯೇ ನೆಲೆಸಿರುತ್ತಾಳೆ ಇದರಿಂದೇನೂ ಹೆದರುವ ಅಗತ್ಯ ಇಲ್ಲ ತಾಯಿಯಾದವಳು ಮಗಳು ಮತ್ತವಳ ಸುತ್ತಲಿರುವವರ ಹಿತ ರಕ್ಷಣೆಯನ್ನೇ ಮಾಡುತ್ತಾಳೆ.

ನೀತು.....ಇಲ್ಲ ಗುರುಗಳೇ ನನಗ್ಯಾವುದೇ ಭಯವಿಲ್ಲ ನಿಶಾ ಮತ್ತು ನಿಧಿ ಇಬ್ಬರಿಗೂ ಒಳ್ಳೆಯದಾದರೆ ಅದಕ್ಕಿಂತ ನನಗೇನೂ ಬೇಕಾಗಿಲ್ಲ.

ಆಚಾರ್ಯರು ನಗುತ್ತ.....ಇವರಿಬ್ಬರು ಬಂದ ನಂತರ ನೀನು ನಿನ್ನ ಹೆತ್ತ ಮಕ್ಕಳನ್ನೇ ಕಡೆಗಣಿಸುತ್ತಿರುವಂತಿದೆ ಅವರಿಬ್ಬರಿಗೆ ಇದರ ಬಗ್ಗೆ ಏನೂ ಬೇಸರವಿಲ್ಲವಾ ?

ನೀತು......ನನ್ನ ನಾಲ್ಕೂ ಜನ ಮಕ್ಕಳೂ ನನಗೆ ಸರಿಸಮಾನರೇ ಆದರೆ ನನ್ನೀ ಪುಟ್ಟ ಕಂದಮ್ಮನ ಮೇಲೆ ನನಗೆ ಪ್ರೀತಿ ಸ್ವಲ್ಪ ಜಾಸ್ತಿ ಅದೆಲ್ಲರಿಗೂ ಗೊತ್ತಿದೆ. ನನಗಿಂತಲೂ ಇವಳನ್ನು ಪ್ರೀತಿಸುವವನು ನನ್ನ ಕಿರಿಮಗ ಅಣ್ಣನನ್ನು ಕಂಡರೆ ಇವಳಿಗೂ ಪಂಚಪ್ರಾಣ ಅದಕ್ಕೇ ಅಣ್ಣನನ್ನೇ ಯಾವಾಗಲೂ ಗೋಳಾಡಿಸುತ್ತಾಳೆ. ಆದರೆ ಗುರುಗಳೇ ಆ ತಿಜೋರಿಯಲ್ಲೊಂದು ಪುಟ್ಟ ಲಿಂಗವಿತ್ತು ಅದನ್ನು ನಿಶಾಳೇ ಎತ್ತಿಕೊಂಡಿದ್ದಳೂ ಕೂಡ ಆದರೀಗ ಲಿಂಗ ಅವಳ ಹತ್ತಿರವೂ ಇಲ್ಲ ಏನಾಯಿತೆಂದರೆ ನಂಗೆ ಗೊತ್ತಿಲ್ಲ ಅಂತಿದ್ದಾಳೆ ಇದರ ಮರ್ಮವೇನು.

ರಜನಿ.......ಹೌದು ಗುರುಗಳೇ ನಿಶಾ ಲಿಂಗ ಹಿಡಿದುಕೊಂಡು ಅವಳ ಕತ್ತಿನಲ್ಲಿರುವ ರುದ್ರಾಕ್ಷಿಗೆ ಸೋಕಿಸುತ್ತ ಆಡುತ್ತಿದ್ದಾಗಲೇ ಭಯಾನಕ ಸ್ಪೋಟದ ಶಬ್ದ ಕೇಳಿಸಿದ್ದು. ಈಗ ಲಿಂಗ ಕಾಣಿಸುತ್ತಿಲ್ಲ ಏನಾಯಿತು ಅಂತ ನಿಮಗೇನಾದರೂ ತಿಳಿದಿದೆಯಾ ಗುರುಗಳೇ.

ಆಚಾರ್ಯರು.......ಆ ಲಿಂಗ ಸಾಮಾನ್ಯವಾದುದಲ್ಲ ಮಗಳೇ ಆ ಲಿಂಗವನ್ನು ತ್ರೇತಾಯುಗದಲ್ಲಿ ಸಾಕ್ಷಾತ್ ಸೀತಾ ಮಾತೆ ಪೂಜಿಸುತ್ತ ಆರಾಧಿಸುತ್ತಿದ್ದರೆಂದು ನಮ್ಮ ಗುರುಗಳು ಹೇಳುತ್ತಿದ್ದರು. ಆದರೆ ಆ ಲಿಂಗ ಸೂರ್ಯವಂಶಿಗಳ ಬಳಿ ಹೇಗೆ ಬಂತೆಂಬುದು ನಮಗೂ ಸಹ ತಿಳಿದಿಲ್ಲ. ಆ ಲಿಂಗವೀಗ ನಿಶಾಳ ಕತ್ತಿನ ಡಾಲರಿನಲ್ಲಿರುವ ಜಗತ್ತಿನ ಏಕಮಾತ್ರ ರುದ್ರಾಕ್ಷಿಯಲ್ಲಿ ಐಕ್ಯವಾಗಿ ಹೋಗಿದೆ. ಇದರಿಂದಾಗಿ ನಿಶಾ ಪಾಲಿಗೆ ತಾಯಿ ಜಗನ್ಮಾಥೆಯ ಜೊತೆಗೆ ಪರಮೇಶ್ವರ ಶೀರಕ್ಷೆ ಕೂಡ ದೊರೆತಂತಾಗಿದೆ ಮುಂದೇನಾಗುತ್ತೋ ನೋಡೋಣ ಏನಾದರೂ ಒಳ್ಳೆಯದೇ ಆಗಲಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತೆ.

ಅವರ ಚರ್ಚೆಗಳು ಇನ್ನೂ ನಡೆಯುತ್ತಲಿದ್ದು ಅಪ್ಪನ ಮಡಿಲಲ್ಲಿದ್ದ ನಿಶಾ ಚಿಟ್ಟಾಗಿ ಹೋಗಿ ಅಮ್ಮನ ಬಳಿ ತೆರಳಿ......ಮಮ್ಮ ನನ್ನಿ ಐಸ್ ಬೇಕು ಕೊಲು ನಿನ್ನಿ ಬಂತು.

ಅನುಷ.....ನಡಿಯಮ್ಮ ಕಂದ ನಿನ್ನ ತಾಚಿ ಮಾಡಿಸ್ತೀನಿ.

ನಿಶಾ ಅವಳ ಹೆಗಲಿಗೇರಿ....ಆಂಟಿ ನನ್ನಿ ತಮ್ಮ ತಾಚಿ ಮಾತು.

ಅನುಷ.......ಹೂಂ ಕಂದ ತಮ್ಮ ತಾಚಿ ಮಾಡಾಯ್ತು ಈಗ ನೀನೂ ಐಸ್ ತಿಂದು ತಾಚಿ ಮಾಡು ಆಯ್ತಾ.

ನಿಶಾ.....ಆತು ಆಂಟಿ....ಎಂದೇಳಿ ಅವಳ್ಜೊತೆ ಹೊರಟಳು.
* *
* *
ಇತ್ತ ಆ ಹೆಂಗಸು ಅರಮನೆಯ ಕೆಲಸಗಾರರನ್ನೆಲ್ಲಾ ರಕ್ಷಕರು ಯಾಕೆ ಅಲ್ಲಿಂದ ಹೊರಗೆ ಕಳಿಸಿದರು ? ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಎಷ್ಟೇ ಯೋಚಿಸಿದರೂ ಅವಳಿಗೇನೂ ತಿಳಿಯಲಿಲ್ಲ. ಅದೇ ಸಮಯದಲ್ಲಿ ಎದೆ ನಡುಗಿಸುವಂತ ಸ್ಪೋಟದ ಶಬ್ದ ಕೇಳಿಸಿದ್ದು ಎಲ್ಲರಂತೆ ಅವಳೂ ತಾನು ವಾಸಿಸುತ್ತಿದ್ದ ರೂಮಿನಿಂದಾಚೆ ಬಂದರೆ ಉಳಿದ ಕೆಲಸಗಾರರೂ ಸಹ ಅರಮನೆಯತ್ತ ನೋಡುತ್ತಿದ್ದರು. ಇದೇ ಸಮಯವನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಆ ಹೆಂಗಸು ತನ್ನ ಬಳಿಯಿದ್ದ ಒಂದು ದ್ರವ್ಯವನ್ನು ಅರಮನೆ ಕಾವಲಿಗಿರುವ ತೋಳದ ರೀತಿಯ ಬೇಟೆ ನಾಯಿಗಳ ಬಳಿ ತೆರಳಿ ಅವುಗಳಿಗೆ ಕುಡಿಯುವುದಕ್ಕೆ ಇಡಲಾಗಿದ್ದ ನೀರಿನಲ್ಲಿ ಯಾರಿಗೂ ತಿಳಿಯದಂತೆ ದ್ರವ್ಯ ಬೆರೆಸಿದಳು. ಅವಳ ಪ್ರಕಾರ ನಾಯಿಗಳು ಬೆಳಿಗ್ಗೆ ಹೊತ್ತಿಗೆ ರೊಚ್ಚಿಗೇಳುವಂತಾಗಿ ನಿಶಾಳ ಮೇಲೆ ದಾಳಿ ಮಾಡಿ ಅವಳಿಗೆ ಹಾನಿ ಮಾಡುತ್ತವೆ ಅಥವ ಅವಳನ್ನು ಕಚ್ಚಿಯೇ ಸಾಯಿಸಿದರೂ ಅಚ್ಚರಿಯಿಲ್ಲ ಎಂಬುದನ್ನು ಯೋಚಿಸುತ್ತ ಖುಷಿಯಾಗಿದ್ದಳು. ಬೆಳಿಗ್ಗೆ ನಿಶಾ ಕೂಡ ಎದ್ದ ತಕ್ಷಣ ನಾಯಿಗಳ ಹತ್ತಿರವೇ ಹೋಗುತ್ತಿದ್ದು ಅವಳ ಪ್ರಾಣಕ್ಕೀಗ ಘೋರ ಸಂಕಟ ಏದುರಾಗಿತ್ತು.
 

Samar2154

Well-Known Member
2,694
1,759
159
Update 225 - 226 ಎರಡೂ ಅಪ್ಡೇಟನ್ನೂ ಇವತ್ತು ಒಟ್ಟಿಗೇ ಪೋಸ್ಟ್ ಮಾಡಿದ್ದೀನಿ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿರಿ.

ಮುಂದಿನ ಅಪ್ಡೇಟ್ ರಾಜಸ್ಥಾನದಲ್ಲಿ ನಾನು ಕೊಡುವೆ ಎಂದಿದ್ದ ದೊಡ್ಡ ಶಾಕ್ ಇರಲಿದೆ ಆಗೊಂದು ಪ್ರಶ್ನೆಯನ್ನು ಕೇಳುವೆ ನೋಡೋಣ ನಿಮ್ಮ ಉತ್ತರ ಹೇಗಿರುತ್ತೆ ಅಂತ. ಈಗ ನೀಡಿರುವ ಅಪ್ಡೇಟಿನಲ್ಲೊಂದು
ಸೆಕ್ಸ್ ಸೀನ್ ಕೂಡ ಹಾಕಿದ್ದೀನಿ ಬಲವಂತವಾಗಿ ಏನಲ್ಲ ಮೊದಲೇ ಇದನ್ನೂ ಕೂಡ ಹೇಳಿದ್ದೆ ಯಾರದ್ದಾದರೂ ಒಬ್ಬರ ಸೆಕ್ಸ್ ಸೀನ್ ರಾಜಸ್ಥಾನದ ಕಥೆ ಮಧ್ಯದಲ್ಲೂ ಬರುತ್ತೆ ಅಂತ.

ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞತೆ ಹೀಗೇ ಜೊತೆಯಲ್ಲಿರಿ.
 
  • Like
Reactions: Basanagoud

Venky@55

Member
228
92
28
ಮೊದಲಿಗೆ ದೊಡ್ಡ update ನೀಡಿದ್ದಕ್ಕೆ ಧನ್ಯವಾದ ..
ಈ update ನಲ್ಲಿ ಕಥೆ ಸ್ವಲ್ಪ ಎಳೆದುಬಿಟ್ರಿ ಅನಿಸ್ತು ಆದ್ರು ಪರವಾಗಲ್ಲ ವಿಷಯವಿದೆ...ನಡುವೆ ಸೆಕ್ಸ್ scene good thought..
ನೆಕ್ಸ್ಟ್ ನಿಮ್ಮ ಶಾಕ್ ಗೆ ಕಾಯುತ್ತಿರುವ ನಿಮ್ಮ ಅಭಿಮಾನಿ...
 

Mr.Gouda

New Member
31
11
8
ಬಹಳ ಸುಂದರವಾಗಿ ಮೂಡಿಬಂದಿದೆ ಹಾಗೂ ನಿಧಿಯ ಚಿಕ್ಕಪ್ಪ ಕನ್ನಡ ಕಲಿಯುತ್ತೇನೆ ಅಂತ ಹೇಳಿದ್ದು ತುಂಬಾ ಸಂತೋಷ ಕೊಟ್ಟಿದೆ
 

hsrangaswamy

Active Member
967
260
63
ಬಹಳ ಸೊಗಸಾಗಿದೆ ಕತೆ ಬರದಿದ್ದಿರಿ. ವಂದನೆಗಳು ಕುತೂಹಲ ಕೆರಳಿಸುವ ಘಟ್ಟದಲ್ಲಿ ನಿಲ್ಲಿಸಿ ಬಿಟ್ಟರಲ್ಲ. ಓದುಗರ ಮನಸ್ಸಿನಲ್ಲಿ ಮುಂದಿನ ಬಾಗದ ಬಗ್ಗೆ ತುದಿಗಾಲಿನಲ್ಲಿ ನಿಲ್ಲಿಸಿ ಬಿಡಿವಿರಲ್ಲ. ಮುಂದಿನ ಬಾಗಕ್ಕಾಗಿ ನೋಡುತ್ತಿರುವ.
 

