• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Raj gudde

Member
222
71
28
ತುಂಬ ಚನ್ನಾಗಿದೆ ಮೊದಲನೆ‌‌ ಅಪ್ಡೇಟ್.. ಮುಂದಿನ ಅಪ್ಡೇಟ್ ಇನ್ನು‌‌ surprise ಇರುತ್ತೆ ಅನ್ನೊದು‌ ನನ್ನ ಅನಿಸಿಕೆ
 

sharana

New Member
37
23
8
Sir kathe chennagi ide bega mundina update kodi
 

Samar2154

Well-Known Member
2,614
1,685
159
ಭಾಗ 283


ಫ್ಯಾಕ್ಟರಿಗಳಲ್ಲಿದ್ದವರು ಮತ್ತು ಸಂಸ್ಥಾನದ ಕಂಪನಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದವರೆಲ್ಲರೂ ಮನೆಯ ಲಿವಿಂಗ್ ಹಾಲಿನಲ್ಲಿ ಜಮಾವಣೆಗೊಂಡಿದ್ದರು. ಜ್ಯೋತಿ ಮತ್ತು ಪ್ರಶಾಂತ್ ಇಬ್ಬರೂ ರೇವತಿಯ ಆದೇಶದ ಮೇರೆಗೆ ಶೃಂಗೇರಿಯಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರಿಂದ ಅವರಿಬ್ಬರು ಮಾತ್ರ ಉಪಸ್ಥಿತರಿರಲಿಲ್ಲ.

ರಜನಿ.....ನೀತುಗೇನಾಯ್ತು ? ನಾನವಳ ಹತ್ತಿರ ಹೋಗ್ತೀನಿ.

ನಿಧಿ........ಬೇಡ ಆಂಟಿ ಪ್ಲೀಸ್ ಸಧ್ಯಕ್ಕೀಗ ಅಮ್ಮನ ಹತ್ತಿರಕ್ಯಾರೂ ಹೋಗ್ಬೇಡಿ ಅಮ್ಮನ ಜೊತೆ ಅಪ್ಪ ಇದ್ದಾರೆ. ನಿಮಗೂ ಗೊತ್ತಿದೆ ಅಮ್ಮನ ಮನಸ್ಸಿನ ನೋವನ್ನು ಕಡಿಮೆಗೊಳಿಸುವ ಶಕ್ತಿ ನಿಶಾ ಹತ್ತಿರ ಮಾತ್ರವೇ ಇರೋದು ಅಂತ.

ಶೀಲಾ.......ನಿಧಿ ನಮ್ಮಲ್ಯಾರನ್ನೂ ನೀತು ಹತ್ತಿರ ಹೋಗ್ಬೇಡಿ ಅಂತಿದ್ದೀಯ ಆದರೆ ವಿಷಯವೇನೆಂದೂ ಹೇಳ್ತಿಲ್ವಲ್ಲ. ನೀತುವಿಗೆ ಆಶ್ರಮದಲ್ಲಿ ಅಂತದ್ದೇನಾಯ್ತು ? ಅವಳು ದುಃಖದಲ್ಲಿರೋದು ನೋಡಲಿಕ್ಕೆ ನನ್ನಿಂದಾಗಲ್ಲ ಕಣೆ.

ಪ್ರೀತಿ......ಗಿರೀಶ ನೀನೂ ಆಶ್ರಮಕ್ಕೆ ಹೋಗಿದ್ದೆ ಅಲ್ಲೇನಾಯ್ತು ?

ಗಿರೀಶ......ಅತ್ತೆ ನಾವೆಲ್ಲರೂ ಬೇರೆ ಕಡೆಯಿದ್ವಿ ಅಮ್ಮನ ಜೊತೆ ಇರ್ಲಿಲ್ಲ ಅಲ್ಲೇನು ನಡೆಯಿತೆಂದು ನನಗೆ ಗೊತ್ತಿಲ್ಲ. ಸುರೇಶ ನೀನು ಅಮ್ಮನ ಜೊತೆಗಿದ್ಯಲ್ಲ ಏನಾಯ್ತೆಂದು ಹೇಳು.

ಸುರೇಶ ಮಾತನಾಡುವ ಬದಲು ಮಂಡಿಯಲ್ಲಿ ಮುಖವನ್ನು ಹುದುಗಿಸಿ ಅಳತೊಡಗಿದರೆ ದೃಷ್ಟಿ ಕೂಡ ಕಣ್ಣೀರು ಸುರಿಸುತ್ತ ಅವನಿಗೆ ಸಾಂತ್ವಾನ ನೀಡಿ.......ಅಕ್ಕ ಎಲ್ಲರೂ ಬಂದಾಯ್ತಲ್ಲ ನೀವೇ ಹೇಳ್ಬಿಡಿ.

ನಿಧಿಯ ಕಣ್ಣಿನಿಂದಲೂ ನಿರಂತರವಾಗಿ ಕಂಬನಿ ಜಿನುಗುತ್ತಿದ್ದು ಅದನ್ನೊರೆಸಿಕೊಳ್ಳುತ್ತ.......ಅಜ್ಜಿ ಆಶ್ರಮದಲ್ಲಿ ಹೆಂಗಸೊಬ್ಬರ ಬೇಟಿಯಾಯ್ತು. ಅವರು ಹೇಳುವ ಪ್ರಕಾರ ಸುರೇಶ ಹುಟ್ಟುವ ಸಮಯದಲ್ಲವರು ಅಮ್ಮನ ಜೊತೆ ಲೇಬರ್ ವಾರ್ಡಿನೊಳಗಿದ್ದ ನರ್ಸ್ ಅಂತೆ. ಅವರು ಮಾಡಿರುವ ಪಾಪಗಳನ್ನು ಅಮ್ಮನಿಗೆ ಅವರೇ ಖುದ್ದಾಗಿ ಹೇಳಿ ಸುರೇಶ ಹುಟ್ಟಿದ ದಿನ ನಡೆದಿದ್ದಂತ ಘಟನೆಗಳನ್ನು ಹೇಳಿದ್ದಕ್ಕೆ ಅಮ್ಮನ ಜೊತೆ ನಮ್ಮೆಲ್ಲರಿಗೂ ದೊಡ್ಡ ಆಘಾತವಾಗಿದ್ದು.

ಸುಮ ಗಾಬರಿಯಿಂದ.....ಆಘಾತಗೊಳ್ಳುವಂತ ವಿಷಯವೇನು ?

ನಿಧಿ.......ಅತ್ತೆ ಅದು ಅಮ್ಮ ಗರ್ಭಿಣಿಯಾಗಿದ್ದ ಸಮಯದಲ್ಲಿ ಅಮ್ಮನ ಹೊಟ್ಟೆಯಲ್ಲಿ ಸುರೇಶ ಒಬ್ಬನೇ ಇರಲಿಲ್ವಂತ ಅಮ್ಮ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ರಂತೆ. ಸುರೇಶ ಹುಟ್ಟಿದ ಐದಾರು ನಿಮಿಷಗಳ ನಂತರ ಹೆಣ್ಣು ಮಗು ಜನಿಸಿದ್ದಳೆಂದು ಆ ನರ್ಸ್ ಅಮ್ಮನಿಗೆ ಹೇಳಿದ್ರು.

ನಿಧಿ ತೆರದಿಟ್ಟ ಸತ್ಯ ಮನೆಯವರ ಮೇಲೆ ವಜ್ರಪಾತ ಮಾಡಿದ್ದು ಎಲ್ಲರೊಂದು ಕ್ಷಣ ನಡುಗಿ ಹೋದರು. ಅವರಲ್ಲಿ ರಜನಿಯೇ ಮೊದಲು ಸಾಶರಿಸಿಕೊಳ್ಳುತ್ತ......
.
ರಜನಿ.....ಏನ್ ಹೇಳ್ತಿದ್ದೀಯ ನಿಧಿ ನಿಮ್ಮಮ್ಮ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಳಾ ?

ನಿಧಿ......ಹೂಂ ಆಂಟಿ ನರ್ಸ್ ಹೇಳಿದ ಸತ್ಯ ಇದೇ ಇದರಿಂದಲೇ ಅಮ್ಮನೀಗ ಈ ಸ್ಥಿತಿಗೆ ತಲುಪಿರೋದು.

ಅಶೋಕ.......ಆ ಮಗು ಏನಾದ್ರೂ ಹುಟ್ಟಿದಾಗಲೇ.......

ಸುರೇಶ......ಇಲ್ಲ ಅಂಕಲ್ ನನ್ನ ತಂಗಿ ಆರೋಗ್ಯವಾಗಿದ್ದಳಂತೆ.

ನಿಧಿ.....ಹೌದು ಅಮ್ಮ ಆರೋಗ್ಯವಂತ ಹೆಣ್ಣು ಮಗಳಿಗೇ ಜನ್ಮ ನೀಡಿದ್ರಂತೆ.

ಸುಮ ಕಣ್ಣೀರು ಒರೆಸುಕೊಳ್ಳುತ್ತ...ಮತ್ತೀಗ ಆ ಮಗು ಎಲ್ಲಿ ?

ಸುರೇಶ......ಪಾಪಿಗಳು ನನ್ನನ್ನು ತಂಗಿಯಿಂದ ದೂರ ಮಾಡ್ಬಿಟ್ರು.

ಶೀಲಾ......ನಿಧಿ ಏನ್ ವಿಷಯ ಅಂತ ಪೂರ್ತಿ ಹೇಳಮ್ಮ.

ಹರೀಶ ಕೆಳಗೆ ಬಂದಿದ್ದು ಅವನನ್ನೆಲ್ಲರೂ ಸಮಾಧಾನ ಮಾಡಿದ್ರೆ ನಯನ—ರಶ್ಮಿ ಇಬ್ಬರೂ ಅವನೆದೆಗೊರಗಿ ಅಳುತ್ತಿದ್ದರು.

ರಜನಿ.......ನೀತು ಹೇಗಿದ್ದಾಳೆ ?

ಹರೀಶ.....ಇಷ್ಟು ವರ್ಷಗಳಾದ್ಮೇಲೆ ಇಂತ ವಿಷಯ ಕೇಳಿದಾಗ ದುಃಖವಾಗೋದು ಸಹಜ ತಾನೇ ಈಗ ಮಲಗಿದ್ದಾಳೆ ಜೊತೆಗೆ ನನ್ನ ಕಂದ ಇದ್ದಾಳಲ್ಲ ಅಮ್ಮ ಜಾಸ್ತಿ ಹೊತ್ತು ದುಃಖದಲ್ಲಿರೊದಕ್ಕೆ ಅವಳು ಬಿಡಲ್ಲ.