Samar2154

Well-Known Member
2,694
1,759
159
ಭಾಗ 227


ಮುಂಜಾನೆ ನಿಶಾ ಎಚ್ಚರಗೊಂಡಾಗ ರೂಮಲ್ಲಿ ರಜನಿ ಮಾತ್ರವಿದ್ದು ಅವಳಿಂದಲೇ ಫ್ರೆಶಾಗಿ ಸ್ನಾನ ಮಾಡಿಸಿಕೊಂಡು ಕಾಂಪ್ಲಾನ್ ಕುಡಿದು ರೆಡಿಯಾಗಿ ಹೊರಗೋಡಿ ಬಂದ ನಿಶಾ ಅಪ್ಪ..ಅಮ್ಮ...ಅಕ್ಕ..ಆಂಟಿ ಮತ್ತು ಚಿಕ್ಕಪ್ಪನಿಂದ ಮುದ್ದು ಮಾಡಿಸಿಕೊಂಡಳು. ನಿಶಾಳಿಗೆ ತಕ್ಷಣ ನೆನಪಾಗಿದ್ದು ತನ್ನ ಮುದ್ದಿನ ಕುಕ್ಕಿ ಮರಿಗಳು ಆದರೆ ತಾನೀಗ ತನ್ನ ಮನೆಯಲ್ಲಿಲ್ಲ ಎಂದರಿವಾಗುತ್ತಿದ್ದಂತೆ ಅರಮನೆಯ ಕಾವಲಿಗಿರುವ ತೋಳದಂತ ನಾಯಿಗಳನ್ನು ಮಾತನಾಡಿಸಲು ಹೊರಗೋಡಿದಳು. ನಿಶಾಳ ಹಿಂದೆ ನೆರಳಿನಂತೆ ವೀರ್ ಸಿಂಗ್ ಮತ್ತಿಬ್ಬರು ಕಾವಲಿಗಿದ್ದು ಅವಳನ್ನು ಪ್ರತೀಕ್ಷಣವೂ ಕಾಪಾಡುವುದಕ್ಕೆ ಸನ್ನದ್ದರಾಗಿ ನಿಂತಿದ್ದರು. ರಾತ್ರಿ " ಆ ಹೆಂಗಸು " ಬೆರೆಸಿದ್ದ ಔಷಧಿಯುಕ್ತ ನೀರು ಕುಡಿದ ಬೇಟೆ ನಾಯಿಗಳಲ್ಲಿ ರೋಷಭರಿತ ಆಕ್ರಾಮಕ ಪ್ರವೃತ್ತಿ ಮನೆಮಾಡಿದ್ದು ತಮಗೆ ಊಟ ನೀಡಿ ನೋಡಿಕೊಳ್ಳುತ್ತಿದ್ದವರ ಮೇಲೆಯೇ ಅಟ್ಯಾಕ್ ಮಾಡಲು ಹುಚ್ಚೆದ್ದಂತೆ ಬೊಗಳುತ್ತಿದ್ದವು. ಅದನ್ನು ಗಮನಿಸಿ ವೀರ್ ಸಿಂಗ್ ಅತ್ತ ಕಡೆ ನಿಶಾ ಹೋಗದಂತೆ ಅಡ್ಡಲಾಗಿ ನಿಂತರೆ ಎಚ್ಚರಿಕೆ ಕೊಡುವ ರೀತಿ ನಿಶಾ ತನ್ನ ಬೆರಳನ್ನು ತೋರಿಸುತ್ತಿದ್ದರೂ ಸಹ ವೀರ್ ಸಿಂಗ್ ಪಕ್ಕಕ್ಕೆ ಸರಿಯುತ್ತಿರಲಿಲ್ಲ. ದೂರದಿಂದ ಇದನ್ನೆಲ್ಲ ನೋಡುತ್ತ ನಿಂತಿದ್ದ ಆ ಹೆಂಗಸು ರಕ್ಷಕರಿಂದಾಗಿ ತನ್ನ ಪ್ಲಾನ್ ಹಾಳಾಗುತ್ತಿದೆಯಲ್ಲ ಎಂದವರಿಗೆ ಶಾಪ ಹಾಕುತ್ತಿದ್ದಾಗ ನೀತು ಮಗಳ ಹತ್ತಿರ ಬಂದಳು.

ನಿಶಾ ಅಮ್ಮನಿಗೆ ಕಂಪ್ಲೇಂಟ್ ಹೇಳುತ್ತ......ಮಮ್ಮ ನಾನಿ ಟಾಮಿ ಹತ್ತ ಹೋತಿನಿ ಈ ಅಂಕುಲ್ (ವೀರ್ ಸಿಂಗ್ ಕಡೆ ಕೈ ತೋರಿಸುತ್ತ ) ನನ್ನಿ ಬಿಲಲ್ಲ ಹೋಗು ಅಂತು.

ವೀರ್ ಸಿಂಗ್.....ಮಾತೆ ಏನಾಗಿದೆ ಎಂಬುದು ಗೊತ್ತಿಲ್ಲ ಆದರಿಂದು ನಾಯಿಗಳಿಗೆ ತುಂಬ ರೋಷ ಬಂದಿರುವಂತಿದೆ ಅವಕ್ಕೆ ಪ್ರತಿದಿನವೂ ಊಟ ಹಾಕಿ ನೋಡಿಕೊಳ್ಳುವವರನ್ನೇ ಕಚ್ಚಲು ಮುಂದಾಗುತ್ತಿವೆ.

ನೀತು......ಯಾವುದೇ ಪ್ರಾಣಿಗಳಿಂದಲೂ ನಿಮ್ಮ ಯುವರಾಣಿಗೆ ಅಪಾಯವಿಲ್ಲ ವೀರ್ ಸಿಂಗ್ ಮುಂದೇನಾಗುತ್ತೆ ನೋಡ್ತಿರು...ಎಂದು ಮಗಳ ಜೊತೆ ನಾಯಿಗಳ ಹತ್ತಿರ ಬಂದಳು.

ಸುಮಾರು 25 ನಾಯಿಗಳು ರೋಷಬಂದಂತೆ ಬೊಗಳುತ್ತ ಅವನ್ನು ಕಟ್ಟಿ ಹಾಕಲಾಗಿದ್ದ ಚೈನನ್ನು ಬಿಡಿಸಿಕೊಳ್ಳಲು ಶತಪ್ರಯತ್ನವನ್ನು ಮಾಡುತ್ತಿದ್ದವು.

ನಿಶಾ ಅದನ್ನು ನೋಡಿ ಕೋಪಗೊಂಡು ಜೋರಾಗಿ......ಏಯ್ ಏತ್ ಕೊತೀನಿ ಷಟಪ್......ಎಂದೊಡನೇ ಎಲ್ಲಾ ನಾಯಿಗಳ ದೃಷ್ಟಿ ನಿಶಾಳ ಕಡೆ ಹೊರಳಿತು.

ಅಷ್ಟೇ ನಾಯಿಗಳೆಲ್ಲವೂ ಯಾವುದೋ ಸಮ್ಮೋಹನಕ್ಕೊಳಗಾದಂತೆ ಫುಲ್ ಸೈಲೆಂಟಾಗಿ ಸದ್ದು ಮಾಡದೆ ಸುಮ್ಮನೆ ಕುಳಿತವು. ನಿಶಾ ಒಂದೊಂದೇ ನಾಯಿ ಹತ್ತಿರ ಹೋಗಿ ಅವುಗಳ ತಲೆ ಸವರಾಡುತ್ತ ಮುದ್ದಿಸಿದಾಗ ನಾಯಿಗಳ ತಲೆಯಲ್ಲೇರಿದ್ದ ರೋಷದ ನಶೆ ಪವಾಡದ ರೀತಿ ತಣ್ಣಗಾಗಿ ಹೋಯಿತು. ಆ ಹೆಂಗಸು ಕೂಡ ನೋಡುತ್ತಿದ್ದು ಆಕೆಗೆ ಗರಬಡಿದಂತಾಗಿ ಹೋಗಿದ್ದು ಮುಂದೇನು ಮಾಡಬಹುದೆಂಬ ಬಗ್ಗೆ ಯೋಚಿಸತೊಡಗಿದಳು. ಊಟಕ್ಕೆ ವಿಷ ಹಾಕಲಾಗದು....ಈ ಕಿರಿಯ ರಾಜಕುಮಾರಿಗೆ ಪ್ರಾಣಿಗಳೇನೂ ಮಾಡಲ್ಲ ಹೊರಗಿನಿಂದ ಜನರನ್ನು ಕರೆಸುವುದಂತೂ ಅಸಾಧ್ಯವಾದ ಮಾತು ರಕ್ಷಕರು ಇರುವ ತನಕವೂ ಇವರಿಬ್ಬರತ್ತ ಹೊರಗಿನವರು ಸುಳಿಯುವುದಕ್ಕೂ ಕೂಡ ಸಾಧ್ಯವಿಲ್ಲ. ಈಗೇನಿದ್ದರೂ ಕಟ್ಟಕಡೆಯ ಅಸ್ತ್ರವೊಂದು ಇರುವುದು ನನಗೀ ಅರಮನೆ ಸಂಸ್ಥಾನದ ವೈಭೋಗವನ್ನು ಅನುಭವಿಸಲು ಸಾಧ್ಯವಿಲ್ಲ ಎಂದಾದರೆ ಬೇರಾರಿಗೂ ಅದನ್ನು ಅನುಭವಿಸಲಿಕ್ಕೂ ಬಿಡಬಾರದು. ಈಗಾಗಲೇ ನನ್ನ ಬೆಂಬಲಿಸುವವರೆಲ್ಲ ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋಗಿದ್ದಾರೆ ಇದರಲ್ಲೂ ರಕ್ಷಕರದ್ದೇ ಕೈವಾಡಿವಿರುತ್ತೆ. ಈಗ ಬೇರಾವುದೇ ದಾರಿಯೂ ಉಳಿದಿಲ್ಲ ಮುಖಾ ಮುಖಿಯಾಗಿ ನೇರ ದಾಳಿ ಮಾಡುವುದೊಂದೇ ನನಗಿರುವ ಕಟ್ಟಕಡೆಯ ಅಸ್ತ್ರ ಎಂದು ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳಲು ತೆರಳಿದಳು.
* *
* *



.......continue
 

Samar2154

Well-Known Member
2,694
1,759
159
Continue.........


ಮಂಗಳವಾರ ಬೆಳಿಗ್ಗೆ 10 ಘಂಟೆ....
ಜೈಸಲ್ಮೇರಿನ ಅರಮನೆ.....

ಉದಯಪುರದಲ್ಲಿ ತಿಂಡಿ ಮುಗಿಸಿಕೊಂಡು ಎಲ್ಲರೂ ಜೈಸಲ್ಲೇರಿನ ಅರಮನೆಗೆ ಆಗಮಿಸಿದರೆ ವರ್ಧನ್ ಕೂಡ ಜೊತೆಯಲ್ಲಿದ್ದನು. ದಿಲೇರ್ ಸಿಂಗ್...ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಮುಂದೆ ಬಂದು ಗೌರವ ಸೂಚಿಸಿ ನಿಂತರೆ.....

ವರ್ಧನ್......ಸಿಎಂ..ಮಂತ್ರಿಗಳು ಮತ್ತು ಶಾಸಕರನ್ನು ಬೇರೆಯದ್ದೇ ಕೋಣೆಗೆ ಕರೆದುಕೊಂಡು ಬನ್ನಿ.

ದಿಲೇರ್ ಸಿಂಗ್.......ರಾಜಕೀಯದವರನ್ನೆಲ್ಲಾ ಇತರರ ಜೊತೆಯಲ್ಲಿ ಇಟ್ಟಿಲ್ಲ ಅವರನ್ನೇ ಬೇರೆ ಕೋಣೆಯಲ್ಲಿರಿಸಿದ್ದೇವೆ.

ವರ್ಧನ್......ಅಕ್ಕ ನೀವು ಚಂಚಲಾದೇವಿಯ ಫ್ಯಾಮಿಲಿಯನ್ನು ಬೇಟಿಯಾಗಿ ಬನ್ನಿ ನಾನೀ ನನ್ನದೇ ಹೆಸರಿನಿಂದ ಗೆದ್ದು ಅಧಿಕಾರದ ಗದ್ದುಗೆಯಲ್ಲಿ ನಾನೇ ಕೂರಿಸಿದ್ದ ನಿಯತ್ತಿಲ್ಲದಂತ ನಾಯಿಗಳನ್ನು ನೋಡಿಕೊಳ್ತೀನಿ ನಡಿ ದಿಲೇರ್ ಅವರೆಲ್ಲಿದ್ದಾರೆ ತೋರಿಸು.

ಸಿಎಂ...ಗೃಹ ಸಚಿವ...ಮಂತ್ರಿಗಳು...ಶಾಸಕರು...ಕೆಲವು ಹಿರಿಯ ಅಧಿಕಾರಿಗಳು....ಹತ್ತಾರು ಬಿಝಿನೆಸ್ ಮ್ಯಾನ್ ಎಲ್ಲರನ್ನೂ ಒಂದೇ ಹಾಲಿನಲ್ಲಿ ಕೈ ಕಾಲುಗಳನ್ನು ಕಟ್ಟಿ ನೆಲದ ಮೇಲೆ ಕೂರಿಸಲಾಗಿತ್ತು. ವರ್ಧನ್ ಒಳಗೆ ಬಂದಾಗ.......

ಸಿಎಂ......ಸರ್ ನೀವಿಲ್ಲಿ ಇವರು ನಿಮ್ಮನ್ನೂ ಕಿಡ್ನಾಪ್ ಮಾಡಿದ್ರಾ ?

ವರ್ಧನ್ ಮುಗುಳ್ನಗುತ್ತ ರಕ್ಷಕನೊಬ್ಬ ತಂದಿಟ್ಟ ಚೇರಿನಲ್ಲಿ ಕೂರುತ್ತ ಕಾಲ್ಮೇಲೆ ಕಾಲನ್ನಾಕಿಕೊಂಡು.........ಏನ್ರೀ ಸಿಎಂ ಏನೋ ನಿಮಗೆ ವಯಸ್ಸಾಗಿದೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಬದಲು ನಿಮ್ಮ ಮಗನಿಗೆ ಸ್ಥಾನ ಕಲ್ಪಿಸೋಣ ಈ ಬಾರಿ ನೀವು ಮುಖ್ಯಮಂತ್ರಿಯಾಗಿ ಕಾರ್ಯಭಾರ ಮುಗಿಸಿ ನಿವೃತ್ತಿ ಹೊಂದಲಿ ಅಂತ ನಾನು ನಿಮ್ಮನ್ನು ಕೂರಿಸಿದರೆ ನಿನ್ನ ಕಂತ್ರಿ ಸೂವರ್ ಬುದ್ದಿ ತೋರಿಸಿ ಬಿಟ್ಯಲ್ಲ. ನನ್ನ ಅಣ್ಣನ ಮಗಳನ್ನೇ ಕಿಡ್ನಾಪ್ ಮಾಡಿಸಿ ಆಸ್ತಿ ಹೊಡೆಯುವುದಕ್ಕೆ ಪ್ಲಾನ್ ಮಾಡ್ತೀಯೇನೋ ಬದ್ಮಾಷ್. ನನ್ನ ಬೆನ್ನಿಗೆ ಚೂರಿ ಹಾಕುವ ಮಟ್ಟಕ್ಕೆ ಬೆಳೆದುಬಿಟ್ಯಾ ನೀನು ಇದಕ್ಕೆ ಈ ನಮಕ್ ಹರಾಂಗಳೆಲ್ಲರೂ ನಿನಗೆ ಸಾಥ್ ಕೊಡುತ್ತಾರಾ.

ಸಿಎಂ ಗೋಳಾಡುತ್ತ......ಸರ್ ನಾನು ನಿಮ್ಮ ನಿಯತ್ತಿನ ನಾಯಿಯೇ ಸರ್ ನಿಮ್ಮ ವಿರುದ್ದ ಹೋಗಲು ಕನಸಿನಲ್ಲೂ ಯೋಚಿಸುವುದಿಲ್ಲ. ನಿಮ್ಮನ್ನೆದುರಿಸಿ ನಿಂತು ಈ ದೇಶದಲ್ಲಿ ಯಾರು ತಾನೇ ರಾಜಕೀಯ ಮಾಡುವುದಕ್ಕೆ ಸಾಧ್ಯವಿದೆ ನನಗಷ್ಟು ಧೈರ್ಯವಿದೆಯಾ ಸರ್.

ಗೃಹ ಸಚಿವ.........ಸರ್ ನಿಮ್ಮ ಅಣ್ಣ ಯಾರೆಂಬುದೇ ಗೊತ್ತಿಲ್ಲ ಇನ್ನು ನಿಮ್ಮ ಅಣ್ಣನ ಮಗಳನ್ನೇಗೆ ನಾವು ಕಿಡ್ನಾಪ್ ಮಾಡಿಸುವ ಪ್ಲಾನ್ ಮಾಡಲು ಸಾಧ್ಯ. ನಿಮ್ಮನ್ನೆದುರಿಸಿ ನಿಲ್ಲುವ ಶಕ್ತಿಯಾಗಲಿ ಅಥವ ಧೈರ್ಯವಾಗಲಿ ನಮ್ಮಲ್ಯಾರಿಗೂ ಇಲ್ಲ ಸರ್ ಪ್ಲೀಸ್ ನನ್ನ ನಂಬಿ.

ವರ್ಧನ್.......ನಿಮಗೆಲ್ಲಾ ಹೇಳುತ್ತಾ ಕೂರುವುದಕ್ಕೆ ನಾನಿಲ್ಲಿಗೆ ಬಂದಿಲ್ಲ ನಮ್ಮ ಅಣ್ಣ ಯಾರೆಂದರೆ........

ನೀತು ಅಲ್ಲಿಗೇ ಬಂದು......ವರ್ಧನ್ ಇವರಿಗೇನೂ ಹೇಳುವ ಅಗತ್ಯ ಇಲ್ಲ ಇವರೆಲ್ಲರ ಕೈವಾಡ ಅಣ್ಣನ ಸಾವಿನ ಹಿಂದೆಯೂ ಇದೆ.

ವರ್ಧನ್.........ದಿಲೇರ್ ಸಿಂಗ್ ಈ ಸೂವರುಗಳೆಲ್ಲರು ಪ್ರತಿಕ್ಷಣವೂ ಚಿತ್ರಹಿಂಸೆ ಅನುಭವಿಸಬೇಕು ಆದರೆ ಪ್ರಾಣ ಹೋಗಬಾರದು ಮುಂದೇನು ಮಾಡಬೇಕೆಂದು ಅಕ್ಕನೇ ಹೇಳ್ತಾರೆ.

ದಿಲೇರ್ ಸಿಂಗ್.....ಹಾಗೇ ಆಗಲಿ ಹುಕುಂ.

ವರ್ಧನ್......ನೀವೆಲ್ಲರೂ ಸೇರಿ ಏನು ಮಾಡಿದ್ರಿ ಅಂತ ಪ್ರತಿನಿತ್ಯ ಯೋಚಿಸ್ತಾ ನರಕದ ಯಾತನೆ ಅನುಭವಿಸುತ್ತಿರಿ.

ಸಿಎಂ ಮತ್ತಿತರರು ಅಂಗಾಲಾಚಿ ಬೇಡಿಕೊಳ್ಳುತ್ತಿದ್ದರೂ ವರ್ಧನ್ ಸ್ಮೈಲ್ ಮಾಡುತ್ತ ಅಲ್ಲಿಂದಾಚೆ ಬಂದರೆ ರಕ್ಷಕರ ಹೊಡೆತಗಳನ್ನು ಅನುಭವಿಸುತ್ತ ಅವರೆಲ್ಲರೂ ಅರಚಿಕೊಳ್ಳತೊಡಗಿದರು.

ಜೈಸಲ್ಮೇರಿನ ಭವ್ಯವಾದ ಅರಮನೆಯ ಹಿಂಭಾಗದಲ್ಲಿ ಒಂಟೆಗಳಿಗೆ ನಿರ್ಮಿಸಲಾಗಿರುವ ತಂಗುದಾಣದ ಭೂಮಿಯ ನಾಲ್ಕು ಅಂತಸ್ತಿನ ಕೆಳಗೆ ಸುವ್ಯಸ್ತಿತವಾದ ಕಾರಾಗೃಹವನ್ನು ಶತಮಾನಗಳ ಹಿಂದೆಯೇ ಸೂರ್ಯವಂಶಿ ಸಂಸ್ಥಾನದ ರಾಜರೊಬ್ಬರು ನಿರ್ಮಿಸಿದ್ದರು. ಅದೇ ಕಾರಾಗೃಹದಲ್ಲೀಗ ಮಹರಾಜ— ಮಹರಾಣಿಯ ಮತ್ತು ಹಿರಿಯ ಮಹಾರಾಜ—ರಾಣಿಯರ ಸಾವಿಗೆ ಕಾರಣರಾದವರು ಸಂಸ್ಥಾನದ ಕಿರಿಯ ರಾಜಕುಮಾರಿ ನಿಶಾಳ ಸಾವನ್ನು ಬಯಸುತ್ತಿರುವ ಎಲ್ಲಾ ವಿರೋಧಿಗಳೂ ಬಂಧಿಯಾಗಿದ್ದರು. ಹಿಮಾಚಲ ಪ್ರದೇಶದಲ್ಲಿನ ಒಂದು ಸಣ್ಣ ರಾಜಮನೆತನಕ್ಕೆ ಸೇರಿದ ಚಂಚಲಾದೇವಿ ಮತ್ತವಳ ಗಂಡ ಕೃಪಾಲ್ ಸಿಂಗ್ ಹಾಗು ಅವರ ಕುಟುಂಬದ ಸದಸ್ಯರನ್ನೆಲ್ಲಾ ಒಂದು ವಿಶಾಲವಾದ ಕೋಣೆಯಲ್ಲಿ ಕೂರಿಸಲಾಗಿತ್ತು.

ಚಂಚಲಾದೇವಿ ಕಿರಿಮಗ.......ಅಮ್ಮ ನಮ್ಮನ್ನೆಲ್ಲಾ ಅಪಹರಿಸಿದ ಬಳಿಕ ಇವತ್ತೇ ನಿಮ್ಮನ್ನು ನೋಡುವಂತಾಗಿದ್ದು ಹೇಗಿದ್ದೀರ ? ಇಲ್ಲಿ ನಮ್ಮನ್ನು ಅಪಹರಿಸಿ ತಂದಿರುವವರು ಯಾರು ? ನಮ್ಮ ಮೇಲೆಯೇ ಕೈ ಹಾಕುವಷ್ಟು ಧೈರ್ಯ ಯಾರಿಗೆ ಬಂತು ?

ಚಂಚಲಾದೇವಿ ಹಿರಿಮಗ.......ಒಂದು ಸಲ ಇಲ್ಲಿಂದ ಬಿಡುಗಡೆ ಆಗಿ ಹೊರಬಂದಾಗ ಇವರೆಲ್ಲರಿಗೂ ಯಮನ ದರ್ಶನ ಮಾಡಿಸುವೆ.

ಚಂಚಲಾದೇವಿ......ನಮ್ಮನ್ನಿಲ್ಲಿಗೆ ಕರೆತಂದಿರುವವರೇ ಒಂದು ರೀತಿ ಯಮಕಿಂಕರರು ಕಣಪ್ಪ ಬಹುಶಃ ನಮಗಿಲ್ಲಿಂದ ಬಿಡುಗಡೆಯೇ ಆಗುವುದಿಲ್ಲ ಅಂತ ಅನಿಸುತ್ತಿದೆ.

ರಾಣಾ ಕೋಣೆಯೊಳಗೆ ಬರುತ್ತ.....ಎಷ್ಟು ಚೆನ್ನಾಗಿ ನಿಮಗೆ ಸತ್ಯದ ಅರಿವಾಗಿದೆ ಚಂಚಲಾದೇವಿಯವರೇ ಹೇಗಿದ್ದೀರಾ ? ನಿಮ್ಮನ್ನೋಡಿ ಬಹಳ ವರ್ಷಗಳೇ ಆಗೋಗಿದೆ ನಾನು ನೆನಪಿರಬೇಕಲ್ಲವಾ ?

ಚಂಚಲಾದೇವಿ ಒಂದುಕ್ಷಣ ನಡುಗಿ ಹೋಗಿ......ಷಂಷೇರ್ ಸಿಂಗ್ ರಾಣಾ ನೀನಿಲ್ಲಿ...ನೀನು ಅರಮನೆಯಿಂದ ಬೇರೆಲ್ಲಿಗೋ ಹೋಗಿದ್ದೆ ಈಗಿಲ್ಲಿಗೆ ಹೇಗೆ ಬರಲು ಸಾಧ್ಯ ?

ರಾಣಾ.......ನಾನು ನೆನಪಿದ್ದೇನೆಂದಾಯ್ತು ಯುವರಾಣಿಯವರ ಆದೇಶದ ಮೇರೆಗೆ ನಾನು ಅಜ್ಞಾತವಾಸದಿಂದ ಅರಮನೆಗೆ ಪುನಃ ಹಿಂದಿರುಗಿ ನನ್ನ ರಕ್ಷಣೆಯ ಕಾರ್ಯಾಭಾರ ನಿರ್ವಹಿಸುವಂತಾಗಿದೆ.

ಚಂಚಲಾದೇವಿ........ನೋಡು ರಾಣಾ ನಾನು ಹಿರಿಯ ಮಹರಾಜ ಆಗಿದ್ದಂತ ಸೂರ್ಯಪ್ರತಾಪರ ತಂಗಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರನ್ನು ಹೀಗೆ ಬಂಧಿಸಿಟ್ಟಿರುವುದು ನ್ಯಾಯೋಚಿತವಲ್ಲ.

ರಾಣಾ.....ಅದೇ ಮಹಾರಾಜರ ಮಗ ಮತ್ತು ಸೊಸೆಯನ್ನು ಸಾವಿನ ದವಡೆಗೆ ತಳ್ಳುವ ಷಡ್ಯಂತ್ರ ರೂಪಿಸಿದ್ದು ನ್ಯಾಯವಾ ?

ಕೃಪಾಲ್ ಸಿಂಗ್......ನಿನಗೆ ನಮ್ಮ ಮೇಲೆ ದ್ವೇಶವಿದ್ದರೆ ಅಥವ ಅಂತ ಷಡ್ಯಂತ್ರದಲ್ಲಿ ನಮ್ಮ ಪಾತ್ರವಿದೆ ಎನ್ನುವ ಅನುಮಾನವಿದ್ದರೆ ನಾವು ಕುಳಿತು ಮಾತನಾಡೋಣ ಅಗೆಲ್ಲಾ ಅನುಮಾನಗಳು ಪರಿಹಾರ ಆಗುತ್ತವೆ. ಈ ರೀತಿ ನಮ್ಮನ್ನು ಅಪಹರಿಸಿ ಬಂಧನದಲ್ಲಿಡುವುದಕ್ಕೆ ಈಗಲೂ ರಾಜಪರಂಪರೆ ನಮ್ಮ ದೇಶದಲ್ಲಿದೆ ಅಂದುಕೊಂಡಿದ್ದೀಯˌ ನಮ್ಮ ಬೆನ್ನೆಲುಬಾಗಿ ಉನ್ನತ ಹುದ್ದೆಗಳಲ್ಲಿರುವ ಹಲವು ರಾಜಕೀಯ ನಾಯಕರಿದ್ದಾರೆ ಅವರು ಸುಮ್ಮನಿರುತ್ತಾರೆಂದು ಭಾವಿಸಬೇಡ. ಒಮ್ಮೆ ನಮ್ಮ ಸುಳಿವು ಅವರಿಗೆ ದೊರೆತರೆ ಅವರುಗಳು ಸರ್ಕಾರಿ ಆದೇಶದಿಂದ ನಿಮ್ಮೆಲ್ಲರನ್ನೂ ಬಂಧಿಸಿ ಈ ಅರಮನೆಯನ್ನೂ ಸಹ ಕೆಡವಿ ಹಾಕುತ್ತಾರೆ.

ವರ್ಧನ್ ಒಳಬರುತ್ತ.....ಅಂತ ಕೆಲಸ ಮಾಡುವ ಗಂಡಸರು ಇನ್ನೂ ಈ ಭೂಮಿ ಮೇಲೆ ಹುಟ್ಟಿಲ್ಲ ಹುಟ್ಟುವುದೂ ಇಲ್ಲ ಸೂರ್ಯವಂಶಿ ಸಂಸ್ಥಾನದ ವಿರುದ್ದ ಯಾರೇ ಆಗಲಿ ನಿಲ್ಲಲು ಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ನಿಮ್ಮ ಆತ್ಮೀಯ ರಾಜಕೀಯ ನಾಯಕರು ಸಹ ಈಗ ಇದೇ ಕಾರಾಗೃಹದ ಬಂಧಿಗಳು.

ಭಾರತದ ಉಪಪ್ರಧಾನಿ...ಅತ್ಯಂತ ಜನಪ್ರಿಯ ಮತ್ತು ದೇಶದಲ್ಲಿನ ಮೋಸ್ಟ್ ಪವರಫುಲ್ ನಾಯಕನಾಗಿರುವ ವರ್ಧನನನ್ನು ಇಲ್ನೋಡಿ ಚಂಚಲಾದೇವಿಯ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು.

ಕೃಪಾಲ್ ಸಿಂಗ್ ತಡವರಿಸುತ್ತಲೇ.......ಸರ್ ನೀವು....ನೀವಿಲ್ಲಿ.....

ವರ್ಧನ್......ನನ್ನ ಅಣ್ಣ ಅತ್ತಿಗೆಯರ ಸಾವಿಗೆ ಕಾರಣರಾದವರು ಎಂತಹ ರಾಕ್ಷಸರೆಂದು ನೋಡಲು ಬಂದಿರುವೆ.

ಚಂಚಲಾದೇವಿ......ನಿಮ್ಮ ಅಣ್ಞ ಅತ್ತಿಗೆಯಾ ? ಅವರು ಯಾರೆಂದೇ ನಮಗೆ ಗೊತ್ತಿಲ್ಲದಿರುವಾಗ ಅವರ ಸಾವಿಗೆ ನಾವೇಗೆ ಕಾರಣ ?

ವರ್ಧನ್......ನನ್ನ ಅಣ್ಣ ಅತ್ತಿಗೆ ಯಾರೆಂದು ಗೊತ್ತಿಲ್ಲವಾ ಅತ್ತೆ ?

ಚಂಚಲಾದೇವಿ ಅಚ್ಚರಿಗೊಂಡು....ನನ್ನನ್ನು ಅತ್ತೆ ಅಂತಿದ್ದೀರಲ್ಲ ಸರ್

ವರ್ಧನ್.....ಅತ್ತೆಯೇ ಆಗಬೇಕಲ್ಲವಾ ನೀವು ನನ್ನ ತಂದೆಯವರ ಒಡಹುಟ್ಟಿದ ತಂಗಿಯಲ್ಲವಾ. ನಾನು ಸೂರ್ಯಪ್ರತಾಪರ ರಕ್ತವನ್ನು ಹಂಚಿಕೊಂಡು ಹುಟ್ಟಿದ ಅವರ ಕಿರಿಯ ಮಗ ನನ್ನ ಅಣ್ಣ ಅತ್ತಿಗೆಯ ಸಾವಿನ ಪ್ರತಿಷೋಧಕ್ಕಾಗಿ ಬಂದಿರುವೆ (ಅಲ್ಲಿದ್ದವರು ಶಾಕಾಗಿದ್ದರೆ) ಇಷ್ಟಕ್ಕೇ ಶಾಕಾಗ್ಬೇಡಿ ನಿಮ್ಮೆಲ್ಲರ ಷಡ್ಯಂತ್ರಕ್ಕೆ ಬಲಿಯಾಗದೆ ಇನ್ನೂ ಉಳಿದುಕೊಂಡಿರುವ ರಾಜಕುಮಾರಿ ಖುದ್ದಾಗಿ ಬಂದಿದ್ದಾರೆ.