( ಸುಮ್ಮನೆ ಎಳೆದಾಡುವುದಿಲ್ಲ ಸಂಕ್ಷಿಪ್ತವಾಗಿ ವಿವರಣೆ ಕೊಡ್ತಿನಿ ಜೊತೆಗ್ಯಾರ ಹೆಸರು ಬೇಕಾಗಿಲ್ಲ )

ನಿಧಿ.......ಸುರೇಶ ಅಮ್ಮನ ಹೊಟ್ಟೆಯಲ್ಲಿದ್ದಾಗ ಅಮ್ಮನನ್ನು ಚೆಕ್ ಮಾಡ್ತಿದ್ದ ಡಾಕ್ಟರ್ ಮತ್ತವರ ಗಂಡ ಇಬ್ಬರದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ರು. ಅಮ್ಮನ ಹೊಟ್ಟೆಯಲ್ಲಿ ಅವಳಿ ಜವಳಿ ಮಕ್ಕಳು ಬೆಳೆಯುತ್ತಿರುವ ಬಗ್ಗೆ ಅವರಿಗೆ ಗೊತ್ತಿತ್ತು ಆದರವರು ಅಪ್ಪ ಅಮ್ಮನಿಂದ ಈ ವಿಷಯ ಮುಚ್ಚಿಟ್ಟಿದ್ದರಂತೆ.

ಸೌಭಾಗ್ಯ.......ಪಾಪಿಗಳು ಹಾಗ್ಯಾಕೆ ಮಾಡಿದ್ರಂತೆ ?

ನಿಧಿ.......ಆ ವೈದ್ಯ ದಂಪತಿಗಳಿಗೂ ಒಬ್ಬಳೇ ಮಗಳಿದ್ದುದಂತೆ ಅವಳಿಗೆ ಮದುವೆಯಾಗಿ ನಾಲ್ಕು ವರ್ಷವಾಗಿದ್ದರೂ ಆಕೆಯ ಗರ್ಭ ನಿಲ್ಲದೆ ಅಬಾರ್ಷನ್ ಆಗ್ತಿತ್ತಂತೆ. ಆ ವೈದ್ಯ ದಂಪತಿಗಳು ಅಪ್ಪ ಅಮ್ಮನ ಗುಣ ಮತ್ತು ನಡತೆಗಳನ್ನು ಪ್ರತೀ ಸಲ ಆಸ್ಪತ್ರೆಗೆ ಬೇಟಿ ನೀಡುತ್ತಿದ್ದಾಗ ಗಮನಿಸುತ್ತಿದ್ರಂತೆ. ಅಮ್ಮ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದರೆ ಅದರಲ್ಲೊಂದು ಮಗುವನ್ನು ತಮ್ಮ ಮಗಳಿಗಾಗಿ ಕದ್ದೊಯ್ಯುವುದು ಅವರ ಯೋಚೆನೆಯಾಗಿತ್ತು ಅಂತ ಅಮ್ಮನಿಗೆ ನರ್ಸ್ ಹೇಳಿದ್ರು. ಅದೇ ರೀತಿ ಅಮ್ಮ ಸುರೇಶನ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಗಂಡು—ಹೆಣ್ಣಿನಲ್ಲಿ ಹೆಣ್ಣು ಮಗುವನ್ನೇ ಆಯ್ದುಕೊಂಡ ವೈದ್ಯ ದಂಪತಿಗಳು ಅವತ್ತೇ ರಾತ್ರಿ ಮಗುವನ್ನು ಆಸ್ಪತ್ರೆಯಿಂದ ಕರೆದೊಯ್ದರಂತೆ. ಅಮ್ಮನಿಗೆ ಗಂಡು ಮಗು ಜನಿಸಿದೆ ಎಂದಷ್ಟೇ ಹೇಳಿ ಹೆಣ್ಣು ಮಗುವಿನ ಬಗ್ಗೆ ಸಂಪೂರ್ಣ ಮರೆಮಾಚಿ ಬಿಟ್ಟರಂತೆ.

ಪ್ರೀತಿ.......ಪಾಪಿ ಮುಂಡೇವು ಈಗೆಲ್ಲಿದ್ದಾರಂತೆ ನಿಧಿ ಅವರನ್ನು ತುಂಡು ತುಂಡಾಗಿ ಕತ್ತರಿಸಿದ್ರೂ ಪಾಪ ಬರಲ್ಲ.

ಹರೀಶ......ಪ್ರೀತಿ ಹಾಗೇನೂ ಮಾಡಬೇಕಿಲ್ಲ.

ರೇವಂತ್......ನೀವು ಸುಮ್ನಿರಿ ಭಾವ ಕೇಳ್ತಿದ್ರೆ ಕೋಪವುಕ್ತಿದೆ ಅವರನ್ನು ಸುಮ್ಮನೆ ಬಿಡಲೇಬಾರದು.

ವಿಕ್ರಂ......ಹರೀಶ ಇವತ್ತಿನ ತನಕ ನಮಗೀ ಸತ್ಯಗೊತ್ತಿರಲಿಲ್ವಲ್ಲ ಈಗ ಗೊತ್ತಾಗಿಯೂ ನಾವೇನೂ ಮಾಡದೆ ಸುಮ್ಮನಿರಬೇಕಾ.

ರವಿ.......ಅವರು ಹೊತ್ತೊಯ್ದಿರುವುದು ನಿನ್ನ ಮಗಳನ್ನ ನಮ್ಮ ಮನೆ ಮಗಳನ್ನ ಹರೀಶ ನಿನಗೆ ಕೋಪ ಬರ್ತಿಲ್ವಾ ?

ಹರೀಶ.......ಈ ವಿಷಯ ತಿಳಿದಾಗ ಇಬ್ಬರನ್ನೂ ಕತ್ತರಿಸಿ ಹಾಕ್ಬೇಕು ಅಂತ ಅನ್ನಿಸ್ತು.......ಎಂದು ಮಹಡಿ ಕಡೆಯಿಂದ ಮಗಳ ಜೊತೆ ಕೆಳಗೆ ಬಂದ ಮಡದಿಯನ್ನು ನೋಡಿ ಮಾತು ನಿಲ್ಲಿಸಿ ಅವಳನ್ನು ಕೈ ಹಿಡಿದು ತನ್ನ ಪಕ್ಕ ಕೂರಿಸಿಕೊಂಡನು.

ರಜನಿ.....ನೀತು......

ನೀತು......ಈಗ ಸಮಾಧಾನವಾಗಿದ್ದೀನಿ ಕಣೆ ಟೆನ್ಷನ್ ಏನಿಲ್ಲ ನನ್ನೀ ಕಂದನ ಆಲಿಂಗನವಷ್ಟೆ ಸಾಕು ನನ್ನೆಲ್ಲಾ ದುಃಖ ಕಣ್ಮರೆ ಆಗಿಹೋಗುತ್ತೆ. ದಯವಿಟ್ಟು ಕಳೆದು ಹೋಗಿರುವ ಮಗಳ ಬಗ್ಗೆ ಮನೆಯಲ್ಯಾರೂ ಮಾತಾಡ್ಬೇಡಿ ಆ ವಿಷಯವನ್ನೊಂದು ಕೆಟ್ಟ ಕನಸೆಂದು ಮರೆತುಬಿಡಿ.

ರೇವತಿ......ನಿನ್ನಿಂದ ಮರೆಯೋದಕ್ಕಾಗುತ್ತೇನಮ್ಮ ?

ನೀತು.......ಆಗುತ್ತೆ ಅಮ್ಮ ನನ್ನ ಸಾವಿನ ನಂತರ ಇವರಿಬ್ಬರನ್ನೂ ನಾನು ಹೊರಲಿಲ್ಲ ಹೆರಲಿಲ್ಲ ಆದರೆ ಇವರಿಗೆ ಸ್ವಲ್ಪ ನೋವಾದರೂ ನನ್ನಿಂದ ಸಹಿಸಿಕೊಳ್ಳಲಾಗಲ್ವಲ್ಲಮ್ಮ. ನಾನು ಹೆತ್ತ ಮಗಳನ್ಯಾರು ಕದ್ದೊಯ್ದಿದ್ದಾರೋ ಅವರು ನನಗಿಂತ ಪ್ರೀತಿಯಿಂದ ಅವಳನ್ನು ಸಾಕಿ ಸಲಹುತ್ತಿರಬಹುದಲ್ವ.

ರಜನಿ....ಅವರು ಪ್ರೀತಿ ಮಾಡ್ತಿದ್ರೆ ಒಳ್ಳೆಯದೇ ಆದರೆ ಅಕಸ್ಮಾತ್ ಅವರಿಂದ ನಮ್ಮನೇ ಮಗಳಿಗೆ ಪ್ರೀತಿ ಸಿಗುತ್ತಿಲ್ಲವಾದ್ರೆ ಆಗೇನು ಮಾಡ್ತೀಯ. ನಾವ್ಯಾವುದನ್ನೂ ಕಣ್ಣಿಂದ ನೋಡದೆ ತೀರ್ಮಾನ ಮಾಡುವುದಕ್ಕೆ ಹೋಗ್ಬಾರ್ದು ಕಣೆ.

ಸವಿತಾ.....ರಜನಿ ನೀನು ಹೇಳ್ತಿರೋದು ಸರಿ ಕಣೆ ನಿಧಿ ಡಾಕ್ಟರ್ ದಂಪತಿಗಳನ್ನು ಹಿಡಿದರೆ ನಮ್ಮನೆ ಮಗಳೆಲ್ಲಿದ್ದಾಳೆ ಅನ್ನೋದನ್ನ ತಿಳಿದುಕೊಳ್ಳಬಹುದಲ್ವ.

ಪ್ರೀತಿ.......ನಡಿ ನಿಧಿ ಈಗಲೇ ಅವರೆಲ್ಲಿದ್ದಾರೋ ಹೋಗೋಣ.

ನಿಧಿ.......ಈಗವರು ಈ ಊರಿನಲ್ಲಿಲ್ಲ ಅತ್ತೆ. ನನ್ನ ತಂಗಿಯನ್ನು ಆಸ್ಪತ್ರೆಯಿಂದ ಕದ್ದೊಯ್ದ ನಾಲ್ಕು ದಿನದೊಳಗೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬೇರೆ ಕಡೆ ಹೊರಟು ಹೋದ್ರಂತೆ.

ಅನುಷ......ಆ ನರ್ಸ್ ಹತ್ತಿರ ಕೇಳ್ಬೇಕಿತ್ತು ನಿಧಿ ಈಗವರಿಬ್ಬರೆಲ್ಲಿ ಅಂತ ? ಅವಳಿಗೆ ಗೊತ್ತಿರುತ್ತಲ್ವ.

ನಿಧಿ.....ಇಲ್ಲ ಆಂಟಿ ಸುರೇಶ ಹುಟ್ಟಿದ ಎರಡು ದಿನಗಳ ನಂತರ ಅವರು ನರ್ಸಿಗೆ ಕೊಡ್ತೀನೆಂದಿದ್ದ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇ ಕೊನೆಯಿಂತೆ ಆಮೇಲೆ ಅವರ ಮುಖವನ್ನೂ ನರ್ಸ್ ನೋಡಿಲ್ಲ ಅಂತ ಹೇಳಿದ್ರು ಅವರೆಲ್ಳಿದ್ದಾರೋ ಗೊತ್ತಿಲ್ವಂತೆ.
ಅಮ್ಮ ಕ್ಷಮಿಸಿ ಆಶ್ರಮದಿಂದ ನಿಮ್ಮನ್ನು ಬಲವಂತವಾಗಿ ಮನೆಗೆ ಹೊರಡಿ ಅಂತ.........

ನೀತು.......ನನ್ನ ಮಗಳು ನನ್ನ ಹೆಮ್ಮೆ ನನ್ನ ಗೌರವ ಕಣಮ್ಮ ನಿನ್ನ ಬಗ್ಗೆ ನಾನು ತಪ್ಪು ತಿಳಿತೀನಾ ಅದರ ಕಲ್ಪನೆಯೂ ನನಗೆ ಬರಲ್ಲ.
ನೀನು ನಿನ್ನನ್ನೇ ಧೂಷಿಸಿಕೊಳ್ಬೇಡ ಕಣಮ್ಮ ಆರಾಮವಾಗಿರು.

ನಿಧಿ ಅಮ್ಮನ ಪಾದ ಮುಟ್ಟಿ.....ನಿಮ್ಮ ಪಾದದ ಮೇಲಾಣೆ ಅಮ್ಮ ನನ್ನ ತಂಗಿ ಎಲ್ಲೇ ಇದ್ದರೂ ಸರಿ ಅವಳನ್ನು ಮನೆಗೆ ಕರೆತಂದು ತಾಯಿ ಮಡಿಲಿನಲ್ಲಿ ಅವಳಿಗೂ ಸ್ಥಾನ ಸಿಗುವಂತೆ ಮಾಡ್ತೀನಿ..... ತನ್ನ ಮನಸ್ಸಿನಲ್ಲೇ ಪ್ರಮಾಣ ಮಾಡಿದಳು.
ನೀತು ಅಲ್ಲಿ ನಿಲ್ಲದೆ ಪುನಃ ಮಹಡಿಗೆ ತೆರಳಿದರೆ ನಿಧಿ ಅಪ್ಪನಿಗೂ ಅಮ್ಮನ ಜೊತೆಗಿರುವಂತೇಳಿ ಕಳಿಸಿದಳು. ನೀತು ಹರೀಶ ಇಬ್ಬರು ಎಷ್ಟೇ ಪ್ರಯತ್ನಿಸಿದರೂ ಅವರ ಹೃದಯದಾಳದ ದುಃಖ ಇಬ್ಬರ ಮುಖದಲ್ಲೆದ್ದು ಕಾಣಿಸುತ್ತಿದ್ದು ಇದರಿಂದ ಮನೆಯವರೆಲ್ಲರೂ ದುಃಖಿತರಾಗಿ ಹೋಗಿದ್ದರು. ನಿಧಿ ಮನೆಯಿಂದಾಚೆ ಬಂದು ತನ್ನ ಕಾರನ್ನೇರಿದಾಗವಳ ಹಿಂದೆ ಸುಭಾಷ್..ಗಿರೀಶ ಮತ್ತು ನಿಕಿತಾ ಸಹ ಕಾರಿನಲ್ಲಿ ಕುಳಿತರು. ಕಾಲೋನಿಯಿಂದಾಚೆ ಬಂದಾಗ......

ನಿಕಿತಾ.......ಅಕ್ಕ ಮುಂದೇನು ಮಾಡ್ಕೇಕು ಯೋಚಿಸಿದ್ದೀರಾ ?

ನಿಧಿ.....ನನಗೇನೂ ಹೊಳೆಯುತ್ತಿಲ್ಲ ಕಣೆ ಆದರೆ ಅಮ್ಮ ಅಪ್ಪನ ಮಡಿಲಿಗೆ ನನ್ನ ತಂಗಿಯನ್ನು ಕರೆತರಲೇಬೇಕು.

ಸುಭಾಷ್......ಒಂದು ದಾರಿಯಿದೆ ನಿಧಿ.

ನಿಧಿ ಉತ್ಸಾಹದಿಂದ........ಏನಣ್ಣ ?

ಗಿರೀಶ....ಅಣ್ಣ ನಮ್ಮ ತಂಗಿ ನಮ್ಮ ಮನೆಗೆ ಬರ್ತಾಳಲ್ಲವಾ ?

ಸುಭಾಷ್......ಅದರ ಬಗ್ಗೆ ಈಗಲೇ ಏನೂ ಹೇಳಲಿಕ್ಕಾಗಲ್ಲ ಕಣೊ ಆದರೆ ಆ ಡಾಕ್ಟರ್ ದಂಪತಿಗಳೆಲ್ಲಿದ್ದಾರೆ ಅನ್ನೋದನ್ನ ನಾವು ತಿಳಿದುಕೊಳ್ಳುವ ಮಾರ್ಗವಿದೆ. ತಾಳು....

ವರ್ಧನ್ ಪರ್ಸನಲ್ ನಂಬರಿಗೆ ಫೋನ್ ಮಾಡಿದ ಸುಭಾಷ್ ಇಂದಿನ ಘಟನೆಗಳನ್ನೆಲ್ಲಾ ಹೇಳಿದಾಗ.......

ವರ್ಧನ್......ನಾನೀಗಲೇ ಬರ್ತೀನಿ ಸುಭಾಷ್ ಅಕ್ಕ ಹೇಗಿದ್ದಾರೆ ? ಭಾವನಿಗಂತೂ ಹೆಣ್ಣು ಮಕ್ಕಳೆಂದರೆ ವಿಶೇಷ ಪ್ರೀತಿ ಅವರಿಗಾದ ದುಃಖವನ್ನು ನಾವು ಊಹಿಸಲಿಕ್ಕೂ ಆಗಲ್ಲ.

ನಿಧಿ......ಚಿಕ್ಕಪ್ಪ ನೀವೀಗ ಬರೋದ್ಬೇಡ ಅಮ್ಮ ಮೌನವಾಗಿದ್ದಾರೆ ಪುನಃ ಅದೇ ವಿಷಯವನ್ನು ಕೆದಕುವ ಪ್ರಯತ್ನವಾಗುತ್ತೆ.

ವರ್ಧನ್......ಹಾಗಲ್ಲ ನಿಧಿ ನಾನು......

ಸುಭಾಷ್......ಅಂಕಲ್ ನಿಧಿ ಹೇಳ್ತಿರೋದು ಸರಿಯಾಗಿದೆ ಆದರೆ ನೀವಲ್ಲೇ ಇದ್ದರೂ ಈ ವಿಷಯದಲ್ಲಿ ಸಹಾಯ ಮಾಡಬಹುದು.

ವರ್ಧನ್.......ಆ ಡಾಕ್ಟರ್ ದಂಪತಿಗಳ ಹೆಸರನ್ನೇಳು ಸುಭಾಷ್ ದೇಶದ ಯಾವುದೇ ಮೂಲೆಯಲ್ಲಿದ್ದರೂ ಹುಡುಕಿಸ್ತೀನಿ.

ಸುಭಾಷ್......ಇದನ್ನೇ ನಾನೂ ಹೇಳ್ಬೇಕಂತಿದ್ದೆ ಅಂಕಲ್ ಈಗಲೇ ಕಳಿಸ್ತೀನಿ ಆದರೆ ನೀವು ಚಿಕ್ಕಮ್ಮನ ಜೊತೆ ಇದರ ಬಗ್ಗೆ ಯಾವ ಕಾರಣದಿಂದಲೂ ಮಾತನಾಡಲು ಹೋಗ್ಬೇಡಿ ಅವರಿನ್ನೂ ಜಾಸ್ತಿ ಡಿಸ್ಟರ್ಬ್ ಆಗ್ತಾರೆ.

ವರ್ಧನ್....ಆಯ್ತಪ್ಪ.

ಗಿರೀಶ.......ಮಾವ ಪ್ಲೀಸ್ ಅವರಿಬ್ಬರನ್ನು ಆದಷ್ಟೂ ಬೇಗನೇ ಹುಡುಕಿಸಿ ನಮ್ಮ ತಂಗಿ ಎಲ್ಲಿದ್ದಾಳೋ ? ಹೇಗಿದ್ದಾಳೋ ?..ಎಂದು ಹೇಳುತ್ತ ಅಳಲಾರಂಭಿಸಿದರೆ ಅವನ ಪಕ್ಕದಲ್ಲಿ ಕುಳಿತಿದ್ದ ನಿಕಿತಾ ಅವನನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದಳು.

ವರ್ಧನ್......ನೀನೇನೂ ಚಿಂತೆ ಮಾಡ್ಬೇಡ ಕಣೋ ನಿಮ್ಮಾವ ಅವರೆಲ್ಲೇ ಇದ್ದರೂ ಹುಡುಕಿಸ್ತಾನೆ ಅಳ್ಬೇಡ ಕಣಪ್ಪ.

ನಿಧಿ.......ಚಾಚೂ ಈ ವಿಷಯವೂ ಮನೆಯಲ್ಯಾರಿಗೂ ಗೊತ್ತೇ ಆಗ್ಬಾರ್ದು ಅಪ್ಪಿತಪ್ಪಿನೂ ಹೇಳ್ಬೇಡಿ.

ವರ್ಧನ್......ಆಯ್ತಮ್ಮ ಕಂದ....ಎಂದೇಳಿ ಫೋನಿಟ್ಟನು.

ಸುಭಾಷ್......ನಮ್ಮ ನಾಲ್ವರನ್ನು ಬಿಟ್ಟು ಮನೆಯಲ್ಯಾರಿಗೂ ಈ ವಿಷಯ ಗೊತ್ತಾಗ್ಬಾರ್ದು ಏನೇ ಮಾಡಿದರೂ ವಿಷಯ ನಮ್ಮ ನಾಲ್ಕು ಜನರ ಮಧ್ಯದಲ್ಲೇ ಇರ್ಬೇಕು.

ನಿಕಿತಾ......ಪ್ರಾಮಿಸ್ ಅಣ್ಣ.
* *
* *



.........continue
 
Last edited:

Samar2154

Well-Known Member
2,614
1,685
159
Continue.......


ಮೇ 24 ಬೆಳಿಗ್ಗೆ......

ಆಶ್ರಮದ ಘಟನೆ ನಡೆದು ಮೂರು ದಿನಗಳಾಗಿದ್ದು ನೀತು ಎಲ್ಲರ ಜೊತೆ ಸಾಮಾನ್ಯವಾಗಿರಲು ಪ್ರಯತ್ನಿಸುತ್ತಿದ್ದರೂ ಅವಳಿಗದು ತುಂಬ ಕಷ್ಟದಾಯಕವಾಗಿತ್ತು. ನೀತು ಈಗಂತೂ ನಗುವುದನ್ನೂ ಮರೆತಿದ್ದು ಮನೆಯ ಆರು ಚಿಲ್ಟಾರಿಗಳ ಜೊತೆಗೇ ತನ್ನ ಹೆಚ್ಚಿನ ಸಮಯ ಕಳೆಯುತ್ತ ತನ್ನೊಳಗಿನ ದುಃಖವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಳು. ಮಡದಿ ದುಃಖದಲ್ಲಿರೆ ಅದನ್ನೋಡುತ್ತ ಹರೀಶನೂ ನೊಂದುಕೊಳ್ಳುತ್ತಿದ್ದು ಹೆಂಡತಿಗಾಗಿ ತಾನೇನನ್ನೂ ಮಾಡಲಾಗುತ್ತಿಲ್ವಲ್ಲ ಎಂದು ಕೊರಗುತ್ತಿದ್ದನು. ವೀರ್ ಮತ್ತು ಸುಮೇರ್ ಸಿಂಗ್ ಮಾತೆಯ ಮಗಳನ್ನು ಹುಡುಕುವುದಕ್ಕಾಗಿ ತಾವು ಪ್ರಯತ್ನಿಸುತ್ತೆವೆಂದರೂ ಹರೀಶ ಅವರನ್ನು ಸಧ್ಯಕ್ಕೇನೂ ಬೇಡವೆಂದೇಳಿ ತಡೆದಿದ್ದನು. ಅದೇ ದಿನ ಮಧ್ಯಾಹ್ನ ಸುಭಾಷಿಗೆ ಫೋನ್ ಬಂದಿದ್ದು......