ನೀತು ಮಗಳನ್ನೆತ್ತಿಕೊಂಡು ಒಳಗೆ ಬಂದರೆ ಅವಳ ಜೊತೆಯಲ್ಲಿ ನಿಧಿ ಹರೀಶ...ರಜನಿ...ಅನುಷ ಕೂಡ ಬಂದರು. ಅಮ್ಮನ ತೋಳಿನಲ್ಲಿದ್ದ ನಿಶಾ ಬಂಧಿಯಾಗಿರುವವರನ್ನು ನೋಡುತ್ತಿದ್ದರೆ ಸುಧಾಮಣಿಯ ಪ್ರತಿರೂಪದಂತಿರುವ ನಿಶಾಳನ್ನು ನೋಡಿ ಚಂಚಲಾದೇವಿಗೆ ತನ್ನ ಹೃದಯ ಸ್ಥಂಭನವಾದಂತೆ ಅನುಭವವಾಯಿತುˌ ನೀತು ಅವರಲ್ಲಿ ಯಾರು ಯಾರೆಂದು ರಾಣಾನಿಂದ ಕೇಳುತ್ತ ಮಗಳನ್ನೆತ್ತಿಕೊಂಡು ಚಂಚಲಾದೇವಿ ಮುಂದೆ ನಿಲ್ಲುತ್ತ.....

ನೀತು......ನೋಡಿದ್ಯಾ ಸಾಯುವ ವಯಸ್ಸಿನಲ್ಲಿ ನೀನು ಮಾಡಿರುವ ಪಾಪದ ಕೆಲಸದ ಪರಿಣಾಮ ಎಷ್ಟು ಭೀಕರವಾಗಿದೆ ಅಂತ. ಅಂದಾಗೆ ಮುಖ ನೋಡಿದಾಗಲೇ ಈ ನನ್ನ ಕಂದ ಯಾರೆಂದು ಗೊತ್ತಾಗಿರುತ್ತೆ ಅಲ್ಲವಾ ? ನಿನ್ನ ಅನುಮಾನ ನಿಜ ಯಾವ ಮಗುವನ್ನು ನೀನು ನಿನ್ನ ಅನೈತಿಕ ಮಗಳು ಸೇರಿ ತಾಯಿಯ ಗರ್ಭದಲ್ಲಿಯೇ ಸಾಯಿಸುವ ಯೋಜನೆ ರೂಪಿಸಿದ್ದಿರೋ ಅದೇ ಮಹಾರಾಣಿ ಸುಧಾಮಣಿಯವರ ಮಗಳು ಸೂರ್ಯವಂಶಿ ಸಂಸ್ಥಾನದ ಕಿರಿಯ ರಾಜಕುಮಾರಿ ಇವಳೆ.
16—17 ವರ್ಷಗಳ ಹಿಂದೆ ಅವರ ಹಿರಿಯ ಮಗಳನ್ನು ಸಾಯಿಸಲು ಹಲವಾರು ಪ್ರಯತ್ನ ಮಾಡಿದರೂ ಅದು ಸಫಲವಾಗಿರಲಿಲ್ಲ. ಈಗ ಅವಳೊಬ್ಬಳೇ ನಿಮ್ಮೆಲ್ಲರನ್ನು ಮರಣದ ಶಯ್ಯೆಯಲ್ಲಿ ಮಲಗಿಸಲು ಸಕ್ಷಮಳಾಗಿ ಬೆಳೆದಿದ್ದಾಳೆ ನೋಡ್ತೀಯಾ ಬಾರಮ್ಮ ನಿಧಿ ನಿನ್ನಜ್ಜಿಗೆ ನಿನ್ನ ಪರಿಚಯ ಮಾಡಿಸಬೇಕಿದೆ.

ಇಬ್ಬರು ರಾಜಕುಮಾರಿಯರೂ ಸುರಕ್ಷಿತ ಮತ್ತು ಆರೋಗ್ಯವಂತರಾಗಿ ಇರುವುದನ್ನು ನೋಡಿ ಚಂಚಲಾದೇವಿ ಭಯಭೀತಳಾಗಿದ್ದರೆ ಅವಳ ಗಂಡ ಕೃಪಾಲ್ ಸಿಂಗ್ ಬೇರೇನನ್ನೋ ಯೋಚಿಸುತ್ತಿದ್ದನು.

ಕೃಪಾಲ್ ಸಿಂಗ್.......ಚಂಚಲಾದೇವಿ ಮತ್ತವಳ ಮಗಳು ಇಬ್ಬರೂ ಸೇರಿ ಷಡ್ಯಂತ್ರ ಮಾಡಿದ್ದಾರೆಂದು ಹೇಳುತ್ತಿರುವ ನಿನಗೆ ಬ್ರಾಂತು ಅನಿಸುತ್ತೆ ನಮಗೆ ಕೇವಲ ಮೂವರು ಗಂಡು ಮಕ್ಕಳೇ ಇರೋದು ಹೆಣ್ಣು ಮಗಳಿಲ್ಲ.

ನೀತು ನಗುತ್ತ........ಓ ಈ ಸತ್ಯ ನಿನ್ನ ಗಂಡನಿಗೂ ಗೊತ್ತಿಲ್ವಾ ಎಲ್ಲಾ ನಿನ್ನ ಪ್ರಿಯಕರ ಕಾಣಿಸ್ತಿಲ್ವಲ್ಲ. ಭಾನುಪ್ರತಾಪ್ ಎಲ್ಲಿ ಬಷೀರ್ ?

ನೀತು ಪ್ರಶ್ನಿಸಿದ ತಕ್ಷಣವೇ ಪಕ್ಕದ ಕೊಠಡಿಯಲ್ಲಿ ಬಂಧಿಯಾಗಿದ್ದ ಭಾನುಪ್ರತಾಪನನ್ನು ಇಬ್ಬರು ರಕ್ಷಕರು ಎಳೆತಂದರು.

ನೀತು.....ಈ ಮಹಾಶಯನೇ ನಿನ್ನ ಮಡದಿಯ ಪ್ರಿಯಕರ ಇವರ ಅನೈತಿಕ ಸಂಬಂಧದ ಪ್ರತಿಫಲವಾಗಿ ಜನಿಸಿದವಳೇ ಚಂಚಲಾದೇವಿ ಹಿರಿಯ ಮಗಳು ಯಶೋಮತಿ. ನನ್ನದೊಂದೇ ಒಂದು ಪ್ರಶ್ನೆ ನಿನ್ನ ಮಗಳೆಲ್ಲಿ ? ಯಶೋಮತಿ ಎಲ್ಲಿದ್ದಾಳೆಂದು ಹೇಳಿದರೆ ನಿನ್ನ ಮೂರು ಜನ ಮಕ್ಕಳನ್ನು ಜೀವಂತವಾಗಿ ಉಳಿಸ್ತೀನಿ ಒಂದು ನಿಮಿಷ ನಿನಗೆ ಯೋಚಿಸಲು ಕಾಲಾವಕಾಶ ನೀಡುವೆ ಹೇಳ್ಬಿಡು.

ಚಂಚಲಾದೇವಿ......ನಿನಗಿಷ್ಟೆಲ್ಲಾ ಸತ್ಯ ಗೊತ್ತಿರುವಾಗ ನನ್ನ ಮಗಳು ಎಲ್ಲಿದ್ದಾಳೆಂದು ಗೊತ್ತಿಲ್ವಾ ? ಹಿಮಾಚಲದ ಮನಾಲಿಯಲ್ಲಿ.......

ನೀತು......ಅಲ್ಲವಳ ಗಂಡ ಮತ್ತಿಬ್ಬರು ಮಕ್ಕಳಷ್ಟೇ ಸಿಕ್ಕಿ ಬಿದ್ದಿದ್ದಾರೆ ಅವರ ಪ್ರಕಾರ ಯಶೋಮತಿ ನಿನ್ನನ್ನು ಬೇಟಿಯಾಗಲು ಬಂದ್ದಿದ್ಳು ಅದುವೇ ಒಂದುವರೆ ವರ್ಷದ ಹಿಂದೆ ಅಂದಿನಿಂದ ಅವಳು ಮನೆಗೆ ಹಿಂದಿರುಗಿಲ್ಲ. ನಿನ್ನ ಮಗಳೆಲ್ಲಿದ್ದಾಳೆ ಅಂತ ಹೇಳ್ತೀಯಾ ?

ಚಂಚಲಾದೇವಿ ಕೋಪದಿಂದ.....ನನಗೆ ಗೊತ್ತಿಲ್ಲ....ಎಂದು ತುಂಬ ಜೋರಾಗಿ ಕಿರುಚಿಕೊಂಡಳು.

ನೀತು......ಅದಕ್ಯಾಕಿಷ್ಟು ಜೋರಾಗಿ ಕಿರುಚಿಕೊಳ್ಳುವೆ ಅನು ಇಲ್ಲಿ ಬಾರಮ್ಮ ಚಿನ್ನಿ ಇಲ್ಲಿರುವುದು ಸರಿಯಲ್ಲ ನೀವಿಬ್ಬರೂ ಮೇಲೋಗಿ. ಕಂದ ನೀನು ಆಂಟಿ ಜೊತೆ ಮೇಲಿರು ನಾನು ಆಮೇಲೆ ಬರ್ತೀನಿ.

ಅನುಷಾಳ ಕುತ್ತಿಗೆಗೆ ನೇತಾಕಿಕೊಂಡ ನಿಶಾ......ಆಂಟಿ ಲಿಲ್ಲಿ ಕುದ್ದಿ ಇದೆ ನಲಿ ನಾನಿ ಕುದ್ದಿ ಮೇಲೆ ಕೂಚಿ ಮಾತೀನಿ.

ಅನುಷ ಹೊರಬರುತ್ತ.......ನಡಿ ನಿನಗಿನ್ನೊಂದು ಪ್ರಾಣಿಯನ್ನು ತೋರಿಸ್ತೀನಿ......ಎಂದು ವೀರ್ ಸಿಂಗ್ ಬಳಿ ಒಂಟೆಗಳ ಬಗ್ಗೆ ಕೇಳಿ ಅವುಗಳತ್ತಲೇ ಹೆಜ್ಜೆ ಹಾಕಿದರು.

ಬಷೀರ್ ಖಾನ್ ಕಿವಿಯಲ್ಲೇ ಸೂಚನೆ ಕೊಟ್ಟು ಹಿಂದೆ ಸರಿದು ನೀತು ಸಿಗ್ನಲ್ ನೀಡಿದ ಮರುಗಳಿಗೆಯೇ ಚಂಚಲಾದೇವಿ ಹಿರಿಮಗನನ್ನು ಎಳೆತಂದು ಅವರೆಲ್ಲರ ಮಧ್ಯ ಕೆಡವಿದನು. ಆತನ ಜುಟ್ಟನ್ನು ತನ್ನ ಕೈಯಲ್ಲಿಡಿದ ಬಷೀರ್ ಖಾನ್ ಡ್ಯಾಗರ್ ಹೊರತೆಗೆದು ಅವನ ಕತ್ತಿನ ಮುಂದಿಟ್ಟು ಕುಯ್ಯಲಾರಂಭಿಸಿದನು. ಡ್ಯಾಗರ್ ಹರಿತವಾಗಿದ್ದು ಚಂಚಲಾದೇವಿಯ ಮಗನ ಕತ್ತಿನ ಚರ್ಮ ಸೀಳಿ ಒಳಗಿಳಿದಾಗಲೇ ಆತನ ಬಾಯಿಂದ ಹೃದಯ ವಿದ್ರಾವಕ ಚೀರಾಟ ಹೊರಬರುತ್ತಿದ್ದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಕತ್ತಿನ ನರಗಳು ಕತ್ತರಿಸಿ ಹೋಗಿದ್ದು ಆತನ ಚೀರಾಟವೂ ನಿಂತಿತು. ಚಂಚಲಾದೇವಿ ಆಕೆ ಗಂಡ ಮತ್ತವಳ ಇಡೀ ಕುಟುಂಬದವರು ನೋಡುತ್ತಿದ್ದಂತೆಯೇ ಕುಟುಂಬದ ಹಿರಿ ಮಗನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸಿದ ಬಷೀರ್ ಖಾನ್ ಅದನ್ನೆತ್ತಿ ಚಂಚಲಾದೇವಿಯ ಮುಂದಿಟ್ಟನು. ಆಕೆಯ ಮಗನ ದೇಹ ಕೆಲವು ಕ್ಷಣ ಒದ್ದಾಡಿ ನಿಸ್ತೇಜವಾಗಿ ಬಿದ್ದಿರುವುದನ್ನು ನೋಡಿ ಇಡೀ ಕುಟುಂಬ ಕಣ್ಣೀರಿಡುತ್ತ ಅಳುತ್ತಿದ್ದರೆ ಮಗನ ಮೃತ ದೇಹವನ್ನು ಸಹ ಮುಟ್ಟಲಾಗದ ಪರಿಸ್ಥಿತಿಯಲ್ಲಿದ್ದ ಚಂಚಲಾದೇವಿಯ ರೋಧನವು ಮುಗಿಲು ಮುಟ್ಟಿತ್ತು. ಹತ್ತು ನಿಮಿಷಗಳ ನಂತರ....

ನೀತು......ತಾಯಿಯ ಗರ್ಭದಲ್ಲಿ ಜನಿಸುವುದಕ್ಕೂ ಮುಂಚೆಯೇ ಮಗುವಿನ ಹತ್ಯೆ ಮಾಡಲು ಷಡ್ಯಂತ್ರ ರೂಪಿಸಿದವರು ಮೊದಲೇ ಅದರ ಪ್ರತಿಫಲವನ್ನು ಅನುಭವಿಸಲಿಕ್ಕೂ ಸಿದ್ದರಾಗಿರಬೇಕು ಅಂತ ನಿನಗೆ ಗೊತ್ತಿಲ್ಲವಾ ಚೆಂಚಲಾದೇವಿ ? ಈಗೇಳು ನಿನ್ನ ಮಗಳೆಲ್ಲಿ ?

ಚಂಚಲಾದೇವಿ ಅಳುತ್ತಲೇ.......ಅವಳ ಬಗ್ಗೆ ನನಗೇನೂ ಗೊತ್ತಿಲ್ಲ ಅವಳ್ಯಾವಾಗ ಎಲ್ಲಿರುತ್ತಾಳೆಂಬುದು ಅವಳೊಬ್ಬನ್ನು ಬಿಟ್ಟರೆ ಬೇರೆ ಯಾರಿಗೂ ತಿಳಿಯುವುದಿಲ್ಲ.

ನೀತು.......ನಡೀರಿ ಇಲ್ಲಿದ್ದೇನೂ ಪ್ರಯೋಜನವಿಲ್ಲ ಬಷೀರ್ ಖಾನ್ ಇವರೆಲ್ಲರೂ ಇಲ್ಲಿಯೇ ಬಿದ್ದಿರಲಿ ಈ ಪಾಪಿಯ ಹೆಣವೂ ಆದರೆ ಈ ಹೆಣವನ್ಯಾರೂ ಮುಟ್ಟುವುದಕ್ಕೂ ಬಿಡಬೇಡ.

ಬಷೀರ್ ಖಾನ್.....ನಿಮ್ಮಾಜ್ಞೆ ಮಾತೆ.

ಅನುಷಾಳ ಜೊತೆ ಒಂಟೆಗಳ ಗುಂಪಿನ ಹತ್ತಿರ ಬಂದ ನಿಶಾ ಅವನ್ನು ನೋಡಿ ತುಂಬ ಅಚ್ಚರಿಗೊಳ್ಳುತ್ತ ಇದ್ಯಾವ ಪ್ರಾಣಿಯಪ್ಪ ಎಂದು ತಲೆ ಕೆರೆದುಕೊಳ್ಳುತ್ತ ನೋಡುತ್ತಿದ್ದಳು.

ನಿಶಾ......ಆಂಟಿ ಇದಿ ಏನಿ ?

ಅನುಷ......ಇದು ಒಂಟೆ ಅಂತ ಕಂದ ನೀನು ಆನೆ...ಕುದುರೆಯ ಮೇಲೆ ಕೂತಿದ್ಯಲ್ಲ ಈಗ ಇದರ ಮೇಲೂ ಕೂರ್ತೀಯಾ.

ನಿಶಾ ಖುಷಿಯಿಂದ......ನಾನಿ ಕೂಚಿ ಮಾತೀನಿ ನಲಿ ಆಂಟಿ.

ವೀರ್ ಸಿಂಗ್ ಇಬ್ಬರಿಗೂ ಒಂಟೆಯ ಮೇಲೇರಿ ಕೂರುವ ವ್ಯವಸ್ಥೆ ಮಾಡಿಸಿ ಅದರ ಜೊತೆಯಲ್ಲೇ ತಾನೂ ಹೊರಟನು. ಅತ್ತಿಂದಿತ್ತ ಓಲಾಡುತ್ತ ನಡೆಯುತ್ತಿದ್ದ ಒಂಟೆಯ ಮೇಲೆ ಕುಳಿತಿದ್ದ ನಿಶಾ ತುಂಬ ಖುಷಿಯಿಂದ ಕಿರುಚುತ್ತಿದ್ದಳು. ನೀತು ಮತ್ತಿತರರು ಮೇಲೆ ಬಂದಾಗ ಒಂಟೆಯ ಸವಾರಿ ಮಾಡುತ್ತಿದ್ದ ನಿಶಾ ಅವರತ್ತ ಕೈಬೀಸಿ ಸವಾರಿಯ ಸಂತೋಷದಲ್ಲಿ ತೇಲಾಡುತ್ತಿದ್ದಳು.

ವರ್ಧನ್.....ಅಕ್ಕ ಮುಂದೇನು ಮಾಡೋದು ?

ನೀತು......ಯಶೋಮತಿಯ ಬಗ್ಗೆ ಅವಳ ತಾಯಿ ಹೇಳುತ್ತಿರುವುದು ಸತ್ಯ ಮಗಳ ಬಗ್ಗೆ ಅವಳಿಗೇನೂ ಗೊತ್ತಿಲ್ಲ ನಾನವಳ ಕಣ್ಣಿನಿಂದಲೇ ಅದನ್ನು ಗ್ರಹಿಸಿದೆ. ರಾಣಾ ಇವರೆಲ್ಲರಿಗಿಂತ ತುಂಬ ಅಪಾಯಕಾರಿ ಈ ಯಶೋಮತಿ ಅಂತ ಮಹಾರಾಜರೇ ಬರೆದಿದ್ದರು ಹೇಗಾದರೂ ಅವಳನ್ನು ಹುಡುಕಿಸು ಅವಳು ಬದುಕಿರುವ ತನಕ ನನ್ನ ಮಕ್ಕಳು ಸುರಕ್ಷಿತರಾಗಿ ಇರಲಾಗುವುದಿಲ್ಲ.

ರಜನಿ...ಹೌದು ಕಣೆ ಅವಳ ಮನೆಯಲ್ಲೇ ಅವಳದ್ದು ಒಂದೇ ಒಂದು ಫೋಟೋ ಸಹ ಇರಲಿಲ್ಲವೆಂದು ರಕ್ಷಕರು ಹೇಳಿದ್ದಾರೆಂದರೆ ಅವಳು ಅದೆಷ್ಟು ಚಾಲಾಕಿ ಅಂತ ತಿಳಿಯುತ್ತದೆ.

ನಿಧಿ.....ಅಮ್ಮ ನಾನೊಂದು ಮಾತು ಹೇಳಲಾ.

ಹರೀಶ......ಹೇಳಮ್ಮ ಕಂದ ಅಮ್ಮನ ಜೊತೆ ಮಾತನಾಡಲಿಕ್ಕೂ ಮಗಳಿಗೆ ಪರ್ಮಿಷನ್ ಬೇಕಾ.

ನಿಧಿ......ಅಪ್ಪ ನಾವೂ ಕೂಡ ಅಪ್ಪ ಮಾಡಿದ್ದ ತಪ್ಪನ್ನೇ ಮಾಡುತ್ತಾ ಹೋಗಬಾರದು. ಇವರೆಲ್ಲರ ಬಗ್ಗೆ ಅನುಮಾನವಿದ್ದರೂ ಸಹ ಅಪ್ಪ ಯಾವುದೇ ರೀತಿ ನಿರ್ಧಾರಕ್ಕೆ ಬಾರದಿರುವುದೇ ಅವರ ಮತ್ತು ಅಮ್ಮ ಇಬ್ಬರ ಸಾವಿಗೂ ಕಾರಣವಾಯ್ತು. ಇವರನ್ನೆಲ್ಲಾ ನವರಾತ್ರಿಯಂತ ಪುಣ್ಯಪಾವನ ಪವಿತ್ರವಾದ ಆಚರಣೆವರೆಗೂ ಯಾಕಮ್ಮ ಜೀವಂತ ಉಳಿಸಬೇಕು ಈಗಲೇ ಎಲ್ಲರಿಗೂ ಮುಕ್ತಿ ಕೊಟ್ಟರೆ ಒಳ್ಳೆಯದಲ್ಲವ.

ಹರೀಶ......ಹೌದು ನೀತು ಈಗಾಗಲೇ 15—20 ದಿನಗಳಿಂದ ಅವರು ಮಾಡಿರುವ ತಪ್ಪಿನ ಅರಿವಾಗಿಲ್ಲ ಅಂದರೆ ಇನ್ನು 15 ವರ್ಷಗಳೇ ಬಿಟ್ಟರೂ ಸಹ ಅವರಿಗೆ ತಾವು ಮಾಡಿದ್ದು ತಪ್ಪೇ ಅನಿಸುವುದಿಲ್ಲ. ಇನ್ನಿವರನ್ನು ಜೀವಂತವಾಗಿ ಇಡುವುದರಲ್ಲೇನೂ ಪ್ರಯೋಜನವಿಲ್ಲ ಎಲ್ಲಾ ಶತ್ರುಗಳನ್ನು ನಿರ್ನಾಮ ಮಾಡುವುದೇ ಉತ್ತಮ.

ನೀತು ಯೋಚಿಸಿದ ಬಳಿಕ.......ಆಯ್ತಮ್ಮ ನಿಧಿ ಆದರೆ ಶುಕ್ರವಾರ ಸಂಸ್ಥಾನದ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ನೀನು ಆಡಳಿತ ವಹಿಸಿಕೊಂಡ ನಂತರ ಇದೇ ನಿನ್ನ ಮೊದಲ ಆದೇಶವಾಗಲಿ. ನೀನು ಹೇಳಿದ್ದು ಸರಿಯೇ ಕಂದ ಪವಿತ್ರವಾದ ನವರಾತ್ರಿ ಸಮಯದಲ್ಲೇ ನನ್ನಿಬ್ಬರೂ ಮಕ್ಕಳ ಜನ್ಮ ದಿನವಿರುವಾಗ ಈ ಪಾಪಿಗಳನ್ನು ಆ ದಿನ ಸಾಯಿಸುವುದೂ ಒಳ್ಳೆಯದಲ್ಲ.

ವರ್ಧನ್.....ನಡೀರಿ ಅಕ್ಕ ಇದೇ ಅರಮನೆಗೆ ನಮ್ಮ ಸಂಸ್ಥಾನದ ಪ್ರಮುಖ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟುಗಳೆಲ್ಲರೂ ಬಂದಿದ್ದಾರೆ ಅವರ ಜೊತೆ ಮೂರು ವಿದ್ಯಾಲಯಗಳ ರೂಪರೇಷ ಚರ್ಚಿಸೋಣ ಅದರ ಅನುಮತಿಗಾಗಿ ಆಗಲೇ ನನ್ನ ಪಿಎ ಪ್ರಕ್ರಿಯೆಗಳನ್ನು ಶುರು ಮಾಡಿದ್ದಾಗಿದೆ ಶುಕ್ರವಾರ ಮುಂಜಾನೆ ನಿಮ್ಮ ಕೈಯಲ್ಲಿರುತ್ತದೆ. ನೀವು ಯಾವುದೇ ಪ್ಲಾನನ್ನಾದರೂ ಒಕೆ ಮಾಡಿ ಅದೇ ಅಪ್ರೂವಲ್ ಆಗುತ್ತೆ. ನಿಮಗಿಂತಲೂ ವಿದ್ಯಾಲಯಗಳ ಬಗ್ಗೆ ಭಾವನವರಿಗೇ ಚೆನ್ನಾಗಿ ತಿಳಿದಿರುತ್ತೆ ಅವರೇ ಉತ್ತಮ ನಿರ್ಣಯ ತೆಗೆದುಕೊಳ್ಳಲಿಕ್ಕೆ ಸಾಧ್ಯ. ಅವರಿಗೇ ವಿಧ್ಯಾರ್ಥಿಗಳಿಗೇನು ಬೇಕೆಂಬುದರ ಬಗ್ಗೆ ಜಾಸ್ತಿ ಗೊತ್ತಿರುತ್ತೆ ನಡೀರಿ ಭಾವ.

ನಿಧಿ.....ಅಮ್ಮ ನಾನು ಚಿನ್ನಿ ಜೊತೆಯಲ್ಲಿರ್ತೀನಿ.

ನೀತು.......ಆಯ್ತಮ್ಮ ಅನು ಜೊತೆ ಅವಳಾಟ ಎಲ್ಲವೂ ನಡೆಯುತ್ತೆ ಪಾಪ ಅವಳಂತೂ ಬೇಡ ಅಂತ ತಡೆಯಲ್ಲ ತಂಟೆ ಮಾಡಿದ್ರೆ ಎರಡು ಕೊಡು ಗೊತ್ತಾಯ್ತಾ.

ನಿಧಿ ನಗುತ್ತ.......ಆಯ್ತಮ್ಮ.

* *
* *


........continue
 

Samar2154

Well-Known Member
2,694
1,759
159
Continue.......


ಸಂಸ್ಥಾನದ ಕಂಪನಿಯಲ್ಲಿರುವ ಪ್ರತಿಭಾನ್ವಿತ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟುಗಳ ಜೊತೆ ಒಂದೆರಡು ಘಂಟೆ ಮೂರು ಕಡೆಗಳಲ್ಲಿ ಕಟ್ಟಲು ಉದ್ದೇಶಿಸಿರುವ ವಿಶಾಲವಾದ ಹಾಗು ಸುಸಜ್ಜಿತವಾಗಿರುವ ವಿದ್ಯಾಲಯಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು. ಅಲ್ಲಿ ವಿಧ್ಯಾರ್ಜನೆಗೆ ಬರುವ ವಿಧ್ಯಾರ್ಥಿಗಳಿಗೆ ಯಾವ್ಯಾವ ರೀತಿಯ ಸವಲತ್ತುಗಳು ಇರಬೇಕೆಂದು ಹರೀಶ ವಿವರವಾಗಿ ತಿಳಿಸಿದ್ದನ್ನೆಲ್ಲರೂ ಸರ್ವಸಮ್ಮತಿಯಿಂದ ಒಪ್ಪಿಕೊಂಡರು.

ವರ್ಧನ್......ಈಗ ನಾವು ಯಾವ ರೀತಿಯ ವಿದ್ಯಾಲಯಗಳನ್ನು ಕಟ್ಟಿಸಲು ಉದ್ದೇಶಿಸಿದ್ದೀವೆಂಬುದು ನಿಮ್ಮೆಲ್ಲರಿಗೂ ಒಂದು ಸ್ಪಷ್ಟತೆ ಮೂಡಿರಬೇಕಲ್ಲವಾ ?

ಸೀನಿಯರ್ ಆರ್ಕಿಟೆಕ್ಟ್.......ಹೌದು ಸರ್ ಪ್ರತಿಯೊಂದು ವಿಷಯದ ಬಗ್ಗೆಯೂ ನಮಗೆ ಫುಲ್ ಕ್ಲಾರಿಟಿ ದೊರಕಿದೆ. ಹರೀಶ್ ಸರ್ ನೀವು ಸೂಚಿಸಿರುವಂತೆ ನರ್ಸರಿಯಿಂದ ಏಳನೇ ತರಗತಿ....ಎಂಟರಿಂದ ಹನ್ನೆರಡವರೆಗೂ ಮತ್ತು ಡಿಗ್ರಿ..ಮಾಸ್ಟರ್ ಡಿಗ್ರಿ...ಇಂಜಿನೀಯರಿಂಗ್ ಮೆಡಿಕಲ್ ಇತ್ಯಾದಿ ಕೋರ್ಸುಗಳ ಕಟ್ಟಡಗಳನ್ನು ಪ್ರತ್ಯೇಕ ವಿಭಾಗ ಅಂತಲೇ ಪರಿಗಣಿಸಿ ಪ್ಲಾನ್ ಸಿದ್ದಗೊಳಿಸುತ್ತೀವಿ. ನಮಗೊಂದು ವಾರ ಕಾಲಾವಕಾಶ ನೀಡಿ ಅಷ್ಟರಲ್ಲಿ ಎರಡು ರೀತಿ ಪ್ಲಾನುಗಳನ್ನು ಸಿದ್ದಗೊಳಿಸುತ್ತೇವೆ. ನೀವು ಯಾವುದನ್ನು ಒಕೆ ಅಂತ ಹೇಳುವಿರೋ ಅದೇ ರೀತಿ ಕಟ್ಟಡಗಳನ್ನು ನಿರ್ಮಾಣ ಮಾಡೋಣ.