ವರ್ಧನ್.....ಡಾಕ್ಟರ್ ದಂಪತಿಗಳ ವಿಳಾಸ ಪತ್ತೆಯಾಯ್ತು ಕಣೊ ಅವರೀಗ ಕೊಲ್ಕತ್ತಾದಲ್ಲಿದ್ದಾರೆ.

ಸುಭಾಷ್......ಅವರೇ ಅನ್ನೋದು ಕನ್ಫರ್ಮ್ ತಾನೇ ಅಂಕಲ್.

ವರ್ಧನ್.....100% ಅವರಿಬ್ಬರ ಹೆಸರು ಕೊಲ್ಕತ್ತಾದ ಮೆಡಿಕಲ್ ಅಸೋಸಿಯೇಷನ್ನಿನಲ್ಲಿ ರಿಜಿಸ್ಟರಾಗಿದೆ. ಅವರಲ್ಲಿ ತಮ್ಮ ಹೆಸರು ನೊಂದಣಿ ಮಾಡಿಸುವಾಗ ಕಾಮಾಕ್ಷಿಪುರದಲ್ಲಿ ಕೆಲಸ ಮಾಡಿದ್ದ ಬಗ್ಗೆ ಸರ್ವೀಸ್ ಸರ್ಟಿಫಿಕೇಟ್ ಸಹ ಕೊಟ್ಟಿದ್ದಾರೆ. ಅವರಿಬ್ಬರನ್ನು ಅಲ್ಲಿಂದಲೇ ಅರೆಸ್ಟ್ ಮಾಡಿಸಿ ಕರೆತರಲಾ ?

ಸುಭಾಷ್......ಒಳ್ಳೆ ಸುದ್ದಿ ಕೊಟ್ರಿ ಅಂಕಲ್. ತಾಳಿ ಅಂಕಲ್ ನಿಧಿ ಜೊತೆ ಮಾತಾಡಿ ಮುಂದೇನೆಂದು ಹೇಳ್ತೀನಿ ವಿಷಯ ಮೊದಲು ನಿಧಿಗೆ ತಿಳಿಬೇಕು. ನಿಮಗೆ ಆಮೇಲೆ ಫೋನ್ ಮಾಡಿ ಹೇಳ್ತೀನಿ ಡಿಸ್ಟರ್ಬ್ ಆಗಲ್ಲ ತಾನೇ.

ವರ್ಧನ್.......ನಾನು ದೇಶಸೇವೆಗೆ ಸಮರ್ಪಿತನಾಗಿದ್ದರೂ ನನ್ನ ಪರಿವಾರದ ಯೋಗಕ್ಷೇಮವೂ ನನ್ನ ಹೊಣೆಗಾರಿಕೆಯಲ್ವೆನೊ ಯಾವಾಗಲಾದ್ರೂ ಫೋನ್ ಮಾಡು ಕಾಯ್ತಿರ್ತೀನಿ.
* *
* *
ಸುಭಾಷ್...ನಿಧಿ..ನಿಕಿತಾ ಮತ್ತು ಗಿರೀಶ ಕಾಲೋನಿಯ ಪಾರ್ಕ್ ಹತ್ತಿರ ಸೇರಿದ್ದು ಇದರ ಬಗ್ಗೆ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಯಿತು.

ನಿಕಿತಾ......ಅಕ್ಕ ನಾನೂ ನಿಮ್ಜೊತೆ ಬರ್ತೀನಕ್ಕ.

ನಿಧಿ......ನಿನಗಿನ್ನೂ ಎರಡು ಪೇಪರ್ ಬಾಕಿಯಿದೆ ನಿಕ್ಕಿ ಅದರ ಕಡೆ ಗಮನಕೊಡು ಇದನ್ನೆಲ್ಲ ನಾವು ನೋಡಿಕೊಳ್ತೀವಿ.

ನಿಕಿತಾ.......ಆದರೆ ಅಕ್ಕ.....

ನಿಧಿ.......ಹೇಳಿದ್ದಷ್ಟೇ ಮಾಡು ನನ್ನ ತಂಗಿ ಮೊದಲನೇ ವರ್ಷದ ಮೆಡಿಕಲ್ ಏಕ್ಸಾಮಿನಲ್ಲಿ 90%ಗಿಂತ ಜಾಸ್ತಿ ತೆಗಿಬೇಕಷ್ಟೆ.

ನಿಕಿತಾ ಬೇಸರದಿಂದಲೇ.......ಒಕೆ ಅಕ್ಕ ಆದರೆ ಪ್ರತಿದಿನ ನನಗೆ ಫೋನ್ ಮಾಡಿ ನೀವೆಲ್ಲವನ್ನೂ ಹೇಳ್ತೀನಂತ ಪ್ರಾಮಿಸ್ ಮಾಡಿ ಇಲ್ಲಾಂದ್ರೆ ನಾನು ಏಕ್ಸಾಮಿಗೇ ಹೋಗಲ್ಲ.

ನಿಧಿ.......ಆಯ್ತಮ್ಮ ದಿನಾ ಬೆಳಿಗ್ಗೆ ರಾತ್ರಿ ಎರಡೂ ಟೈಂ ನಿನಗೆಲ್ಲಾ ವಿಷಯ ಮುಟ್ಟಿಸ್ತೀನಿ ನೀನು ಮಾತ್ರ ಓದುವುದರ ಕಡೆಗೆ ನಿನ್ನ ಗಮನ ಇಟ್ಟಿರ್ಬೇಕು ತಿಳೀತಾ.

ನಿಕಿತಾ ತಲೆಯಾಡಿಸಿದರೆ ಚಿಕ್ಕಪ್ಪನಿಗೆ ಫೋನ್ ಮಾಡಿದ ನಿಧಿ..... ಚಾಚೂ ನೀವವರನ್ನು ಅರೆಸ್ಟ್ ಮಾಡಿಸ್ಬೇಡಿ ನಾವೇ ಹೋಗ್ತೀವಿ ಆದರೆ ನೀವೊಂದು ಕೆಲಸ ಮಾಡಬೇಕಷ್ಟೆ.

ವರ್ಧನ್......ಏನಮ್ಮ ಕಂದ ?

ನಿಧಿ.....ಇವತ್ತು ರಾತ್ರಿ ಅಪ್ಪ ಅಮ್ಮನಿಗೆ ಫೋನ್ ಮಾಡಿ ಏನೋ ಕಾರಣ ನೀಡಿ ನನ್ನ...ಸುಭಾಷ್ ಅಣ್ಣನ್ನ ಜೊತೆಗೆ ಗಿರೀಶನನ್ನು ದೆಹಲಿಗೆ ಕಳಿಸುವಂತೆ ಹೇಳ್ಬೇಕು.

ವರ್ಧನ್.......ಅಕ್ಕ ಯಾಕೆ ಅಂತ ಕೇಳಿದ್ರೆ ?

ನಿಧಿ......ಅದನ್ನ ನೀವು ಯೋಚಿಸಿ ಚಾಚೂ ಎಲ್ಲವನ್ನೂ ನಾವೇ ಹೇಳಿಕೊಡ್ಬೇಕಾ ಇಲ್ಲಿ ನಮ್ಮ ತಲೆಯೇ ಓಡ್ತಿಲ್ವಲ್ಲ. ಏನಾದ್ರೂ ಕಾರಣ ಹೇಳಿ ಆದರೆ ನಾವು ದೆಹಲಿಯಲ್ಲಿ 15 ದಿನಗಳಿರೋದಕ್ಕೆ ನೀವು ಅಪ್ಪ ಅಮ್ಮನನ್ನು ಒಪ್ಪಿಸ್ಬೇಕು ನೆನಪಿರಲಿ.

ವರ್ಧನ್........ಆಯ್ತಮ್ಮ ಒಪ್ಪಿಸ್ತೀನಿ ನೀವು ನೇರವಾಗಿ ದೆಹಲಿಗೆ ಬರ್ತೀರ ತಾನೇ ?

ಸುಭಾಷ್.....ಇಲ್ಲ ಅಂಕಲ್ ಇಲ್ಲಿಂದ ಕೊಲ್ಕತ್ತಾಗೇ ಹೋಗೊದು ಅಲ್ಲೇನು ತಿಳಿಯುತ್ತೋ ಅದರನ್ವಯ ಮುಂದಿನ ನಡೆಯ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳೋಣ.

ವರ್ಧನ್......ಆಯ್ತಪ್ಪ ಸುಭಾಷ್ ರಾತ್ರಿ ಫೋನ್ ಮಾಡ್ತೀನಿ.

ನಿಕಿತಾ......ಅಕ್ಕ ಇನ್ನೊಂಬತ್ತು ದಿನದಲ್ಲಿ ನನ್ನ ಏಕ್ಸಾಮೆಲ್ಲವೂ ಮುಗಿಯುತ್ತೆ ಆಗಿನ್ನೂ ನೀವು ಬಂದಿರದಿದ್ರೆ ನಾನು ನೀವಿರುವ ಜಾಗಕ್ಕೆ ಬರ್ತೀನಿ ಅಷ್ಟೇ ಮುಂದೇನೂ ಪ್ರವಚನ ಕೇಳೋಕ್ಕೆ ನಾನಂತೂ ಸಿದ್ದಳಿಲ್ಲ.

ನಿಧಿ.......ಆಯ್ತಮ್ಮ ತಾಯಿ ನಿನ್ನ ಏಕ್ಸಾಂ ಮುಗಿದ್ಮೇಲೂ ನಾವು ಹಿಂದಿರುಗಿ ಬಂದಿರದಿದ್ರೆ ನಾವಿರುವಲ್ಲಿಗೆ ನಿನ್ನೂ ಕರೆಸಿಕೊಳ್ತೀನಿ ಆಯ್ತಾ ಈಗ ಸಂತೋಷ ತಾನೇ.

ನಿಕಿತಾ.....ಸಂತೋಷವೇನೂ ಇಲ್ಲ ನಮ್ಮ ತಂಗಿ ನಮ್ಮ ಮನೆಗೆ ಬಂದಾಗಲೇ ನಿಜವಾದ ಸಂತೋಷವಾಗೋದು.

ಗಿರೀಶ.....ನಿಕಿತಾ ನಿನಗೆ ಪಾಸ್ಪೋರ್ಟ್ ಇದೆಯಾ ?