ಹರೀಶ.....ನೀವು ಜಾಸ್ತಿ ಟೈಂ ತೆಗೆದುಕೊಂಡರೂ ಪರವಾಗಿಲ್ಲ ಆದರೆ ಪ್ರತಿಯೊಂದು ಸಣ್ಣ ಪುಟ್ಟ ವಿಷಯಗಳನ್ನೂ ನಿಮ್ಮಲ್ಲೇ ಚರ್ಚಿಸಿದ ಬಳಿಕ ಕ್ಲಿಯರಾಗಿ ಪ್ಲಾನ್ ಸಿದ್ದಪಡಿಸಿ. ವಿದ್ಯಾಲಯಗಳ ಜೊತೆಗೇ ಆಯಾ ಬ್ಲಾಕಿನ ವಿಧ್ಯಾರ್ಥಿ ನಿಲಯಗಳು ಕೂಡ ಬೇರೆ ಬೇರೆಯದ್ದೇ ಆಗಿರಬೇಕು. ಒಂದು ಕಟ್ಟಡದಲ್ಲೆಷ್ಟು ರೂಮುಗಳಿರುತ್ತೆ ಗರಿಷ್ಟವಾಗಿ ಒಂದು ಬಿಲ್ಡಿಂಗಿನಲ್ಲೆಷ್ಟು ರೂಂ ಕಟ್ಟಿದರೆ ವಿಧ್ಯಾರ್ಥಿಗಳಿಗೆ ಒಳ್ಳೇದು ಎಲ್ಲದರ ಬಗ್ಗೆಯೂ ಯೋಚಿಸಿ. ಓದಿನ ಜೊತೆಗೆ ವಿಧ್ಯಾರ್ಥಿಗಳಿಗೆ ಆಟದ ಅಭಿರುಚಿ ಇರುವುದು ಸಹ ತುಂಬ ಮುಖ್ಯ ಅದಕ್ಕೆ ಆಟದ ಮೈದಾನಗಳು...ಒಳಾಂಗಣ ಕ್ರೀಡಾಂಗಣಗಳು ಹೇಗಿರಬೇಕೆಂದು ವಿವರವಾಗಿ ತೋರಿಸಬೇಕು.

ಸೀನಿಯರ್ ಆರ್ಕಿಟೆಕ್ಟ್.....ಹಾಗೇ ಮಾಡ್ತೀವಿ ಸರ್ ಈ ವಿದ್ಯಾಲಯ ಮಹಾರಾಣಿಯವರ ಕನಸಿನ ಕೂಸೆಂದು ತಿಳಿದಿರುವಾಗ ನಾವೆಲ್ಲಾ ವಿಧದಲ್ಲಿಯೂ ಯೋಚಿಸಿ ಅತ್ಯುತ್ತಮವಾದ ಪ್ಲಾನನ್ನೇ ಸಿದ್ದಪಡಿಸಿ ತರುತ್ತೇವೆ ಅದರ ಬಗ್ಗೆ ನಿಶ್ಚಿಂತರಾಗಿರಿ ಸರ್.

ಇನ್ನೂ ಕೆಲಹೊತ್ತು ಮಾತನಾಡಿದ ಬಳಿಕ ಅವರೆಲ್ಲರೂ ತೆರಳಿದಾಗ...

ವರ್ಧನ್....... ವಿದ್ಯಾಲಯಗಳನ್ನು ರಿಜಿಸ್ಟರ್ ಮಾಡಿಸಿ ಯು.ಜಿ.ಸಿ ಅನುಮೋದನೆ ಪಡೆಯುವುದೇನು ನನಗೆ ದೊಡ್ಡ ಕೆಲಸವಲ್ಲ ಆದರೆ ಯಾವ ಹೆಸರಿನಲ್ಲಿ ವಿದ್ಯಾಲಯ ಸ್ಥಾಪಿಸುವುದೆಂದು ನಮ್ಮಲ್ಯಾರು ಯೋಚಿಸಿಲ್ವಲ್ಲ ಭಾವ.

ಹರೀಶ ಮಡದಿಯತ್ತ ತಿರುಗಿದಾಗ ನೀತು.......ಇದು ಅತ್ತಿಗೆಯವರ ಕನಸಿನ ಕೂಸಾಗಿದ್ದರೂ ಅವರು ತಮ್ಮ ಹೆಸರಿನಲ್ಲಿ ಇರಬಾರದೆಂದು ಸೂಚಿಸಿದ್ದಾರೆಂದು ಅಣ್ಣ ಬರೆದಿದ್ದರಲ್ಲವಾ. ಹಾಗಾಗಿ ವಿದ್ಯಾ ದೇವಿ ತಾಯಿ ಸರಸ್ವತಿಯ ಹೆಸರಿನಲ್ಲೇ ಪ್ರಾರಂಭಿಸೋಣ. " ಸರಸ್ವತಿ ಗುರುಕುಲ ಕ್ಯಾಂಪಸ್ " ಎಂಬ ಹೆಸರನ್ನೇ ರಿಜಿಸ್ಟರ್ ಮಾಡಿಸಿಬಿಡು ಜೊತೆಗೆ ಇದು ಸೂರ್ಯವಂಶಿ ಸಂಸ್ಥಾನದ ಅಧೀನದಲ್ಲಿರುತ್ತದೆಂದು ನಮೂಧಿಸುವುದನ್ನು ಮರೆಯಬೇಡ.

ವರ್ಧನ್......ಆಯ್ತು ಅಕ್ಕ ಈ ಸಂಸ್ಥೆಯ ಮುಖ್ಯಸ್ಥರನ್ನಾಗಿ ನಿಮ್ಮ ಹೆಸರಿನಲ್ಲೇ ರಿಜಿಸ್ಟರ್ ಮಾಡಿಸ್ತೀನಿ. ಎಲ್ಲಾ ದಾಖಲೆಗಳು ಮತ್ತು ಪರ್ಮಿಷನ್ ಸಂಸ್ಥಾನದ ಹೆಸರಿನಲ್ಲಿ ಜೊತೆಗೆಲ್ಲಾ ದಾಖಲೆಗಳಲ್ಲೂ ಮುಖ್ಯಸ್ಥರಾಗಿ ನಿಮ್ಮ ಹೆಸರಿರುತ್ತೆ.

ನೀತು.....ನನ್ನ ಹೆಸರಿನಲ್ಲೇಕೆ ವರ್ಧನ್ ನಿಧಿ ಅಥವ ನಿಶಾ ಇಬ್ಬರ ಹೆಸರಿನಲ್ಲಿ ಮಾಡಿಸಬಾರದಾ ?

ವರ್ಧನ್......ಅಣ್ಣ ಮೂರು ಕಡೆ ಖರೀಧಿ ಮಾಡಿರುವ ಜಾಗಗಳು ಸಂಸ್ಥಾನದ ಹೆಸರಿನಲ್ಲಿದ್ದರೂ ಅದರ ಮೇಲಿನ ಪೂರ್ತಿ ಹಕ್ಕು ನಿಮ್ಮ ಹೆಸರಿನಲ್ಲಿದೆ ಅಕ್ಕ ಅದನ್ನೇಗೆ ಮರೆತಿರಿ.

ನೀತು.....ಆಯ್ತಪ್ಪ ಹಾಗೇ ಮಾಡು ಇಲ್ಲಿನ ಕೆಲಸ ಮುಗಿಯಿತಲ್ಲವ ನಾವು ಉದಯಪುರಕ್ಕೆ ಹಿಂದಿರುಗೋಣ.

ವರ್ಧನ್.......ಅಕ್ಕ ನಾನು ಇಲ್ಲಿಂದಲೇ ದೆಹಲಿಗೆ ಹೊರಡುತ್ತೀನಿ ವಿದ್ಯಾಲಯದ ಎಲ್ಲಾ ಕಾಗದ ಪತ್ರಗಳನ್ನು ಇವತ್ತೇ ಸಿದ್ದಪಡಿಸಿ ನನ್ನ ಪಿಎ ಜೊತೆ ನಾಳೆ ಅರಮನೆಗೆ ಕಳುಸಿಕೊಡ್ತೀನಿ ನೀವೊಮ್ಮೆ ಓದಿ ಎಲ್ಲವನ್ನೂ ತಿಳಿದುಕೊಂಡು ಸಹಿ ಮಾಡಿಬಿಡಿ. ನಾನು ಶುಕ್ರವಾರದ ಮುಂಜಾನೆ ಪರ್ಮಿಷನ್ ಜೊತೆ ಉದಯಪುರಕ್ಕೆ ಬರುವೆ ನಿಧಿಯ ಹೆಸರಿಗೆ ಸಂಸ್ಥಾನದ ಅಧಿಕಾರವನ್ನು ರಿಜಿಸ್ಟರ್ ಮಾಡಿಸಿದ ಬಳಿಕ ನಾನು ಹಿಂದಿರುಗಿ ಹೋಗೋದು.

ಅಷ್ಟರಲ್ಲಿ ಒಳಗೋಡಿ ಬಂದ ನಿಶಾ ಅಮ್ಮನನ್ನು ಸೇರಿಕೊಂಡು..... ಮಮ್ಮ ನನ್ನಿ ಸುಸಿ ಆತು ದೂಸ್ ಕೊಲು.

ವಿಕ್ರಂ ಸಿಂಗ್ ಸೂಚನೆಯ ಮೇರೆಗೆ ಅರಮನೆಯ ಸಹಾಯಕಿಯರು ಮೂರು ರೀತಿ ಹಣ್ಣಿನ ಜ್ಯೂಸ್ ಮತ್ತು ಹಲವು ರೀತಿ ತಿನಿಸುಗಳನ್ನು ತಂದಿಟ್ಟರು. ಸಿಹಿ ತಿಂಡಿಯನ್ನು ನೋಡುತ್ತಿದ್ದಂತೆ ಕೈ ಹಾಕಲು ನಿಶಾ ಮುಂದಾಗುವ ಮುಂಚೆಯೇ ಅನುಷ ಅವಳನ್ನೆತ್ತಿಕೊಂಡು ಫ್ರೆಶ್ ಮಾಡಿಸಿ ಕೈಕಾಲು ತೊಳೆಯಲು ಹೊತ್ತೊಯ್ದಳು. ಎಲ್ಲರೂ ಜ್ಸೂಸ್ ಮತ್ತು ತಿನಿಸಿಗಳನ್ನು ಸೇವಿಸುತ್ತ ಮಾತನಾಡುತ್ತಿದ್ದರೆ ವರ್ಧನ್ ಪಕ್ಕ ನಿಧಿ ಕುಳಿತಿದ್ದು ಅವನ ಮಡಿಲಲ್ಲಿ ನಿಶಾ ಹಾಯಾಗಿ ಪವಡಿಸಿದ್ದಳು. ವರ್ಧನ್ ಹೊರಡುವ ಮುಂಚೆ ಹರೀಶ—ನೀತು ಇಬ್ಬರ ಕಾಲಿಗೂ ನಮಸ್ಕರಿಸಿ ಆಶೀರ್ವಾದ ಪಡೆದಾಗ.......

ಹರೀಶ......ಏನಿದು ವರ್ಧನ್ ಭಾರತದ ಉಪ ಪ್ರಧಾನಿಯಾದವನು ನಮ್ಮ ಕಾಲಿಗೆ ನಮಸ್ಕರಿಸುವುದಾ ?

ವರ್ಧನ್......ನನ್ನ ಹುದ್ದೆ ನನ್ನ ಅಕ್ಕ ಭಾವನ ಕಾಲಿಗೆ ನಮಸ್ಕರಿಸಲು
ಹೇಗೆ ಅಡ್ಡಿಯಾಗುತ್ತೆ ಭಾವ ಇದು ನಮ್ಮ ಸಂಪ್ರದಾಯ ಇದನ್ನೆಲ್ಲಾ ನಾವೆಂದಿಗೂ ಮರೆಯಬಾರದು.

ನಿಧಿಯನ್ನು ತಬ್ಬಿಕೊಂಡು ನಿಶಾಳನ್ನೆತ್ತಿ ಚೆನ್ನಾಗಿ ಮುದ್ದಾಡಿದ ಬಳಿಕ ಅನುಷಾಳಿಗೆ ಆಶೀರ್ವಧಿಸಿ ರಜನಿಗೆ ಗೌರವ ಸೂಚಕ ನಮಸ್ಕರಿಸಿದ ನಂತರ ಅವರೆಲ್ಲರಿಂದ ಬೀಳ್ಗೊಂಡ ವರ್ಧನ್ ಶುಕ್ರವಾರ ಮುಂಜಾನೆ ಅರಮನೆಗೆ ಬರುವುದಾಗಿ ತಿಳಿಸಿ ದೆಹಲಿಯತ್ತ ಹೊರಟನು. ಹರೀಶ ಮತ್ತು ಕುಟುಂಬದವರು ಕೂಡ ಉದಯಪುರದ ಕಡೆ ಹೊರಟರೆ ಇಬ್ಬರು ರಾಜಕುಮಾರಿಯ ಸಾವಿನ ಷಡ್ಯಂತ್ರವೊಂದು ಕಟ್ಟಕಡೆಯ ಬಾರಿ ಅರಮನೆ ಆವರಣದಲ್ಲೇ ಹೆಣೆಯಲಾಗಿತ್ತು.
* *
* *


......continue
 

Samar2154

Well-Known Member
2,694
1,759
159
Continue........


ಕಾಮಾಕ್ಷಿಪುರ......

ಪ್ರೀತಿ......ಇಲ್ನೋಡಿ ಮಾವ ಚಿನ್ನಿ ಯಾರ ತೋಳಿನಲ್ಲಿದ್ದಾಳೆ ಅಂತ.

ರಾಜೀವ್ ಫೋಟೋ ನೋಡುತ್ತ......ಇವರನ್ನೆಲ್ಲೋ ನೋಡಿದಂತೆ ಅನಿಸ್ತಿದೆ ಯಾರು.....ಅರರೆ ಇವರು ನಮ್ಮ ದೇಶದ ಉಪಪ್ರಧಾನಿ ವರ್ಧನ್ ಸಿಂಗ್ ರಜಪೂತ್ ಅಲ್ಲವಾ ? ಚಿನ್ನಿ ಇವರ ಜೊತೆಯಲ್ಲಿ ಹೇಗೆ ಹೋದಳಮ್ಮ ಪ್ರೀತಿ ?

ಪ್ರೀತಿ.......ಚಿನ್ನಿ ಜೊತೆ ಇದೊಂದೇ ಫೋಟೋ ಅಲ್ಲ ಮಾವ ಇಲ್ಲಿ ನೋಡಿ ನಿಧಿ..ನೀತು...ಅನು ಎಲ್ಲರೂ ಇದ್ದಾರೆ. ಇನ್ನೂ ಹತ್ತಿಪ್ಪತ್ತು ಫೋಟೋಗಳನ್ನು ನಿಧಿ ಈಗಷ್ಟೇ ವಾಟ್ಸಪ್ಪಿನಲ್ಲಿ ನನಗೆ ಕಳಿಸಿದಳು. ವರ್ಧನ್ ಯಾರೆಂಬುದು ಗೊತ್ತಾ ?

ರೇವಂತ್......ಅವರು ನಮ್ಮ ದೇಶದ ಅತ್ಯುನ್ನತ ಜನಪ್ರಿಯರಾದ ನಾಯಕರು ದೇಶದ ಉಪಪ್ರಧಾನಿ ಅಂತ ನಮಗೆ ಗೊತ್ತಿದೆಯಲ್ಲ.

ಪ್ರೀತಿ......ಅವರು ಚಿನ್ನೀನ ಯಾಕೆ ಎತ್ತಿಕೊಂಡಿರೋದು ಹೇಳಿ.