ನಿಕಿತಾ.....ಹೂಂ ವರ್ಧನ್ ಅಂಕಲ್ ನಮ್ಮೆಲ್ಲರದ್ದೂ ಮಾಡಿಸಿದ ಸಮಯದಲ್ಲೇ ನಂದೂ ಪಾಸ್ಪೊರ್ಟ್ ಬಂತಲ್ಲ.

ಸುಭಾಷ್......ಈಗ ಪಾಸ್ಟೊರ್ಟ್ ಯಾಕೋ ?

ಗಿರೀಶ.......ಏನೋ ಗೊತ್ತಿಲ್ಲ ಅಣ್ಣ ಆದರೆ ನನ್ನ ಮನಸ್ಸು ಹೇಳ್ತಿದೆ ನಮ್ಮ ತಂಗಿ ಭಾರತದಲ್ಲಿಲ್ಲ ಅಂತ.

ಮೂವರೂ ಅವನನ್ನೇ ಧಿಟ್ಟಿಸಿ ನೋಡಿದರೆ ಗಿರೀಶ......ಅಕ್ಕ ನನಗೆ ಭವಿಷ್ಯದ ಕುರಿತೇನೂ ಕಲ್ಪನೆ ಬರಲ್ಲ ನನಗಾ ರೀತಿ ಶಕ್ತಿ ಕೂಡ ಇಲ್ಲ. ಆದರೂ ಕೆಲವೊಮ್ಮೆ ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ಕೆಲವು ನಿರ್ಧಿಷ್ಟವಾದ ಆಲೋಚನೆ ಬರುತ್ತೆ ಅದೆಂದೆಗೂ ಸತ್ಯವೇ ಆಗಿರುತ್ತೆ. ಬೆಳಿಗ್ಗೆಯಿಂದಲೂ ನಮ್ಮ ತಂಗಿ ಭಾರತ ದೇಶದಲ್ಲಿಲ್ಲ ಅಂತ ಅನ್ನಿಸುವುದಕ್ಕೆ ಶುರುವಾಗಿದೆ ಯಾಕೆ ಅಂತ ಗೊತ್ತಿಲ್ಲ.

ಸುಭಾಷ್......ಇವನು ಹೇಳೋದು ಕೇಳಿದ್ರೆ ನಾವು ನಮ್ಜೊತೆ ನಮ್ಮ ಪಾಸ್ಪೋರ್ಟ್ ತೆಗೆದುಕೊಂಡು ಹೋಗೋದು ಉತ್ತಮ ಅನ್ಸುತ್ತೆ. ನಿಕ್ಕಿ ನೀನೂ ನಿನ್ನ ಪಾಸ್ಪೋರ್ಟ್ ಕೊಟ್ಟಿರಮ್ಮ.

ನಿಕಿತಾ......ಅಣ್ಣ ನನ್ನ ಪಾಸ್ಪೊರ್ಟಾ ಅಕ್ಕನ ಲಾಕರಿನಲ್ಲೇ ಇದೆ.

ಸುಭಾಷ್......ನಿಕಿತಾಳದನ್ನೂ ತೆಗೆದುಕೊಂಡಿರಮ್ಮ ನಡೀರಿ ರಾತ್ರಿ ವರ್ಧನ್ ಅಂಕಲ್ ಫೋನ್ ಮಾಡಿದ್ಮೇಲೆ ಚಿಕ್ಕಮ್ಮ ಏನಂತಾರೋ ನೋಡೋಣ.
* *
* *
ಸಂಜೆಗಿಂತಲೂ ಮುಂಚೆ ಅಕ್ಕನಿಗೆ ಫೋನ್ ಮಾಡಿದ ವರ್ಧನ್ ಮೂವರನ್ನೂ ದೆಹಲಿಗೆ ಕಳಿಸಿಕೊಡುವಂತೆ ಏನೋ ಕಾರಣ ನೀಡಿ ಒಪ್ಪಿಸಿ ಎಲ್ಲರೊಟ್ಟಿಗೂ ಮಾತಾಡಿದನು. ಮೂವರನ್ನೂ ಕರೆದು...

ನೀತು.....ನಿಮ್ಮೂವರನ್ನು ವರ್ಧನ್ ದೆಹಲಿಗೆ ಕಳಿಸುವಂತೇಳಿ ಫೋನ್ ಮಾಡಿದ್ದ.

ನಿಧಿ ನಾಟಕವಾಡುತ್ತ......ಯಾಕಮ್ಮ ? ನಿಮ್ಮನೀ ಪರಿಸ್ಥಿತಿಯಲ್ಲಿ ಬಿಟ್ಟು ನಾನೆಲ್ಲಿಗೂ ಹೋಗಲ್ಲ.

ನೀತು......ನನಗೆನೂ ಆಗಿಲ್ಲ ಕಣಮ್ಮ ಅದೇನು ತುಂಬ ಮುಖ್ಯ ವಿಷಯವಿದೆ ಕಳಿಸಿ ಅಂತಿದ್ದ ನೀವಲ್ಲೇ ಎರಡ್ಮೂರು ವಾರಗಳು ಇರಬೇಕಾಗಿ ಬರಬಹುದು.

ನಿಧಿ.....ಎರಡ್ಮೂರು ವಾರಗಳಾ ? ನೋ ಛಾನ್ಸ್ ನಾ ಹೋಗಲ್ಲ ನಿಮಗಿಂತ ಮುಖ್ಯವಾದದ್ದು ನನಗೇನೂ ಇಲ್ಲ ಕಣಮ್ಮ.

ಹರೀಶ.....ನೋಡಮ್ಮ ಕಂದ ಏನು ನಡೆಯಬೇಕೆಂದು ನಮ್ಮ ಹಣೆಯಲ್ಲಿ ದೇವರು ಬರೆದಿರುತ್ತಾನೋ ಅದನ್ಯಾರಿಂದಲೂ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ನೀನೀಗ ಹೋಗಲ್ಲ ಅಂದ್ರೆ ನಿನ್ನ ಚಿಕ್ಕಪ್ಪನಿಗೂ ಬೇಸರವಾಗುತ್ತೆ ಜೊತೆಗೆ ನನಗೂ ಈಗೇಳು ನೀನು ಅಣ್ಣ ತಮ್ಮನ ಜೊತೆ ಹೋಗ್ತೀಯೋ ಇಲ್ವೋ ?

ನಿಧಿ.......ಹೇಗಾದ್ರೂ ಸರಿ ಏಮೋಷನಲ್ ಬ್ಲಾಕ್ಮೇಲ್ ಮಾಡಿ ನನ್ನ ಒಪ್ಪಿಸಿಬಿಡ್ತೀರಾ. ಸರಿ ಅಮ್ಮ ಹೋಗಿ ಬರ್ತೀವಿ ಯಾವಾಗ ಹೊರಡಬೇಕಂತೆ ?

ಹರೀಶ......ನಾಳೆ ಬೆಳಿಗ್ಗೆ ರಾಣಾ...ಅಜಯ್ ಬರ್ತಾರೆ ನೀವು ಒಂಬತ್ತು ಘಂಟೆಗೆ ರೆಡಿಯಾಗಿ ಫುಡ್ ಯೂನಿಟ್ಟಿನ ಹತ್ತಿರವೇ ಹೋಗಿರಿ ಅವರು ಬಂದಾಗ ಅಲ್ಲಿಂದಲೇ ಹೊರಡುವಿರಂತೆ.

ಗಿರೀಶ.......ರಾಣಾ ಅಂಕಲ್ ಮನೆಗೆ ಬರಲ್ವೇನಪ್ಪ ?

ನೀತು......ಇಲ್ಲ ಕಣೋ ಸಮಯ ವ್ಯರ್ಥವಾಗುತ್ತೆ ನೀವೆಲ್ಲರೂ ನಾಳೆ ಮಧ್ಯಾಹ್ನಯೊಳಗೆ ದೆಹಲಿಯಲ್ಲಿರಬೇಕಂತೆ ಹೋಗಿ ಬಟ್ಟೆ ಪ್ಯಾಕ್ ಮಾಡ್ಕೊಳ್ಳಿ ನಾನೂ ಬಂದು ಸಹಾಯ ಮಾಡ್ತೀನಿ.

ನಿಧಿ.......ಅಮ್ಮ ನೀವು ಆರಾಮವಾಗಿ ಕುಳಿತಿರಿ.....

ನೀತು......ಮುಖವೇ ನೋಡಿಲ್ಲದ ಮಗಳನ್ನು ನೆನೆಯುತ್ತ ನನ್ನ ಮಕ್ಕಳನ್ನು ಕಡೆಗಣಿಸ್ತೀನಿ ಅಂದ್ಕೊಂಡ್ಯೇನಮ್ಮ ಸುಮ್ಮನೆ ನಡಿ.
* *
* *
ಅದೇ ದಿನ ಸಂಜೆ ನಯನ—ಸುರೇಶರ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯ ರಿಸಲ್ಟ್ ನೆಟ್ಟಲ್ಲಿ ಅನೌನ್ಸಾಗಿದ್ದು ಇಬ್ಬರೂ ತುಂಬಾನೇ ಒಳ್ಳೆಯ ನಂಬರ್ ಪಡೆದು ತೇರ್ಗಡೆಯಾಗಿದ್ದರು. ಸುರೇಶ 98.5 ಮತ್ತು ನಯನ 98.1 ಪರ್ಸೆಂಟೇಜ್ ತೆಗೆದುಕೊಂಡು ತೇರ್ಗಡೆ ಹೊಂದಿದ್ದರೂ ಮನೆಯಲ್ಯಾರ ಮುಖದಲ್ಲೂ ಸಂತಸವಿರಲಿಲ್ಲ.

ಹರೀಶ......ರೇವಂತ್ ಹೋಗಿ ಚಾಕ್ಲೇಟ್ ಕೇಕ್ ತಗೊಂಡ್ಬಾರಪ್ಪ ನಯನಾಳಿಗೆ ಅದೇ ಇಷ್ಟˌ.

ನಯನ.......ಬೇಡ ಮಾವ ಸೆಲೆಬ್ರೇಷನ್ ಮಾಡುವ ಮನಸ್ಸಿಲ್ಲ.

ನೀತು....ನಿನಗಿಲ್ಲದಿದ್ದರೇನಮ್ಮ ಪುಟ್ಟಿ ನನಗಿದೆ ರೇವಂತ್ ಅಣ್ಣ ದೊಡ್ಡ ಕೇಕ್ ತನ್ನಿ ಗಿರೀಶ ನೀನೂ ಮಾವನ ಜೊತೆ ಹೋಗು.

ನೀತು—ಹರೀಶ ತಮ್ಮ ಮನಸ್ಸಿನ ನೋವನ್ನು ಅದುಮಿಡಿದು ಮನೆ ಮಕ್ಕಳ ಸಾಧನೆಗೆ ಶುಭ ಹಾರೈಸಿ ಗ್ರಾಂಡಾಗಿ ಸೆಲಬ್ರೇಟ್ ಮಾಡಿಸಿದರು. ಚಿಲ್ಟಾರಿಗಳೆಲ್ಲರೂ ಕೇಕ್ ತಿಂದು ಕುಣಿದಾಡುತ್ತ ಖುಷಿಯಾಗಿರುವುದನ್ನು ನೋಡಿ ನಾಲ್ಕೈದು ದಿನಗಳ ನಂತರ ನೀತು ತುಟಿಗಳಲ್ಲೂ ಮುಗುಳ್ನಗೆ ಮೂಡಿತ್ತು.
* *
* *
ಮುಂಜಾನೆ ರೆಡಿಯಾಗುತ್ತಿದ್ದ ಗಂಡನ ಬಳಿ ಬಂದು.....

ಪಾವನ......ರೀ ಮಾವ ಯಾಕೆ ನಿಮ್ಮನ್ನೆಲ್ಲ ಇದ್ದಕ್ಕಿದ್ದಂತೆ ದೆಹಲಿಗೆ ಬರಲಿಕ್ಕೇಳಿದ್ದು ?

ಸುಭಾಷ್.......ನಿಮ್ಮಾವ ನನಗೇನಾದ್ರೂ ಫೋನ್ ಮಾಡಿದ್ರಾ ಚಿಕ್ಕಮ್ಮನಿಗೆ ಫೋನ್ ಮಾಡಿ ಕಳಿಸಿ ಅಂತ ಹೇಳಿದ್ದು ನಂಗೇನೇ ಗೊತ್ತು ಅವರು ನಮ್ಮನ್ಯಾತಕ್ಕೆ ಕರೆದಿದ್ದಾರೆ ಅಂತ.

ಪಾವನ......ರೀ ಅಲ್ಲಿಗೋದ್ಮೆಲೆ ಫೋನ್ ಮಾಡಿ ಹೇಳಿ (ಗಿರೀಶ ಬ್ಯಾಗಿನೊಂದಿಗೆ ಬಂದಿದ್ದನ್ನು ನೋಡಿ) ಗಿರೀಶ ನಿಮ್ಮಣ್ಣನಂತೂ ನನಗೇನೂ ಹೇಳಲ್ಲ ನೀನು ಮರೆಯದೆ ಫೋನ್ ಮಾಡೇಳಪ್ಪ.

ಗಿರೀಶ......ಅತ್ತಿಗೆ ನಾನು ಫೋನ್ ಮಾಡಿ ಏನೇಳ್ಬೇಕು ಅಂತ ಮೊದಲು ಹೇಳಿ.

ಸುಭಾಷ್....ಲೇ ಪಾಪ ಅವನಿಗೆ ಪೂರ್ತಿ ವಿಷಯ ಹೇಳದೆಯೇ ಫೋನ್ ಮಾಡೇಳು ಅಂದ್ರೇನು ಗೊತ್ತಾಗುತ್ತೆ ಈಗ ನಮ್ಮದೂ ಇದೇ ಪರಿಸ್ಥಿತಿ ಅಂಕಲ್ ಯಾಕೆ ಕರೆದಿದ್ದಾರೋ ಗೊತ್ತಿಲ್ಲ.

ಗಿರೀಶ.......ಇದಾ ವಿಷಯ ಡೋಂಟ್ವರಿ ಅತ್ತಿಗೆ ನಿಮಗೆ ನಾನೇ ಫೋನ್ ಮಾಡಿ ಮಾವ ಕರೂದಿದ್ಯಾಕೆಂದು ತಿಳಿಸ್ತೀನಿ.

ಪಾವನ.......ಇದು ನೋಡಿ ಮುದ್ದಿನ ಮೈದುನನ ಲಕ್ಷಣ ನೀವೂ ಇದ್ದೀರ ದಂಡಪಿಂಡ......ಎಂದೇಳಿ ಗಿರೀಶನನ್ನು ತಬ್ಬಿಕೊಂಡು ಅಕ್ಕ ಅಣ್ಣನ ಜೊತೆಗೇ ಇರುವಂತೆ ತಿಳಿಹೇಳಿದಳು.

ಸುಭಾಷ್ ಜೊತೆ ನಿಧಿ...ಗಿರೀಶ ರೆಡಿಯಾಗಿ ಬಂದಾಗ ಅವರನ್ನು ಬೀಳ್ಕೊಡಲು ನೀತು ಹೊರಟಿದ್ದನ್ನು ನೋಡಿ ಹರೀಶ ಹೆಂಡತಿಯ ಜೊತೆ ತಾನೂ ಹೊರಟನು. ಮನೆಯ ಹಿರಿಯರ ಆಶೀರ್ವಾದ ಪಡೆದು ಪ್ರೀತಿಯನ್ನು ತಬ್ಬಿಕೊಳ್ಳುತ್ತ.........

ನಿಧಿ......ಅತ್ತೆ ಪಾರ್ಟ್ನರ್ wish me good luck ನಾನು ನಿಮಗೆ ಮಾತ್ರ ಫೋನ್ ಮಾಡಿ ವಿಷಯವೇನೆಂದು ಹೇಳ್ತೀನಿ ಅಮ್ಮನನ್ನು ಚೆನ್ನಾಗಿ ನೋಡ್ಕೊಳ್ಳಿ.....ಎಂದು ಪಿಸುಗುಟ್ಟಿದಳು.

ನಿಧಿಯ ಮಾತಿನಿಂದ ಪ್ರೀತಿಗೆ ಒಂದು ವಿಷಯವಂತೂ ಚೆನ್ನಾಗಿ ಅರ್ಥವಾಗಿತ್ತು ಈ ಮೂವರನ್ನು ವರ್ಧನ್ ಬರಲಿಕ್ಕೇಳಿಲ್ಲ ಇವರೇ ಯಾವುದೋ ಉದ್ದೇಶದೊಂದಿಗೆ ಹೋಗ್ತಿದ್ದಾರೆ ಅನ್ನೋದವಳಿಗೆ ಸ್ಪಷ್ಟವಾಗಿದ್ದರೂ ನಿಧಿಯನ್ನು ಪ್ರಶ್ನಿಸದೆ ಅವಳ ಹಣೆಗೆ ಮುತ್ತಿಟ್ಟು ಬೀಳ್ಕೊಟ್ಟಳು. ಚಿಲ್ಟಾರಿಗಳೂ ಅಕ್ಕ..ಅಣ್ಣಂದಿರಿಗೆ ಟಾಟಾ ಮಾಡಿ ನಿಶಾಳ ಹಿಂದೆ ಪಕ್ಕದ ಸೈಟಿನತ್ತ ಓಡಿದರೆ ಅವರನ್ನು ಕಾಯಲು ಸುರೇಶ ಮತ್ತಿತರ ಮಕ್ಕಳೂ ಅತ್ತಲೇ ತೆರಳಿದರು. ಸಮಯಕ್ಕೆ ಸರಿಯಾಗಿ ರಾಣಾ ಮತ್ತು ಅಜಯ್ ಬಂದಿದ್ದು ನೀತು ಮುಂದೆ ಕೈಮುಗಿದು ನಿಲ್ಲುತ್ತ.......

ರಾಣಾ.......ಮಾತೆ ನಿಮ್ಮ ಮಗಳ ಬಗ್ಗೆ ತಿಳಿಯಿತು ಆದರೆ ಸರ್ ಸಧ್ಯಕ್ಕೇನೂ ಮಾಡ್ಬೇಡಿ ಅಂತ ಹೇಳಿದ್ರು ನೀವಾದರೂ.......

ನೀತು ನಿಟ್ಟುಸಿರು ಬಿಡುತ್ತ.......ಬಿಡು ರಾಣಾ ಹದಿನಾರು ವರ್ಷ ನನಗೀ ಸತ್ಯವೇ ಗೊತ್ತಿರಲಿಲ್ಲ. ನಾನು ಮಗಳೊಬ್ಬಳಿಗೂ ಜನ್ಮ ನೀಡಿದ್ದೆ ಎನ್ನುವುದು ನನಗೇ ತಿಳಿದಿರಲಿಲ್ಲ ಎಂದರೆ ನನಗಿಂತಲೂ ದುರಾದೃಷ್ಟ ತಾಯಿ ಇನ್ನೊಬ್ಬಳಿರಲು ಸಾಧ್ಯವಾ ?

ರಾಣಾ......ಇಲ್ಲ ಮಾತೆ ನೀವು ತಾಯಿಯ ಸ್ಥಾನದಲ್ಲಿ ಅತ್ಯಂತ ಮೇಲ್ಪಂಕ್ತಿಯಲ್ಲಿ ನಿಲ್ತೀರ ಅದಕ್ಕೆ ಸಾಕ್ಷಿಯೇ ಯುವರಾಣಿಯರ ಜೊತೆ ಮನೆಯ ಮಕ್ಕಳು. ನೀವವರಿಗೆ ನೀಡುವ ಪ್ರೀತಿಯನ್ನು ಬೇರಾರಿಂದಲೂ ನೀಡಲು ಸಾಧ್ಯವಿಲ್ಲ.

ಹರೀಶ.......ರಾಣಾ ಈಗ ಹೊರಡಿ ಟೈಮಾಗ್ತಿದೆ ಅಲ್ಲಿ ವರ್ಧನ್ ನಿಮಗೋಸ್ಕರ ಕಾಯ್ತಿರ್ತಾನೆ ಇದರ ಬಗ್ಗೆ ಮುಂದೆ ಯೋಚನೆ ಮಾಡೋಣ.

ನೀತು ಮೂವರು ಮಕ್ಕಳನ್ನು ತಬ್ಬಿಕೊಂಡು ಬೀಳ್ಕೊಟ್ಟು ಕಳಿಸಿ ಗಂಡನ ಜೊತೆ ಕಾರ್ ಹಿಂದಿನ ಸೀಟಲ್ಲ ಕುಳಿತು ಕಣ್ಣಿಂದ ಕಂಬನಿ ಜಿನುಗಿಸಿದರೆ ಹರೀಶನ ಜೊತೆ ಡ್ರೈವಿಂಗ್ ಮಾಡುತ್ತಿದ್ದ ಸುಮೇರ್ ಕಣ್ಣುಗಳು ಒದ್ದೆಯಾಗಿದ್ದವು.

ಹೆಲಿಕಾಪ್ಟರ್ ಮೇಲೇರಿದಾಗ.......

ನಿಧಿ........ರಾಣಾ ಅಮ್ಮನ ಮುಂದೇನೂ ಹೇಳಲಿಲ್ಲ ಥಾಂಕ್ಸ್.

ರಾಣಾ......ನಾವೀಗ ನೇರವಾಗಿ ಕೊಲ್ಕತ್ತಾಗೆ ಹೋಗ್ತಿರೋದು ಯುವರಾಣಿ ವರ್ಧನ್ ಸರ್ ಡಾಕ್ಟರ್ ದಂಪತಿಗಳ ಫೋಟೋ ನನಗೆ ಕಳಿಸಿದ್ದಾರೆ. ಅವರನ್ನು ಅಲ್ಲಿಯೇ ವಿಚಾರಿಸೋದಾ ಅಥವ ನಮ್ಜೊತೆ ರಾಜಸ್ಥಾನಕ್ಕೆ ಕರೆದೊಯ್ಯೋದಾ ?

ಸುಭಾಷ್......ಅವರ ಮನೆ ವಿಳಾಸ ಗೊತ್ತಾಯ್ತಾ ?