ವಿಕ್ರಂ....ಅದು ನಮಗೇಗಮ್ಮ ಗೊತ್ತಿರುತ್ತೆ ನಾವು ರಾಜಸ್ಥಾನದಲ್ಲಿ ಇಲ್ವಲ್ಲ ನೀನೇ ಹೇಳ್ಬಿಡು.

ಸುಮ.....ಅವರು ದೇಶದ ಉಪಪ್ರಧಾನಿ ಅಷ್ಟೇ ಅಲ್ಲ ನಿಶಾ— ನಿಧಿ ಇಬ್ಬರಿಗೂ ಸ್ವಂತ ಚಿಕ್ಕಪ್ಪ ಆಗ್ಬೇಕು ಮಹಾರಾಜ ರಾಣಾಪ್ರತಾಪರ ಒಡಹುಟ್ಟಿದ ತಮ್ಮ ಈ ವರ್ಧನ್ ರಜಪೂತ್.

ಸುಮ ಹೇಳಿದ್ದನ್ನು ಕೇಳಿ ಮನೆಯ ಗಂಡಸರೆಲ್ಲರೂ ಶಾಕಾಗಿ ಅವಳ ಕಡೆಯೇ ನೋಡುತ್ತಿದ್ದರೆ ಸುಮ—ಪ್ರೀತಿ ರಾಜಸ್ಥಾನದ ಸಂಪೂರ್ಣ ವಿವರಗಳನ್ನು ಮನೆಯವರಿಗೆ ನೀಡಿದರು. ಅದನ್ನು ಕೇಳಿ ಎಲ್ಲರಿಗೂ ತುಂಬ ಸಂತೋಷವಾಗಿದ್ದು ತಕ್ಷಣವೇ ಫೋನ್ ಮಾಡಿ ನೀತು ನಿಧಿ ಜೊತೆ ಮಾತನಾಡಿದರು.
* *
* *
ಅರಮನೆಯಲ್ಲಿ ಮಹಾರಾಜ—ಮಹಾರಾಣಿಯ ನಿಧನವಾದ ಬಳಿಕ ಕೆಲವೇ ದಿನಗಳಲ್ಲಿ ಚಂಚಲಾದೇವಿ ಮತ್ತು ಭಾನುಪ್ರತಾಪ್ ಇಬ್ಬರ ಅನೈತಿಕ ಸಂಬಂಧದಿಂದ ಜನಿಸಿದ್ದ ಮಗಳು ಯಶೋಮತಿ ತನ್ನ ಅನೈತಿಕ ತಂದೆಯ ಸಹಾಯದಿಂದ ಉದಯಪುರದ ಅರಮನೆಯಲ್ಲಿ ತಾನೂ ಸೇವಕಿಯಾಗಿ ನೇಮಕಗೊಂಡಳು. ಆದರೆ ಇವಳೇ ತನ್ನ ಮಗಳು ಯಶೋಮತಿ ಎಂಬುದರ ಬಗ್ಗೆ ಭಾನುಪ್ರತಾಪನಿಗೂ ಸಹ ತಿಳಿಯದಂತೆ ಆಕೆ ಎಚ್ಚರಿಕೆ ವಹಿಸಿದ್ದಳು. ನಾಲ್ಕೈದು ಸಲ ಅರಮನೆ ಹೊರಗೆ ಭಾನುಪ್ರತಾಪರ ಜೊತೆ ಹೋಗಿ ಬಂದಿದ್ದ ಯಶೋಮತಿ ಬರುವಾಗಲೆಲ್ಲಾ ಒಂದು ಗನ್ನನ್ನು ಬಿಡಿ ಬಿಡಿಯಾಗಿ ಅರಮನೆಯ ಆವರಣದೊಳಗೆ ತರುತ್ತಿದ್ದು ತನಗೆ ಉಳಿದುಕೊಳ್ಳಲು ನೀಡಿರುವ ರೂಮಿನಲ್ಲಿ ಬಚ್ಚಿಟ್ಟಿದ್ದಳು. ನಿಶಾಳನ್ನು ಅರಮನೆಯಲ್ಲಿ ಕಾವಲಿದ್ದ ನಾಯಿಗಳ ಮೂಲಕ ಸಾಯಿಸುವ ಪ್ಲಾನ್ ಮಾಡಿದ್ದ ಯಶೋಮತಿ ಅದರಲ್ಲಿ ವಿಫಲಳಾದಾಗ ಅವಳಿಗೆ ತಲೆ ಕೆಟ್ಟಂತಾಗಿ ಹೋಗಿತ್ತು. ಯಾರೆಷ್ಟೇ ಚಾಲಾಕಿತವನ್ನು ಪ್ರದರ್ಶಿಸುತ್ತ ಬಂದಿದ್ದರೂ ಇನ್ನೇನು ಗೆಲುವಿನ ಪಥದತ್ತ ಹೆಜ್ಜೆಯಿಡಬೇಕೆನ್ನುವಷ್ಟರಲ್ಲಿ ಬೇರೊಬ್ಬರಲ್ಲಿಗೆ ಬಂದು ಸೋಲುಣಿಸಿದಾಗ ಬುದ್ದಿಗೆ ಮತಿಭ್ರಮಣೆಯಾಗುವುದಂತೂ ಸಹಜವಾದ ಪ್ರಕ್ರಿಯೆಯೇ. ಈಗಿಲ್ಲಿಯೂ ಸಹ ಅದೇ ನಡೆಯುತ್ತಿದ್ದು ಮಹಾರಾಜ ಮತ್ತು ಮಹಾರಾಣಿಯರನ್ನು ಸಾಯಿಸಿದ ನಂತರ ತನ್ನ ಷಡ್ಯಂತ್ರ ಫಲಿಸುತ್ತಿದೆ ಇನ್ನೇನಿದ್ದರೂ ತಂದೆ ಮೂಲಕ ಸಂಸ್ಥಾನದ ದಾಖಲೆ ಪತ್ರಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯಶೋಮತಿ ಚಿಂತಿಸುತ್ತಿದ್ದಳು. ಆದರಿಲ್ಲೇ ಅವಳೆಲ್ಲಾ ಭಾಜಿಯೂ ಉಲ್ಟಾಪಲ್ಟಾ ಅಗತೊಡಗಿ ರಾಣಾ ಮತ್ತವನ ಸಂಗಡಿಗರು ಅರಮನೆಯೊಳಗೆ ಪ್ರವೇಶಿಸಿದ್ದು ಭಾನುಪ್ರತಾಪನನ್ನೂ ತಮ್ಮ ಬಂಧನದಲ್ಲಿರಿಸಿದರು. ಯಶೋಮತಿಗೆ ಹೊರಗಿನಿಂದ ಸಹಾಯ ಮಾಡುತ್ತಿದ್ದಂತ ಅವಳ ತಾಯಿ ಮತ್ತವಳ ಕುಟುಂಬದವರೂ ಇದ್ದಕ್ಕಿದ್ದಂತೆ ಹಿಮಾಚಲದ ಅರಮನೆಯಿಂದ ಕಣ್ಮರೆಯಾದ ವಿಷಯ ತಿಳಿಯುತ್ತಲೇ ಇಲ್ಲೇನೋ ನಡೆಯುತ್ತಿದೆ ಎಂಬುದನ್ನು ಚಾಲಾಕಿಯಾಗಿದ್ದ ಯಶೋಮತಿಯು ತಕ್ಷಣವೇ ಗ್ರಹಿಸಿದಳು. ಅವಳು ಮುಂದಿನ ಪ್ಲಾನ್ ಬಗ್ಗೆ ಯೋಚನೆ ಮಾಡುವುದಕ್ಕೂ ಮುಂಚೆಯೇ ನೀತು ತನ್ನಿಬ್ಬರು ಮಕ್ಕಳೊಂದಿಗೆ ಆಗಮಿಸಿದ್ದು ರಾಜಮನೆತನದ ರಾಜಕುಮಾರಿಯರು ಬರುತ್ತಿರುವ ವಿಷಯ ತಿಳಿದು ಕೊನೆಯ ಹಂತದಲ್ಲಿ ತಾನು ಸೋಲುವ ಪರಿಸ್ಥಿತಿ ಬಂದಿತೆಂದು ಯೋಶಮತಿ ತನ್ನ ಯೋಚಿಸುವ ಚಾಲಾಕಿತನವನ್ನೆಲ್ಲಾ ಮರೆತು ಆತ್ಮಹತ್ಯೆಯ ಮಾರ್ಗ ಅನುಸರಿಸಲು ಮುಂದಾದಳು. ಆಕೆ ತಾನು ಆತ್ಶಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸದೆ ಎಲ್ಲರೆದುರಿಗೇ ಯುವರಾಣಿಯರ ಎದೆಯಲ್ಲಿ ಗುಂಡು ಹಾರಿಸಿ ಅವರಿಬ್ಬರನ್ನೂ ಈ ಲೋಕದಿಂದಲೇ ಅಪ್ಪ ಅಮ್ಮನ ಬಳಿ ಕಳುಹಿಸುವುದಕ್ಕೆ ಹುನ್ನಾರ ಮಾಡಿಕೊಂಡಿದ್ದಳು. ಇದರಲ್ಲಿ ತನ್ನ ಪ್ರಾಣ ಖಂಡಿತವಾಗಿ ಹೋಗುತ್ತೆ ಎಂಬುದನ್ನು ತಿಳಿದಿದ್ದರೂ ತನಗೆ ಸಿಗದಿರುವ ಸಂಸ್ಥಾನದಲ್ಲಿನ ಯಜಮಾನಿಕೆಯನ್ನು ಬೇರಾರೂ ಅನುಭವಿಸಬಾರದೆಂಬ ಅತ್ಯಂತ ನೀಚ ಮನಸ್ಥಿತಿಗೆ ಯಶೋಮತಿ ಬಂದಿದ್ದಳು ಮತ್ತಿದೇ ಆಕೆಯ ಕಟ್ಟ ಕಡೆಯ ಅಪರಾಧವೂ ಆಗುವುದಿತ್ತು. ಇದರ ಬಗ್ಗೆ ಸಣ್ಣನೇ ಸುಳಿವು ಸಹ ಇರದೆ ತನ್ನ ಪಕ್ಕದಲ್ಲಿ ಮಲಗಿದ್ದ ಗಂಡನನ್ನು ಸೇರಿಕೊಂಡಿದ್ದ ಹಿರಿ ಮಗಳು ನಿಧಿ ಮತ್ತು ಅಪ್ಪನೆದೆಯ ಮೇಲೆ ಕುಳಿತು ಆತನಿಗೆ ತನ್ನ ಪ್ರಶ್ನೆಗಳಿಂದ ತಲೆ ತಿನ್ನುತ್ತಿದ್ದ ಕಿರಿಮಗಳು ನಿಶಾಳ ಆಟಗಳನ್ನು ನೋಡುತ್ತ ನೀತು ಮುಗುಳ್ನಗುತ್ತ ಮಲಗಿದ್ದಳು.
* *
* *
ಶುಕ್ರವಾರ.......

ಮುಂಜಾನೆಯೇ ವರ್ಧನ್ ಉದಯಪುರದ ಅರಮನೆಗೆ ಬಂದಿದ್ದು ನೀತು ಕೈಯಲ್ಲಿ ಎರಡು ದೊಡ್ಡ ಕವರುಗಳನ್ನು ಕೊಟ್ಟನು.

ನೀತು....ವಿಧ್ಯಾಲಯಕ್ಕೆ ಸರ್ಕಾರದಿಂದ ಅನುಮತಿ ದೊರೆಯಿತಾ ?

ನಿಧ.....ಏನಮ್ಮ ನೀವು ಹೀಗೆ ಕೇಳ್ತಿದ್ದೀರಲ್ಲ ಚಿಕ್ಕಪ್ಪನದ್ದೇ ಸರ್ಕಾರ ನಮಗೆ ಪರ್ಮಿಷನ್ ಸಿಗುವುದಿಲ್ಲವಾ ಅಲ್ವಾ ಚಿಕ್ಕಪ್ಪ.

ವರ್ಧನ್ ನಗುತ್ತ ಅವಳನ್ನು ತಬ್ಬಿಕೊಂಡು......ಅಕ್ಕ ಇವೆರಡರಲ್ಲಿ ಸರ್ಕಾರದ ಯಾವ್ಯಾವ ವಿಭಾಗಗಳಿಂದ ನೋ ಅಬ್ಜೆಕ್ಷನ್ನುಗಳು ಬೇಕಾಗಿದೆಯೋ ಅವುಗಳೆಲ್ಲವೂ ಇದೆ. ಅದರ ಜೊತೆ ಯು.ಜಿ.ಸಿ ಮತ್ತು ಸರ್ಕಾರದಿಂದ ಅವಶ್ಯಕತೆಯಿರುವ ಅನುಮತಿ ಪತ್ರಗಳೂ ಸಹ ಇದರೊಳಗಿದೆ. ಇನ್ನೊಂದರಲ್ಲಿ ನಿಮ್ಮ ಹೆಸರಿನಲ್ಲಿ ಆರ್.ಬಿ.ಐ ಬ್ಯಾಂಕಿನಲ್ಲಿ ವಿಶೇಷ ಖಾತೆ ತೆರೆದಿರುವ ಬಗ್ಗೆ ದಾಖಲೆಗಳಿದೆ ಅದರ ಮೂಲಕ ನೀವು ಯಾವುದೇ ಊರು...ದೇಶದಲ್ಲಿದ್ದರೂ ಅಲ್ಲಿನ ಯಾವುದೇ ಬ್ಯಾಂಕಿನ ಮೂಲಕ ಬೇಕಿದ್ದರೂ ಹಣದ ವ್ಯವಹಾರ ನಡೆಸಲು ಅನುಕೂಲವಾಗುತ್ತೆ. ತಿಜೋರಿಯಲ್ಲಿದ್ದ ಅಣ್ಣನ ವಯಕ್ತಿಕ ಬ್ರೀಫ್ಕೇಸಿನಲ್ಲಿದ್ದ ಸೂಚನೆಗಳ ಪ್ರಕಾರವಾಗಿ ಅಣ್ಣನ ಖಾತೆಯಲ್ಲಿದ್ದ ಹಣವನ್ನೆಲ್ಲಾ ನಿಮ್ಮ ಹೊಸ ಖಾತೆಗೆ ವರ್ಗಾವಣೆ ಮಾಡಿಸಿದ್ದೇನೆ. ಅದರ ಜೊತೆ ಅಣ್ಣನ ಸೂಚನೆಯ ಮೇರೆಗೆ ಸಂಸ್ಥಾನದ ಅಧೀನಕ್ಕೆ ಬರುವ ಎಲ್ಲಾ ಕಂಪನಿಗಳಲ್ಲಿನ ಹಣದ ವ್ವವಹಾರಗಳನ್ನು ನೀವೇ ನಿರ್ವಹಿಸಲು ಅನುವಾಗುವಂತಹ ಅಧಿಕಾರದ ಪತ್ರಗಳಿದೆ ಅವನ್ನು ಇಂದು ರಿಜಿಸ್ಟರ್ ಮಾಡಿಸಿ ನಿಧಿ ಮತ್ತು ನಿಶಾ ಇಬ್ಬರ ಬೆರಳಚ್ಚನ್ನು ಹಾಕಿಸಿಬಿಟ್ಟರೆ ಹಣಕಾಸಿನ ಸಮಸ್ತ ಅಧಿಕಾರವೂ ನಿಮ್ಮ ಕೆಳಗಡೆ ಬಂದು ಬಿಡುತ್ತೆ ಅಕ್ಕ.