ಅಜಯ್......ಅವರಿಬ್ಬರೂ ವೃತ್ತಿಯಲ್ಲಿರುವ ಆಸ್ಪತ್ರೆಯ ಜೊತೆ ಮನೆಯ ಮೇಲೂ ನೆನ್ನೆಯಿಂದ ನಮ್ಮವರು ಕಣ್ಣಿಟ್ಟಿದ್ದಾರೆ ಅವರ ಮನೆ ಒಂದು ಕಾಲೋನಿಯಲ್ಲಿದೆ ಸುತ್ತಮುತ್ತ ಮನೆಗಳಿದೆ ಆದ್ರೆ ಅಲ್ಲಿಂದ ಅವರನ್ನೆತ್ತಾಕಿಕೊಂಡು ಬರುವುದು ಸುಲಭ.

ನಿಧಿ......ಇವತ್ತು ರಾತ್ರಿ ಅವರನ್ನವರ ಮನೆಯಲ್ಲೇ ವಿಚಾರಣೆ ಮಾಡಿ ನೋಡೋಣ ಮುಂದೇನು ಮಾಡೋದೆಂದು ಅಲ್ಲಿಯೇ ತೀರ್ಮಾನಿಸೋದು ಸರಿ.
* *
* *



........continue
 

Samar2154

Well-Known Member
2,614
1,685
159
Continue........


ಕೊಲ್ಕತ್ತಾ.......

ಬೆಂಗಳೂರಿನಿಂದ ವಿಮಾನದಲ್ಲಿ ಕೊಲ್ಕತ್ತಾ ತಲುಪಿದಾಗ ಇವರ ದಾರಿ ಕಾಯುತ್ತ ಏರ್ಪೋಟಿನಾಚೆ ರಕ್ಷಕರು ಸಿದ್ದರಾಗಿದ್ದರು. ಎಲ್ಲರೂ ಮೊದಲೇ ಬುಕ್ ಮಾಡಿಸಿದ್ದ ಹೋಟೆಲ್ಲಿಗೆ ತಲುಪಿ ಫ್ರೆಶ್ ಆದ ನಂತರ ಹನ್ನೆರಡರ ಹೊತ್ತಿಗೆ ವೈದ್ಯ ದಂಪತಿಗಳು ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯನ್ನು ತಲುಪಿ ಹೊರಗಡೆ ಅವರಿಗಾಗಿ ಕಾದು ಕುಳಿತರು. ಒಂದುವರೆ ಹೊತ್ತಿಗೆ.....

ರಾಣಾ.......ಅವರೇ ಯುವರಾಣಿ......ಎಂದು ಕೈ ತೋರಿಸಿದ ಕಡೆ ಎಲ್ಲರೂ ನೋಡಿದಾಗ 65ರ ವಯಸ್ಸಿನ ಇಬ್ಬರು ದಂಪತಿಗಳು ಆಸ್ಪತ್ರೆಯಿಂದ ನಗುನಗುತ್ತ ಹೊರಬಂದು ಕಾರನ್ನೇರಿ ಮನೆಯ ಕಡೆ ತೆರಳಿದರು. ಅವರನ್ನು ಹಿಂಬಾಲಿಸುತ್ತ ಮನೆ ಸುತ್ತಮುತ್ತಲ ವಾತಾವರಣ ಗಮನಿಸಿ ಇಂದು ರಾತ್ರಿಯೇ ಇಲ್ಲಿಗೆ ಬಂದು ಇವರ ಬಳಿ ತಂಗಿಯ ಬಗ್ಗೆ ವಿಚಾರಿಸುವುದೆಂದು ತೀರ್ಮಾನಿಸಲಾಯ್ತು.

ರಾತ್ರಿ ಹತ್ತು ಘಂಟೆಯ ಸಮಯ.......

( ವೈದ್ಯ ದಂಪತಿಗಳನ್ನು ಗಂಡ ಹೆಂಡತಿ ಎಂದು ಕರೆಯಲಾಗುತ್ತೆ ಇದ್ಯಾರಪ್ಪ ಅಂತ ಕನಫ್ಯೂಸ್ ಮಾಡಿಕೊಳ್ಬೇಡಿ )

ಡಾಕ್ಟರ್ ದಂಪತಿಗಳ ಮನೆಯ ಕಾಲಿಂಗ್ ಬೆಲ್ ಶಬ್ದಕ್ಕೆ ಇಷ್ಟು ರಾತ್ರಿಯಲ್ಯಾರು ಬಂದಿದ್ದೆಂದು ಗಂಡ ಬಾಗಿಲು ತೆಗೆದಾಗ ಆಚೆ ಐವರು ನಿಂತಿರುವುದನ್ನು ನೋಡಿ ತಬ್ಬಿಬ್ಬಾದನು.

ಸುಭಾಷ್.......ನಮಸ್ತೆ ಸರ್ ನಿಮ್ಜೊತೆ ಮಾತನಾಡ್ಬೇಕಿತ್ತು ನಾವು ಒಳಗೆ ಬರಬಹುದೇ.

ಗಂಡ........ನೀವ್ಯಾರು ಅಂತಲೇ ಗೊತ್ತಿಲ್ವಲ್ಲ ಇಷ್ಟೊತ್ತಿನಲ್ಲಿ ನಮ್ಮ ಮನೆಗ್ಯಾಕೆ ಬಂದಿರೋದು ?

ನಿಧಿ ಅವನನ್ನು ಪಕ್ಕಕ್ಕೆ ತಳ್ಳಿಕೊಂಡು ಒಳಬರುತ್ತ.......ಕಳ್ಳರ ಮನೆಗೆ ರಾತ್ರಿ ಸಮಯದಲ್ಲೇ ತಾನೇ ಬಂದರವರು ಸಿಗ್ತಾರೆ ಅದಕ್ಕೆ ನಾವೂ ರಾತ್ರಿಯೇ ಬಂದಿರೋದು ನಿಮ್ಮಂತ ಅಪಹರಣಕಾರರ ಮನೆಗೆ. ಎಲ್ಲಿ ನಿನ್ನೆಂಡ್ತಿ ?

ಹೆಂಡತಿ ರೂಮಿನಿಂದಾಚೆ ಬಂದು ಐವರು ಅಪರಿಚಿತರನ್ನು ಕಂಡು ಗಂಡನತ್ತ ಪ್ರಶ್ನಾರ್ಥಕವಾಗಿ ನೋಡಿದರೆ ಆತ ಕೂಡ ಇವರಾರೋ ಗೊತ್ತಿಲ್ಲವೆಂದನು. ಅವರೇನಾದರೂ ಪ್ರಶ್ನಿಸುವುದಕ್ಕೂ ಮುನ್ನ ಅಜಯ್ ಗಂಡನ ಹಣೆಗೆ ಗನ್ ಗುರಿಯಿಟ್ಟು ಇಬ್ಬರಿಗೂ ಸೋಫ ಮೇಲೆ ಕೂರುವಂತೆ ಆದೇಶಿಸಿದನು.

ಹೆಂಡತಿ ಭಯದಿಂದ.....ಯಾರಪ್ಪ ನೀವೆಲ್ಲ ? ನಮ್ಮೆಜಮಾನರ ಹಣೆಗ್ಯಾಕೆ ಗನ್ನಿಟ್ಟಿದ್ದೀರ ?

ಗಂಡ..........ನಿಮಗೇನು ಬೇಕೋ ಕೇಳಿ ಹಣ....ಒಡವೆ ಎಲ್ಲಾ ರೂಮಿನ ಬೀರುವಿನಲ್ಲಿದೆ ಏನಾದ್ರೂ ತೆಗೆದುಕೊಳ್ಳಿ.

ನಿಧಿ ವ್ಯಂಗ್ಯದಿಂದ ಮುಗುಳ್ನಕ್ಕು......ನನಗೆ ಹಣ ಕೊಡುವಷ್ಟು ಶ್ರೀಮಂತ ನೀನಿನ್ನೂ ಆಗಿಲ್ಲ. ಒಂದು ಪ್ರಶ್ನೆ ಕೇಳ್ತೀನಿ ನನಗೆ ಸತ್ಯ ಹೇಳ್ಬಿಡಿ ನಿಮ್ಮನ್ನೇನೂ ಮಾಡಲ್ಲ ಕನ್ನಡ ಮರೆತಿಲ್ವಲ್ಲ.

ಹೆಂಡತಿ.......ಏನದು ಕೇಳಮ್ಮ ಗೊತ್ತಿರೋದನ್ನೆಲ್ಲಾ ಹೇಳ್ತೀವಿ.

ಸುಭಾಷ್.....ನೀವಿಲ್ಲಿಗೆ ಬರುವುದಕ್ಕೂ ಮುಂಚೆ ಕಾಮಾಕ್ಷಿಪುರದ xxxx ಆಸ್ಪತ್ರೆಯಲ್ಲಿ ವೈದ್ಯರಾಗಿದ್ರಿ ಹೌದು ತಾನೇ.

ಹೆಂಡತಿ......ಹೌದು ನಿಜ ಆದರದು ತುಂಬ ಹಳೆಯ ಮಾತು...

ಸುಭಾಷ್......ಗೊತ್ತಿದೆ 16 ವರ್ಷದ ಹಿಂದೆ ಅಂತ ನೇರವಾಗಿ ವಿಷಯಕ್ಕೆ ಬರ್ತೀನಿ ಕಾಮಾಕ್ಷಿಪುರದಲ್ಲಿ ಸ್ವಂತ ಮನೆ ಕಟ್ಟಿಸಿದ್ದು ಅಲ್ಲೇ ವಾಸ ಮಾಡ್ತಿದ್ದ ನೀವು ಅದೆಲ್ಲವನ್ನೂ ಮಾರಾಟ ಮಾಡಿ ಇಲ್ಲಿಗೋಡಿ ಬರಲು ಕಾರಣವೇನು ?

ಹೆಂಡತಿ........ಓಡಿ ಬರುವಂತ ತಪ್ಪು ನಾವೇನು ಮಾಡಿದ್ವಿ ಇಲ್ಲಿ ನಮಗೆ ಒಳ್ಳೆಯ ಹುದ್ದೆ ಕೈತುಂಬ ಸಂಬಳ ಸಿಗ್ತಿತ್ತಲ್ಲ ಅದಕ್ಕಾಗಿ ನಾವಲ್ಲಿಂದಿಲ್ಲಿಗೆ ಬಂದ್ವಿ ಓಡಿ ಬಂದಿದ್ದಲ್ಲ.

ನಿಧಿ......ಅಣ್ಣ ಇವರಿಗೆ ಸುತ್ತಿಬಳಸಿ ಕೇಳಿದರೇನೂ ಪ್ರಯೋಜನ ಆಗಲ್ಲ ನೇರವಾಗಿಯೇ ಕೇಳ್ಬೇಕು. 16 ವರ್ಷದ ಹಿಂದೆ xxxxxx ದಿನದಂದು ನೀವಿಬ್ಬರೂ ಕರ್ತವ್ಯದಲ್ಲಿದ್ಭ ಆಸ್ಪತ್ರೆಯಿಂದ ಒಂದು ಹೆಣ್ಣು ಮಗುವನ್ನು ಅಪಹರಿಸಿ ತಂದ್ದಿದ್ರಲ್ಲ ಆ ಮಗು ಈಗೆಲ್ಲಿದೆ ?