ನಿಧಿ....ಥಾಂಕ್ಯೂ ಚಿಕ್ಕಪ್ಪ ನೀವೆಂತಾ ದೊಡ್ಡ ಕೆಲಸ ಮಾಡಿದ್ದೀರೆಂದು ನಿಮಗೇ ಗೊತ್ತಿಲ್ಲ.

ವರ್ಧನ್......ನಾನು ಅಂಥದ್ದೇನಮ್ಮ ಮಾಡಿರೋದು ?

ನಿಧಿ.....ಚಿಕ್ಕಪ್ಪ ನನಗೆ ಐದು ವರ್ಷವಿದ್ದಾಗ ಇಲ್ಲಿಂದ ಆಶ್ರಮಕ್ಕೆ ಹೊರಟುಹೋದೆ ಅಲ್ಲಿನ ದಿನಚರಿಗಳನ್ನೇ ನಾನು ಜೀವನದುದ್ದಕ್ಕೂ ಅಳವಡಿಸಿಕೊಂಡು ಹದಿನಾಲ್ಕು ವರ್ಷ ಜೀವಿಸುತ್ತ ಬಂದಿರುವೆ. ಈಗ ತಾನೇ ನಾನೂ ಕೂಡ ಹೊರಗಿನ ಪ್ರಪಂಚದಲ್ಲಿ ನನ್ನದೇ ಆದ ಸ್ನೇಹಿತರ ಜೊತೆ ನಗುನಗುತ್ತ ಖುಷಿಯಿಂದ ಕಾಲ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇಲ್ಲಿನ ಅಧಿಕಾರ ವಹಿಸಿಕೊಂಡ ನಂತರ ನಾನೆಲ್ಲಿ ಸಂಸ್ಥಾನದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತ ಜೀವನದಲ್ಲಿನ ಅಮೂಲ್ಯ ದಿನಗಳನ್ನು ಕಳೆಯಬೇಕಾಗುತ್ತೋ ಎಂದು ತುಂಬಾನೇ ಯೋಚಿಸುತ್ತಿದ್ದೆ. ಈಗ ನನಗೆ ನಿಶ್ಚಿಂತೆಯಾಗಿದೆ ಎಲ್ಲಾ ಜವಾಬ್ದಾರಿ ಅಮ್ಮನ ಹೆಗಲಿಗೆ ಹೊರೆಸಿದ್ದು ಅಪ್ಪ ನನ್ನ ಚಿಂತೆಗಳನ್ನೆಲ್ಲಾ ದೂರ ಮಾಡಿದ್ದಾರೆ ಅದಕ್ಕೆ ಬೇಕಾದ ಪತ್ರಗಳನ್ನು ನೀವು ಸಿದ್ದಪಡಿಸಿ ತಂದಿದ್ದೀರ ಅದಕ್ಕೆ ನಿಮಗೆ ವಿಶೇಷವಾಗಿ ಥಾಂಕ್ಸ್ ಹೇಳ್ತಿದ್ದೀನಿ.

ನೀತು......ಆಯ್ತು ಜಾಸ್ತಿ ಸಂತೋಷಪಡುವ ಅವಶ್ಯಕತೆಯಿಲ್ಲ ಅಣ್ಣ ತಮ್ಮ ಇಬ್ಬರೂ ಸೇರಿ ನನ್ಮೇಲೆ ಇಷ್ಟು ದೊಡ್ಡ ಜವಾಬ್ದಾರಿಗಳನ್ನು ಹೊರಿಸಿದ್ದಾರೆ ನಾನೆಷ್ಟರ ಮಟ್ಟಿಗೆ ನಿಭಾಯಿಸಲು ಸಮರ್ಥಳೋ ಅಂತ ಭಯವಾಗ್ತಿದೆ.

ವರ್ಧನ್......ಅಕ್ಕ ನಿಮಗೆ ಅರ್ಹತೆ ಮತ್ತು ನಿಭಾಯಿಸುವ ಛಾತಿ ಹಾಗು ಯೋಗ್ಯತೆಯಿದೆ ಎಂದು ಗುರುಗಳಿಗೆ ತಿಳಿದಿರುವುದಕ್ಕಾಗಿ ತಾನೇ ಅಣ್ಣನಿಗೆ ಆದೇಶ ನೀಡಿ ಸಂಸ್ಥಾನದ ಸಮಸ್ತ ಆಡಳಿತವನ್ನು ನೀವೇ ವಹಿಸಿಕೊಳ್ಳುವಂತೆ ಉಯಿಲನ್ನು ಬರೆಸಿರುವುದು. ನಿಶಾ ಮತ್ತು ನಿಧಿ ಹೆಸರಿಗೆ ಸಂಸ್ಥಾನದ ವಾರಸುದಾರರು ಮತ್ತು ಇಲ್ಲಿನ ರಾಜಕುಮಾರಿಯರಷ್ಟೆ ಆದರೆ ಸಂಸ್ಥಾನದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಿದ್ದರೂ ಅವರಿಬ್ಬರಿಗೆ ನಿಮ್ಮ ಅನುಮತಿಯನ್ನು ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ. ನಡೀರಿ ತಿಂಡಿ ಮುಗಿಸಿ ರಿಜಿಸ್ಟರ್ ಕಛೇರಿಗೆ ಹೊರಡೋಣ ಇಂದು ಅಲ್ಲಿನ ಕಛೇರಿಯಲ್ಲಿ ನಮ್ಮ ಕೆಲಸ ಬಿಟ್ಟು ಬೇರಾವುದೇ ಕೆಲಸಗಳೂ ನಡೆಯದಂತೆ ನಾನು ವ್ಯವಸ್ಥೆ ಮಾಡಿಸಿಯಾಗಿದೆ.

ಎಲ್ಲರೂ ರಿಜಿಸ್ಟರ್ ಕಛೇರಿಗೆ ಬಂದಾಗ ಅಲ್ಲಾಗಲೇ ಸಂಸ್ಥಾನದ ವಕೀಲರ ತಂಡದವರು ಹಾಜರಿದ್ದು ಅವರಿಗೆ ಹೊಸದಾಗಿ ವರ್ಧನ್ ಮಾಡಿಸಿಕೊಂಡು ತಂದಿದ್ದ ದಾಖಲೆಗಳನ್ನು ನೀಡಿ ಏನೇನು ಹೇಗೆ ಮಾಡಬೇಕೆಂದು ಸೂಚಿಸಲಾಯಿತು. ಮಹಾರಾಜ ರಾಣಾಪ್ರತಾಪ್ ಬರೆದಿದ್ದ ವಿಲ್ ಪ್ರಕಾರವಾಗಿ ಸೂರ್ಯವಂಶಿ ಸಂಸ್ಥಾನದ ಅಧೀನಕ್ಕೆ ಬರುವ ಎಲ್ಲಾ ಚಲ ಮತ್ತು ಅಚಲ ಆಸ್ತಿಗಳ ಮಾಲೀಕತ್ವಗಳನ್ನು ನಿಶಾ ಮತ್ತು ನಿಧಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದರೆ ಅವರಿಗೆ 25 ವರ್ಷ ತುಂಬುವವರೆಗೂ ಸಮಸ್ತ ಆಸ್ತಿಗಳ ಹೊಣೆಗಾರಿಕೆಯು ಹರೀಶ ಮತ್ತು ನೀತು ಇಬ್ಬರ ಜವಾಬ್ದಾರಿಯಾಗಿತ್ತು. ನಿಶಾ ಅಪ್ಪನ ತೋಳಿನಲ್ಲಿದ್ದು ತನ್ನ ಎಡಗೈ ಹೆಬ್ಬೆಟ್ಟನ್ನು ಇಂಕ್ ಪ್ಯಾಡಿನಲ್ಲಿ ಅದ್ದುತ್ತ ನೂರಾರು ಪತ್ರಗಳಲ್ಲಿ ಮುದ್ರೆಯೊತ್ತುವಷ್ಟರಲ್ಲೇ ಅವಳಿಗೆ ಚಿಟ್ಟಾಗಿ ಹೋಗಿತ್ತು. ಹರೀಶ ಮಗಳನ್ನು ಪೂತುಣಿಸುತ್ತ ಅವಳ ಹೆಬ್ಬೆಟ್ಟಿನ ಮುದ್ರೆಯೊತ್ತಿಸುವುದರ ಜೊತೆ ದಾಖಲೆಗಳಲ್ಲಿ ಅವಳ ಫೋಟೋ ಮೂಡಿಬರುವುದಕ್ಕೆ ಅವಳನ್ನು ವೆಬ್ ಕ್ಯಾಮಿನೆದುರು ನಿಲ್ಲಿಸುವ ಕೆಲಸ ಮಾಡುವಷ್ಟರಲ್ಲಿ ಸಾಕಾಗಿ ಹೋಗಿದ್ದನು. ಇದರ ಜೊತೆಯಲ್ಲಿ ಸಂಸ್ಥಾನದ ಅಧೀನದಲ್ಲಿ ಬರುವ ಎಲ್ಲಾ ಹಣಕಾಸಿನ ವ್ಯವಹಾರದ ಹೊಣೆಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ನಿರ್ಣಯವನ್ನಾದರೂ ತೆಗೆದುಕೊಳ್ಳುವ ಅಧಿಕಾರವನ್ನು ನೀತುವಿನ ಅಧಿಕಾರದಡಿಯಲ್ಲಿ ಬರುವುದಕ್ಕೆ ಬೇಕಾಗಿರುವ ದಾಖಲೆಗಳನ್ನೂ ಸಹ ರಿಜಿಸ್ಟರ್ ಮಾಡಿಸಲಾಯಿತು. ಸಂಜೆ ತನಕವೂ ಇದೆಲ್ಲದರ ಪ್ರಕ್ರಿಯೆಗಳು ನಡೆಯುತ್ತಿದ್ದು ನಿಶಾಳಿಗಂತೂ ಅಲ್ಲಿಂದೆದ್ದು ಹೊರಗೆ ಓಡಿದರೆ ಸಾಕೆನಿಸುತ್ತಿತ್ತು. ಅಲ್ಲಿನ ಕೆಲಸಗಳನ್ನೆಲ್ಲಾ ಪೂರ್ಣಗೊಳಿಸಿ ಹೊರಬಂದಾಗ ವಕೀಲರ ತಂಡದವರು ನಾಳೆ ತಾವೇ ಖುದ್ದಾಗಿ ಅರಮನೆಗೆ ಬಂದು ಎಲ್ಲಾ ರಿಜಿಸ್ಟರ್ಡ್ ದಾಖಲೆಗಳನ್ನು ನೀಡುವ ಬಗ್ಗೆ ಹೇಳಿ ಅಲ್ಲಿಂದ ತೆರಳಿದರೆ ಉಳಿದವರು ಅರಮನೆಯ ಕಡೆಗೆ ಹಿಂದಿರುಗಿದರು.

ಅರಮೆನೆಯೊಳಗೆ ಹೋಗುವಾಗ ದಾರಿ ಮಧ್ಯದಲ್ಲಿ ಸಿಗುವಂತಹ ಪರಾಂಗಣದ ಸ್ಥಳವನ್ನು ಆರು ಜನ ಸೇವಕಿಯರು ಶುಭ್ರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರೆ ಅವರಲ್ಲೊಬ್ಬಳು ಯಶೋಮತಿಯೇ ಆಗಿದ್ದಳು. ಅಕ್ಕನ ತೋಳಿನಲ್ಲಿದ್ದ ನಿಶಾ ಅಪ್ಪನಿಗೆ ಆನೆಯ ಹತ್ತಿರ ಕರೆದೊಯ್ಯುವಂತೆ ಕೇಳುತ್ತಿದ್ದರೆ ಹರೀಶ ಮೊದಲು ಫ್ರೆಶಾಗೋಣ ಆಮೇಲೆ ಆನೆ ಸವಾರಿ ಮಾಡಿಸುವುದಾಗಿ ಹೇಳುತ್ತಿದ್ದನು. ಈಗ ಸಿಕ್ಕಿರುವ ಅವಕಾಶಕ್ಕಿಂತಲೂ ಉತ್ತಮವಾದ ಅವಕಾಶವು ತನಗೆ ಸಿಗುವುದಿಲ್ಲವೆಂದು ಅರಿತಿದ್ದ ಯಶೋಮತಿ ಇಲ್ಲಿಗೆ ಬರುವುದಕ್ಕೂ ಮುಂಚೆಯೇ ಸೊಂಟದಲ್ಲಿ ಸೀರೆಯೊಳಗೆ ಗನ್ ಬಿಗಿದುಕೊಂಡು ಬಂದಿದ್ದು ಈಗದನ್ನೇ ಹೊರತೆಗೆದಳು. ರಕ್ಷಕರಲ್ಲಿ ಯಾರಾದರೂ ಪ್ರತಿಕ್ರಿಯೆ ನೀಡುವುದಕ್ಕೂ ಮುಂಚೆಯೇ ಯಶೋಮತಿ ಕೈಯಲ್ಲಿ ಹಿಡಿದಿದ್ದ ಗನ್ ನಿಶಾ ಮತ್ತು ನಿಧಿ ಇಬ್ಬರನ್ನು ಗುರಿಯಾಗಿಸಿಕೊಂಡು ಮೂರು ಬಾರಿ ಟ್ರಿಗರ್ ಅಮುಕಿದಳು. ಢಾಂ...ಢಾಂ...ಢಾಂ.... ಎಂದು ಸಿಡಿದ ಗುಂಡುಗಳು ಪಿಸ್ತೂಲಿನಿಂದ ಹೊರಬಂದಿದ್ದು ರಾಣಾ ಸಹ ಮಿಂಚಿನ ವೇಗದಲ್ಲಿ ಕತ್ತಿಯನ್ನಿರಿದು ಮುನ್ನುಗ್ಗಿದವನೇ ಅದನ್ನು ಬೀಸಿದಾಗ ಯಶೋಮತಿಯ ಬಲ ಮುಂಗೈ ಕತ್ತರಿಸಿ ನೆಲದ ಮೇಲೆ ಬಿದ್ದಿತು. ಆದರೆ ಅದಾಗಲೇ ಮೂರು ಗುಂಡುಗಳು ಮಾಡಬೇಕಾದ ಕಾರ್ಯ ಮಾಡಿದ್ದು ಆಗಬಾರದಂತ ಅನಾಹುತ ಘಟಿಸಿ ಹೋಗಿದ್ದು ಹರೀಶ.....ರಜನಿ.....ವರ್ಧನ್.....ಅನುಷ ನಿಂತ ಜಾಗದಲ್ಲಿಯೇ ಕಲ್ಲಾಗಿ ಹೋಗಿದ್ದರು.
 

Samar2154

Well-Known Member
2,694
1,759
159
Update 227 posted in 4 parts.

ಯಶೋಮತಿ ಹಾರಿಸಿದ ಗುಂಡಿಗೆ ಬಲಿಯಾದವರು ಯಾರಿರಬಹುದು ?
 
Last edited:
Top