ನಿಧಿ ಕೇಳಿದ ಪ್ರಶ್ನೆಗೆ ಗಂಡ ಹೆಂಡತಿ ಥರಥರ ನಡುಗಿದ್ದು ಒಬ್ಬರ ಮುಖವನ್ನೊಬ್ಬರು ನೋಡಿದರೆ ಸುಭಾಷ್.....ಮಗು ಅಪಹರಣ ಮಾಡಿದ ವಿಷಯ ಮರೆಯುವುದಕ್ಕೆ ಸಾಧ್ಯವಿಲ್ಲ ಅನ್ನೋದು ನಿಮಗೂ ಗೊತ್ತಿದೆ. ಏಕೆಂದರೆ ನೀವಿಬ್ರೂ ಮಾಡಿದ ಅಪರಾಧವೇ ಅಂತದ್ದು ಮಗುವೀಗ ಎಲ್ಲೆಂದು ಹೇಳಿ ಸಮಯವನ್ನು ವ್ಯರ್ಥ ಮಾಡೋದು ನನಗಿಷ್ಟವಿಲ್ಲ.

ಗಂಡ.....ನಾವು...ನಾವು ಅಂತಾ ಹೀನ ಕೆಲಸ ಮಾಡಿಲ್ಲ ನಿನಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ.

ನಿಧಿ.....xxxx ಹೆಸರಿನ ನರ್ಸ್ ನೆನಪಿರಬೇಕಲ್ವಾ ನೀವೇ ಅವರಿಗೆ ಒಂದು ಲಕ್ಷ ಕೊಟ್ಟಿದ್ರಲ್ಲ. ನೀವು ಮಾಡಿದ ತಪ್ಪನ್ನು ಮುಚ್ಚಿಡಲು ಕಾಮಾಕ್ಷಿಪುರದಿಂದಿಲ್ಲಿಗೆ ಓಡಿ ಬಂದ್ಬಿಟ್ರಿ ನನಗೂ ಈ ವಿಷಯ ಐದು ದಿನಗಳ ಹಿಂದಷ್ಟೆ ತಿಳಿಯಿತು. ಐದೇ ದಿನದಲ್ಲಿ ನೀವೆಲ್ಲಿ ಅಡಗಿದ್ದೀರೆಂದು ಕಂಡು ಹಿಡಿದವಳಿಗೆ ನಿಮ್ಮ ಮಗಳು ಅಳಿಯ ಎಲ್ಲಿದ್ದಾರೆಂದು ಕಂಡು ಹಿಡಿಯುವುದು ಕಷ್ಟವೇನಲ್ಲ. ನಾನಾಗೇ ನಿಮ್ಮ ಮಗಳನ್ನು ಕಂಡು ಹಿಡಿದ್ರೆ ಅವಳ ಹೆಣಕ್ಕೆ ಸಂಸ್ಕಾರವೂ ಆಗದಂತೆ ಬೀದಿ ನಾಯಿಗಳಿಗೆ ಆಹಾರವಾಗಿ ಹಾಕಿಸಿ ಬಿಡ್ತೀನಿ.

ಹೆಂಡತಿ ಭಯದಿಂದ........ನಾನೆಲ್ಲವನ್ನೂ ಹೇಳ್ತೀನಿ ಕಣಮ್ಮ ನನ್ನ ಮಗಳಿಗೇನೂ ಮಾಡ್ಬೇಡಿ. ನನ್ನ ಮಗಳು ಮದುವೆಯಾಗಿ ನಾಲ್ಕು ವರ್ಷಗಳಾಗಿದ್ರೂ ಅವಳಿಗೆ.......

ನಿಧಿ........ನಿಮ್ಮ ಕಂತೆ ಪುರಾಣ ಬೇಕಾಗಿಲ್ಲ ಆ ಮಗು ಎಲ್ಲಿದ್ದಾಳೆ ಅಷ್ಟನ್ನು ಮಾತ್ರ ಹೇಳು.

ಹೆಂಡತಿ........ಅಮೇರಿಕಾ....ಅಮೇರಿಕಾ..ಕ್ಯಾಲಿರ್ಫೋನಿಯಾ

ನಿಧಿ—ಸುಭಾಷ್ ಇಬ್ಬರೂ ತಿರುಗಿ ಗಿರೀಶನನ್ನೇ ನೋಡಿದರೆ....... ನಾನು ಹೇಳಿರಲಿಲ್ವ ಅಕ್ಕ ನನ್ನ ಆರನೇ ಇಂದ್ರೀಯ ಯಾವತ್ತೂ ನಿಜವನ್ನೇ ಸೂಚಿಸುತ್ತೆ ಅಂತ.

ಸುಭಾಷ್........ಅಲ್ಲಿನ ಅಡ್ರೆಸ್ ಮತ್ತು ಹುಡುಗಿ ಫೋಟೋ.

ಗಂಡ.......ಅಡ್ರೆಸ್ xxxxxxxx ಫೋಟೋ ಮೊಬೈಲಿನಲ್ಲಿದೆ.

ಗಿರೀಶ ಅಡ್ರೆಸ್ ಬರೆದುಕೊಂಡರೆ ಅವರಿಬ್ಬರ ಮೊಬೈಲುಗಳನ್ನು ಚೆಕ್ ಮಾಡಿದ ಸುಭಾಷ್......ಇದರಲ್ಲಿ ನಿಮ್ಮ ಮಗಳು ಅಳಿಯನ ಜೊತೆಗ್ಯಾರೋ ಹುಡುಗನ ಫೋಟೋ ಮಾತ್ರ ಇದೆ ಹುಡುಗಿಯ ಫೋಟೋ ಒಂದೂ ಇಲ್ವಲ್ಲ.

ಹೆಂಡತಿ.......ಅದು...ಅದು..

ನಿಧಿ ಕೋಪದಲ್ಲಿ.......ತಡವರಿಸದೆ ಬೇಗ ಬೊಗಳು....

ನಿಧಿಯ ಘರ್ಜನೆಗೆ ನಡುಗಿದ ಹೆಂಡತಿ.....ಅವನು ಮೊಮ್ಮಗ ಅವನಿಗೀಗ ಹನ್ನೆರಡು ವರ್ಷ ನನ್ನ ಮಗಳ ಸ್ವಂತ ಮಗ.

ನಿಧಿ.......ಮತ್ತಾ ಹುಡುಗಿ ಎಲ್ಲಿ ?

ಗಂಡ......ಅವಳೂ ನನ್ನ ಮಗಳ ಜೊತೆ ಅಮೇರಿಕಾದಲ್ಲಿಯೇ ವಾಸವಿದ್ದಾಳೆ ಫೋಟೋ ಇಲ್ಲ ಅಷ್ಟೆ.

ಸುಭಾಷ್......ನಿಧಿ ಇವರಿನ್ನೂ ಪೂರ್ತಿ ಸತ್ಯ ಹೇಳ್ತಿಲ್ಲ ನಾವಲ್ಲಿಗೆ ಹೋಗಿಯೇ ವಿಷಯವೇನೆಂದು ತಿಳಿದುಕೊಳ್ಬೇಕು.

ನಿಧಿ......ಹೌದಣ್ಣ ನೀವು ಹೇಳ್ತಿರೋದು ಸರಿಯಾಗಿದೆ.

ರಾಣಾ.......ಯುವರಾಣಿ ಇವರಿಬ್ಬರನ್ನಿಲ್ಲೇ ಬಿಡೋದು ಬೇಡ ನಾನಿವರನ್ನು ರಾಜಸ್ಥಾನಕ್ಕೆ ಕಳಿಸಿ ಬಿಡ್ತೀನಿ.

ಗಂಡ.......ನಮ್ಮನ್ನೇನೂ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ರಿ ಈಗೆಲ್ಲಿಗೋ ಕರೆದೊಯ್ಯುವ ಮಾತಾಡ್ತಿದ್ದೀರಲ್ಲ.

ಸುಭಾಷ್.......ಏನೂ ಮಾಡ್ತಿಲ್ವಲ್ಲ ಸರ್ ನಿಮ್ಮನ್ನಿಲ್ಲಿಂದ ಬೇರೆ ಕಡೆ ಕಳಿಸ್ತಿದ್ದೀವಷ್ಟೆ. ನಿಮ್ಮ ಮಗಳೇಗಿದ್ದಾಳೆಂದು ನಾವು ಹೋಗಿ ನೋಡಿಕೊಂಡು ಬರುವ ತನಕ ನೀವಿಬ್ರೂ ಅಲ್ಲೇ ಇರ್ಬೇಕು.

ಹೆಂಡತಿ......ನನ್ನ ಮಗಳಿಗೇನೂ ತೊಂದರೆ ಮಾಡ್ಬೇಡಿ ನಿಮ್ಮ ಕಾಲಿಗೆ ಬಿದ್ದು ಬೇಡಿಕೊಳ್ತೀನಿ.

ಗಿರೀಶ......ನಿನ್ನ ಮಗಳೆಂದ್ರೆ ತುಂಬ ಪ್ರೀತಿಯಲ್ವ ಅದಕ್ಕೆ ಬೇರೆ ತಾಯಿಯ ಮಗಳ ಅಪಹರಣ ಮಾಡ್ಕೊಂಡು ಬಂದಿದ್ದೀರ ನಿಮ್ಮ ಜನ್ಮಕ್ಕೆ ನಾಚಿಕೆಯಾಗ್ತಿಲ್ವಾ ?

ನಿಧಿ......ನನ್ನ ತಂಗಿಯನ್ನಾವತ್ತು ನೀವು ಅಪಹರಿಸಿ ತಂದಿದ್ದು ಈಗ ನನ್ನ ತಂಗಿ ಹೇಗಿದ್ದಾಳೆನ್ನುವ ಮೇಲೆ ನಿಮ್ಮ ಮಗಳ ಜೀವನ ನಿರ್ಧಾರವಾಗುತ್ತೆ.

ನಿಧಿಯ ಮಾತನ್ನು ಕೇಳಿ ಗಂಡ ಹೆಂಡತಿಯ ಮುಗ ಬಾಡಿದ್ದನ್ನು ಎಲ್ಲರೂ ಗಮನಿಸಿದರು. ಅವರಿಬ್ಬರನ್ನು ಮೂರ್ಛೆ ತಪ್ಪಿಸಿದ್ದು ರಕ್ಷಕರ ಜೊತೆ ಏರ್ಪೋಟಿಗೆ ರವಾನಿಸಲಾಯ್ತು. ನಿಧಿ ಕೂಡ ಅಣ್ಣ ತಮ್ಮನ ಜೊತೆ ಅದೇ ರಾತ್ರಿ ದೆಹಲಿಯತ್ತ ತೆರಳಿದಳು.
 
  • Like
Reactions: Dgraj

Samar2154

Well-Known Member
2,614
1,685
159
Update posted.
 
Last edited:

Tinderbird

New Member
36
18
23
Supeerrrrttt
 
Top